ಮಡಿಕೇರಿ: ತಲಕಾವೇರಿಯಲ್ಲಿ ಈ ಬಾರಿ ಪವಿತ್ರ ತೀರ್ಥೋದ್ಭವ ಅ. 17ರಂದು ಮಧ್ಯಾಹ್ನ 1.11ಕ್ಕೆ ಮಕರ ಲಗ್ನದಲ್ಲಿ ನಡೆಯಲಿದೆ. ಈ ಪುಣ್ಯ ಕ್ಷಣಕ್ಕೆ ಸಾಕ್ಷಿಯಾಗಲು ಮಾತೆ ಕಾವೇರಿಯ ಭಕ್ತರು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ, ಈ ಬಾರಿ ಹಗಲಿನ ವೇಳೆ ಮುಹೂರ್ತ ಕೂಡಿ ಬಂದಿರುವುದರಿಂದ ಭಕ್ತರ ಉತ್ಸಾಹ ಗರಿಗೆದರಿದೆ. ತೀರ್ಥೋದ್ಭವದ ಮುಹೂರ್ತ ವರ್ಷದಿಂದ ವರ್ಷಕ್ಕೆ ಸುಮಾರು 5.30ಗಂಟೆಯಷ್ಟು ಮುಂದಕ್ಕೆ ಹೋಗುತ್ತದೆ. ಕಳೆದ ವರ್ಷ ಮುಂಜಾನೆಯ 6.31ರ ಸುಮಾರಿಗೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಳು. ಅದಕ್ಕೂ ಹಿಂದಿನ ವರ್ಷ ತಡರಾತ್ರಿಯಲ್ಲಿ ಮುಹೂರ್ತ ಕೂಡಿ ಬಂದಿತ್ತು. 3-4 ವರ್ಷಕ್ಕೊಮ್ಮೆ ಹಗಲಿನಲ್ಲಿ ತೀರ್ಥೋದ್ಭವ ಮುಹೂರ್ತ ಬರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಸಾಮಾನ್ಯ. ಆದರೆ, ಕೊರೊನಾ ಕಾರಣಕ್ಕೆ ಈ ಬಾರಿಯೂ ಜಿಲ್ಲಾಡಳಿತ ಹಲವು ನಿರ್ಬಂಧಗಳನ್ನು ವಿಧಿಸಿರುವುದು ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರಮುಖರೂ ಇದಕ್ಕೆ ಧ್ವನಿಯಾಗಿದ್ದಾರೆ. ಈ ಸಂಬಂಧ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶವನ್ನು ಶಾಸಕ ಕೆ.ಜಿ.ಬೋಪಯ್ಯ ಕೂಡ ಪ್ರಶ್ನೆ ಮಾಡಿದ್ದಾರೆ. ಲಸಿಕೆ, ಆರ್ಟಿಪಿಸಿಆರ್ ಕಡ್ಡಾಯ ಅ. 17ರಂದು ಖಾಸಗಿ ವಾಹನಗಳು ಭಾಗಮಂಡಲ ತನಕ ಮಾತ್ರ ತೆರಳಲು ಅವಕಾಶವಿದೆ. ಭಾಗಮಂಡಲದಿಂದ ತಲಕಾವೇರಿಗೆ ನಡೆದೇ ತೆರಳಬೇಕು. ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಹೋಗುವವರು 72 ಗಂಟೆ ಅವಧಿಯ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿ ಪಡೆದಿರಬೇಕು. ಜೊತೆಗೆ ಒಂದು ಬಾರಿಯಾದರೂ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು. ಗುರುತಿನ ಚೀಟಿಯನ್ನೂ ಹೊಂದಿರಬೇಕು. ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಉಸ್ತುವಾರಿ ಸಚಿವ. ದರ್ಶನಕ್ಕೆ ಮುಕ್ತ ಅವಕಾಶ ನೀಡಿ ಕೊಡಗಿನ ಜನರಿಗೆ ಶ್ರದ್ಧಾ-ಭಕ್ತಿಯ ವಿಷಯ. ಈ ಬಾರಿ ಜಿಲ್ಲೆಯ ಭಕ್ತರಿಗೆ ತೀರ್ಥೋದ್ಭವ ದರ್ಶನಕ್ಕೆ ಮುಕ್ತ ಅವಕಾಶ ನೀಡಬೇಕು. ಜಾತ್ರಾ ಮಹೋತ್ಸವ ಸಿದ್ಧತೆ ಬಗ್ಗೆ ಅ. 7ರಂದು ನನ್ನ ಅಧ್ಯಕ್ಷತೆಯಲ್ಲಿ ಭಾಗಮಂಡಲದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೆ.ಜಿ.ಬೋಪಯ್ಯ, ವಿರಾಜಪೇಟೆ ಶಾಸಕ. ಕಟ್ಟುಪಾಡುಗಳ ಮನವರಿಕೆ ಮಾಡಿ ಪ್ರವಾಸಿಗರು ಬೇಕು, ಭಕ್ತರು ಬೇಡ ಎನ್ನುವ ಮನೋಭಾವ ಸರಿಯಲ್ಲ. ಒಂದು ತಿಂಗಳಿನಿಂದ ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಇವರಿಗಿಲ್ಲದ ನಿರ್ಬಂಧಗಳು ಕೊಡಗಿನ ಭಕ್ತರಿಗೆ ಯಾಕೆ? ಕಾವೇರಿ ತುಲಾ ಸಂಕ್ರಮಣದ ಕುರಿತು ಜಿಲ್ಲಾಉಸ್ತುವಾರಿ ಸಚಿವರು ಪ್ರಕಟಿಸಿರುವ ನಿರ್ಧಾರ ಗೊಂದಲದಿಂದ ಕೂಡಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲಿನ ಕಟ್ಟುಪಾಡುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಹರೀಶ್ ಜಿ.