ದುಬೈ: ಶುಕ್ರವಾರ ರಾತ್ರಿ ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅವರ ನಿರ್ಣಾಯಕ ಕ್ಯಾಚ್ ಅನ್ನು ಮೂರನೇ ಅಂಪೈರ್ ನೀಡಿದ ನಾಟೌಟ್ ತೀರ್ಪಿನ ವಿರುದ್ಧ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಬೇಸರ ಹೊರ ಹಾಕಿದ್ದಾರೆ. ಅಂದಹಾಗೆ 166 ರನ್ ಗುರಿ ಹಿಂಬಾಲಿಸಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೊನೆಯ ಎರಡು ಓವರ್ಗಳಿಗೆ 15 ರನ್ ಅಗತ್ಯವಿತ್ತು. ಈ ವೇಳೆ 19ನೇ ಓವರ್ನ ಮೊದಲನೇ ಎಸೆತದಲ್ಲಿ ಕೆ.ಎಲ್ ರಾಹುಲ್ ಬೌಂಡರಿ ಗಳಿಸಿದ್ದರು. ನಂತರ, ಎರಡನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಶಿವಂ ಮಾವಿ ಎಸೆತದಲ್ಲಿ ರಾಹುಲ್ ಮಿಡ್ ವಿಕೆಟ್ ಕಡೆ ಹುಕ್ ಶಾಟ್ ಹೊಡೆದಿದ್ದರು. ಈ ವೇಳೆ ಓಡಿ ಬಂದ ರಾಹುಲ್ ತ್ರಿಪಾಠಿ ನಿರ್ಣಾಯಕ ಡೈವಿಂಗ್ ಕ್ಯಾಚ್ ಪಡೆದಿದ್ದರು. ಇದರಿಂದ ಕೆಕೆಆರ್ ಆಟಗಾರರು ಸಂಭ್ರಮಿಸುತ್ತಿದ್ದರು. ಆದರೆ, ಆನ್ ಫೀಲ್ಡ್ ಅಂಪೈರ್, ಈ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ವರ್ಗಾಯಿಸಿದರು. ಆದರೆ, ವಿಡಿಯೋವನ್ನು ಹಲವು ಬಾರಿ ಪರಿಶೀಲಿಸಿದ ಟಿವಿ ಅಂಪೈರ್ ನಾಟೌಟ್ ತೀರ್ಪು ಪ್ರಕಟಿಸಿದರು. ಒಂದು ವೇಳೆ ಕೆ.ಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಏಕೆಂದರೆ, ಇದೇ ಓವರ್ನಲ್ಲಿ ರಾಹುಲ್ ಸಿಂಗಲ್ ಹಾಗೂ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಆದರೆ, 20ನೇ ಓವರ್ ಎರಡನೇ ಎಸೆತದಲ್ಲಿ ಪಂಜಾಬ್ ನಾಯಕ, ವೆಂಕಟೇಶ್ ಅಯ್ಯರ್ಗೆ ಔಟಾಗಿದ್ದರು. ನಂತರ, ಶಾರೂಖ್ ಖಾನ್ ಸಿಕ್ಸರ್ ಸಿಡಿಸಿ ಪಂಜಾಬ್ಗೆ ಗೆಲುವು ತಂದುಕೊಟ್ಟಿದ್ದರು. ಕೆ.ಎಲ್ ರಾಹುಲ್ ಅವರ ನಿರ್ಣಾಯಕ ಕ್ಯಾಚ್ ಅನ್ನು ಮೂರನೇ ಅಂಪೈರ್ ನಾಟೌಟ್ ನೀಡಿದ್ದರಿಂದ ಬೇಸರ ಹೊರಹಾಕಿದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್, "ನನ್ನ ಜೀವನದಲ್ಲಿ ನೋಡಿದ ಮೂರನೇ ಅಂಪೈರ್ನ ಅತ್ಯಂತ ಕೆಟ್ಟ ತೀರ್ಪು ಇದು," ಎಂದು ಪೋಸ್ಟ್ ಮ್ಯಾಚ್ ಶೋನಲ್ಲಿ ಬೇಸರ ಹೊರಹಾಕಿದ್ದಾರೆ. