
ಚಿಕ್ಕಬಳ್ಳಾಪುರ: ಚೇಳೂರು ಗಡಿನಾಡ ಭಾಗಕ್ಕೆ ಡಿಸಿಸಿ ಬ್ಯಾಂಕ್ ಕಲ್ಪವೃಕ್ಷ ಇದ್ದಂತೆ. ಈ ಕಲ್ಪವೃಕ್ಷವನ್ನು ಉಳಿಸಿ ಬೆಳೆಸ ಬೇಕಾದ ಜವಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಸಾಲ ಪಡೆದು ಮರುಪಾವತಿ ಮಾಡಿ ಈ ಬ್ಯಾಂಕ್ ಅನ್ನದ ಅಕ್ಷಯ ಪಾತ್ರ ಇದ್ದಂತೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಹೋಬಳಿಯ ಚಾಕವೇಲು ಕೃಷಿ ಪತ್ತಿನ ಸೇವಾ ಸಹಕಾರ ಸಂಘ ಏರ್ಪಡಿಸಿದ್ದ ಶೂನ್ಯ ಬಡ್ಡಿ ದರದ ಸಾಲ ವಿತರಣಾ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಬೆಳೆಯ ಬೇಕಾದರೆ ನಮ್ಮ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್ನಲ್ಲಿ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಏಕೆಂದರೆ ಬ್ಯಾಂಕ್ಗಳು ನಂಬಿಕೆ ಮೇಲೆ ಸಾಲ ನೀಡುತ್ತವೆ. ಆ ನಂಬಿಕೆಯನ್ನು ಮಹಿಳಾ ಗುಂಪುಗಳು ಉಳಿಸಿಕೊಳ್ಳಬೇಕು. 168 ಮಹಿಳಾ ಫಲಾನುಭವಿಗಳಿಗೆ 1,52,23,000 ರೂ. ಸಾಲ ನೀಡಲಾಗುತ್ತಿದೆ. ಈಗ ಪಡೆಯುತ್ತಿ ರುವ ಸಾಲವನ್ನು ಚಿನ್ನಾಭ ರಣ, ಬಟ್ಟೆಗಳ ಖರೀದಿಗೆ ಬಳಸದೆ ಹೈನುಗಾರಿಕೆಯ ಉದ್ದೇಶಕ್ಕಾಗಿ ಬಳಸಿ ನಿಮ್ಮ ಜೀವನ ಅಭಿವೃದ್ಧಿಪಡಿಸಿಕೊಳ್ಳ ಬೇಕು. ಬ್ಯಾಂಕು ಗಳು ನಿಮ್ಮನ್ನು ನಂಬಿ ಕೋಟ್ಯಂತರ ರೂ. ಸಾಲ ನೀಡುತ್ತಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ಗಳಿಗೆ ಮೋಸ ಮಾಡಬಾರದು ಎಂದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್.ವಿ. ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ರಾಮರೆಡ್ಡಿ ಮಾತನಾಡಿ, ಇಡೀ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಾಲ ನೀಡಿರುವುದು ಕೋಲಾರ ಡಿಸಿಸಿ ಬ್ಯಾಂಕ್ ಮಾತ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಯಾವತ್ತೂ ಡಿಸಿಸಿ ಬ್ಯಾಂಕ್ ನಿಮ್ಮ ಪರವಾಗಿ ನಿಲ್ಲುತ್ತದೆ. ನೀವು ಸಹ ಈ ಬ್ಯಾಂಕ್ಗೆ ಸಹಕಾರ ನೀಡಿದರೆ ಮಾತ್ರ ಮಹಿಳೆಯರಿಗೆ ಹೆಚ್ಚು ಸಾಲ ನೀಡಬಹುದು. ಮಹಿಳೆಯರು ಸಾಲ ಮರುಪಾವತಿ ಉತ್ತಮವಾಗಿರು ತ್ತದೆ. ಪುರುಷರಿಗೆ ಸಾಲ ನೀಡಿದರೆ ನಿರ್ಲಕ್ಷ್ಯ ಮಾಡುತ್ತಾರೆ. ಅದಕ್ಕಾಗಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಲಾಗುತ್ತಿದೆ. ಸಾಲ ಮನ್ನಾ ಆಗುತ್ತದೆ, ಸಾಲ ಕಟ್ಟಬೇಡಿ ಎಂಬ ಪುರುಷರ ಅಪಪ್ರಚಾರಕ್ಕೆ ಮರಳಾ ಗಬೇಡಿ ಎಂದರು. ಈ ಸಂದರ್ಭದಲ್ಲಿ ಚಾಕವೇಲು ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ. ಶ್ರೀರಾಮರೆಡ್ಡಿ, ನಿರ್ದೇಶಕರು, ತಾಪಂ ಮಾಜಿ ಸದಸ್ಯರಾದ ಕೆ.ಆರ್. ಸುಧಾಕರ್ರೆಡ್ಡಿ ಕೆಡಿಪಿ ಮಾಜಿ ಸದಸ್ಯ ಅಮರನಾಥರೆಡ್ಡಿ, ಕಾಂಗ್ರಸ್ ಮುಖಂಡ ರಾದ ಮಂತ್ರಾಲ ನಾರಾಯಣಸ್ವಾಮಿ, ಸೋಮಶೇಖರರೆಡ್ಡಿ, ಕೆ.ವಿ. ಶೇಖರ ರೆಡ್ಡಿ, ಕೆ.ವಿ. ಭಾಸ್ಕರ್ರೆಡ್ಡಿ, ಸ್ವಸಹಾಯ ಸಂಘಗಳ ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
from India & World News in Kannada | VK Polls https://ift.tt/3in94hC