ಆಚಾರ್ಯ, ಜಿಲ್ಲಾಧ್ಯಕ್ಷ, ಪೀಪಲ್ ಮೂವ್ಮೆಂಟ್ಸ್ ಫಾರ್ ಹ್ಯೂಮನ್ ರೈಟ್ಸ್ ಕಾವೇರಿ ತಾಯಿ ದರ್ಶನಕ್ಕೆ ಅವಕಾಶ ನೀಡಿ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದೆ ತಡೆಯುವುದು ಸರಿಯಲ್ಲ. ನೈಜ ಕಾವೇರಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ರೀತಿ ಸಚಿವರು ಹೇಳಿಕೆ ನೀಡುವಾಗ ಶಾಸಕರು ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದರೆ ಇದರ ಹಿಂದೆ ಪಿತೂರಿ ಅಡಗಿರುವ ಬಗ್ಗೆ ಸಂಶಯವಿದೆ. ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಅಧ್ಯಕ್ಷ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಭಕ್ತರ ಹಕ್ಕು ಕಸಿದುಕೊಳ್ಳಬೇಡಿಪವಿತ್ರ ಕ್ಷೇತ್ರಗಳ ಮೇಲೆ ನಿಯಂತ್ರಣ ಹೇರುತ್ತಿರುವ ಆಡಳಿತ ವ್ಯವಸ್ಥೆ ಪಾಸಿಟಿವಿಟಿ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ಪ್ರವಾಸಿತಾಣಗಳನ್ನು ಮುಕ್ತಗೊಳಿಸಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ವರ್ಷಕ್ಕೆ ಒಂದು ಬಾರಿ ತಲಕಾವೇರಿಯಲ್ಲಿಘಟಿಸುವ ತೀರ್ಥೋದ್ಭವದ ಪವಿತ್ರ ಕ್ಷಣ ಕಣ್ತುಂಬಿಕೊಳ್ಳಲು ಅವಕಾಶ ನೀಡದಿರುವುದು ಭಕ್ತರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಪವನ್ ಪೆಮ್ಮಯ್ಯ, ಅಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ ಪ್ರವಾಸಿಗರಿಗೆ ಇಲ್ಲದ ನಿಮಯ ಭಕ್ತರಿಗೇಕೆ? ತಲಕಾವೇರಿಗೆ ವಾಹನ ನಿರ್ಬಂಧ, ಕೋವಿಡ್ ಟೆಸ್ಟ್ ವರದಿ ಸಲ್ಲಿಕೆ ಕಡ್ಡಾಯ...ಇಂತಹ ನಿಯಮಗಳ ಪಾಲನೆ ಅಸಾಧ್ಯ. ಪ್ರವಾಸಿಗರಿಗೆ ಇಲ್ಲದ ನಿಯಮ ಭಕ್ತರಿಗೆ ಯಾಕೆ? ಕಾವೇರಿ ತೀರ್ಥೋದ್ಭವದಂದು ಭಕ್ತರ ಮೇಲೆ ಸರಕಾರ, ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ. ಭಕ್ತರ ಧಾರ್ಮಿಕ ಭಾವನೆಗಳನ್ನು ಅಗೌರವಿಸಿರುವುದು ಖಂಡನೀಯ. ಎ.ಎಸ್. ಪೊನ್ನಣ್ಣ, ಹೈಕೋರ್ಟ್ ಹಿರಿಯ ವಕೀಲ ಯಾರ ಅಪ್ಪಣೆಯೂ ಬೇಕಿಲ್ಲ ಜಿಲ್ಲೆಯ ಶಾಸಕರ ಕುಮ್ಮಕ್ಕಿನಿಂದ ಜಿಲ್ಲಾಉಸ್ತುವಾರಿ ಸಚಿವರು ಕಾವೇರಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿನಿರ್ಧಾರಗಳನ್ನು ಪ್ರಕಟಿಸಿರುವುದು ಖಂಡನೀಯ. ಜಿಲ್ಲೆಯ ಭಕ್ತರಿಗೆ ನಿರ್ಬಂಧ ವಿಧಿಸಲು ಉಸ್ತುವಾರಿ ಸಚಿವರು ಯಾರು? ತಲಕಾವೇರಿಗೆ ಪ್ರವೇಶಿಸಲು ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಾಗಿಲ್ಲ. ಕೆ.ಪಿ. ಚಂದ್ರಕಲಾ, ಜಿ.ಪಂ. ಮಾಜಿ ಅಧ್ಯಕ್ಷೆ ಜನರ ತೀವ್ರ ವಿರೋಧ ಭಕ್ತರ ಭಾವನೆಗೆ ವಿರುದ್ಧವಾಗಿ ಜಿಲ್ಲಾಡಳಿತ ಈ ಬಾರಿಯೂ ನಿರ್ಧಾರ ತೆಗೆದುಕೊಂಡರೆ ಕೊಡಗಿನ ಜನರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಸರಿಯಲ್ಲ. ಕೊಡಗಿನ ಪವಿತ್ರ ಕಾವೇರಿ ತೀರ್ಥೋದ್ಭವ ವಿಷಯದಲ್ಲಿ ಜಿಲ್ಲಾಉಸ್ತುವಾರಿ ಸಚಿವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಧರ್ಮಜ ಉತ್ತಪ್ಪ, ಡಿಸಿಸಿ ಕಾರ್ಯಾಧ್ಯಕ್ಷ
from India & World News in Kannada | VK Polls https://ift.tt/2Yq2znh