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ಗೌತಮ್ ಗಂಭೀರ್, "ಇದು ನಿಜಕ್ಕೂ ಆಘಾತಕಾರಿಯಾಗಿದೆ. ಅವರು ರೀಪ್ಲೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡಬಾರದಿತ್ತು. ಒಂದು ವೇಳೆ ಕೆ.ಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಐಪಿಎಲ್ ಟೂರ್ನಿಯಲ್ಲಿ ಇಂತಹ ಆಘಾತಕಾರಿ ಸಂಗತಿ ಇರಬಾರದು," ಎಂದು ಹೇಳಿದ್ದಾರೆ. ರಾಹುಲ್ ತ್ರಿಪಾಠಿ ಪಡೆದಿದ್ದ ಕೆಎಲ್ ರಾಹುಲ್ ಅವರ ಕಠಿಣ ಕ್ಯಾಚ್ ಅನ್ನು ಮೂರನೇ ಅಂಪೈರ್ ನಾಟೌಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಗನ್, "ನೈಜ ಸಮಯದಲ್ಲಿ ಇದು ಔಟ್ ಎಂದು ನನಗೆ ಅನಿಸುತ್ತಿತ್ತು. ನಿಸ್ಸಂಶಯವಾಗಿ ಸಂಗತಿಗಳನ್ನು ನಿಧಾನಗೊಳಿಸಿದಾಗ ಮತ್ತು ಅದನ್ನು ವಿಶ್ಲೇಷಿಸಿದಾಗ ಮೂರನೇ ಅಂಪೈರ್ ಬೇರೆ ರೀತಿಯಲ್ಲಿ ಯೋಚಿಸಿದ್ದರು ಹಾಗೂ ಅವರ ನಿರ್ಧಾರವನ್ನೇ ಅಂತಿಮಗೊಳಿಸಲಾಗಿದೆ. ಆದರೆ, ಈ ವಿಕೆಟ್ ನಮಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು," ಎಂದು ತಿಳಿಸಿದರು. ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ಸೋಲು ಅನುಭವಿಸಿದ ಹೊರತಾಗಿಯೂ ಪ್ಲೇ ಆಫ್ಸ್ ಆಸೆಯನ್ನು ಜೀವಂತವಾಗಿದೆ. ಆದರೆ, ಇನ್ನುಳಿದ ಎಲ್ಲಾ ಎರಡೂ ಪಂದ್ಯಗಳಲ್ಲಿ ಜಯ ಗಳಿಸಬೇಕಷ್ಟೆ. "ಯುಎಇ ಚರಣದಲ್ಲಿ ನಾವು ಶ್ರೇಷ್ಠ ಪ್ರದರ್ಶನವನ್ನು ತೋರಿದ್ದೇವೆ ಹಾಗೂ ಶುಕ್ರವಾರ ರಾತ್ರಿಯ ಪಂದ್ಯದಿಂದಲೂ ನಾವು ಪಾಸಿಟಿವ್ ಅನ್ನು ಪಡೆಯುವ ಅಗತ್ಯವಿದೆ. ನಮಗೆ ಇನ್ನೂ ಎರಡು ಪಂದ್ಯಗಳಿದ್ದು, ಕಠಿಣ ಹೋರಾಟ ನಡೆಸುತ್ತೇವೆ ಹಾಗೂ ಪ್ಲೇ ಆಫ್ಸ್ಗೆ ಅರ್ಹತೆ ಪಡೆದುಕೊಳ್ಳುತ್ತೇವೆ," ಎಂದು ಐಯಾನ್ ಮಾರ್ಗನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3A3CW8L