ವೈದ್ಯಕೀಯ ವ್ಯವಸ್ಥೆಗೆ ಶೀಘ್ರ ಚಾಟಿ; ಮೆಡಿಕಲ್‌ ಅವ್ಯವಸ್ಥೆ ಸರಿಪಡಿಸಲು ಆರೋಗ್ಯ ಇಲಾಖೆಗೆ 15 ದಿನಗಳ ಗಡುವು!

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್‌, ಶಾಪ್‌, ನರ್ಸಿಂಗ್‌ ಹೋಮ್‌ಗಳ ಅವ್ಯವಸ್ಥೆಗಳ ಕುರಿತಾಗಿ ಸೆ.18ರಂದು ವಿಕ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಜತೆಗೆ, ಆ ಬಳಿಕ ಕರವೇ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಈ ಬಗ್ಗೆ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸಿರುವ ಜಿಪಂ ಜಿಲ್ಲಾಆರೋಗ್ಯ ಇಲಾಖೆಗೆ 15 ದಿನಗಳೊಳಗೆ ವೈದ್ಯಕೀಯ ವಲಯದ ದುಸ್ಥಿತಿ ಬಗ್ಗೆ ವಿಶೇಷ ತನಿಖಾ ತಂಡದಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಗಡುವು ನೀಡಲಾಗಿದೆ. ಜತೆಗೆ, ನಿಯಮಗಳನ್ನು ಪಾಲಿಸದೆ, ಜನರ ಆರೋಗ್ಯ ದುಷ್ಟರಿಣಾಮಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ. ವಿಶೇಷ ತಂಡಕ್ಕೆ ಸೂಚನೆಜಿಲ್ಲೆಯಲ್ಲಿನ ವೈದ್ಯಕೀಯ ಅವಸ್ಥೆ ಕುರಿತಾಗಿ 4 ತಾಲೂಕುಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಲು ಪ್ರತ್ಯೇಕ ತಂಡವನ್ನು ರಚಿಸಲು ಸೂಚಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಪವಿಭಾಗಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌, ತಾಪಂ ಕಾರ್ಯನಿರ್ವಹಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಧಿಕಾರಿ ಒಳಗೊಂಡಂತೆ ಪ್ರತ್ಯೇಕ ತನಿಖಾ ತಂಡ ರಚಿಸಿ, ವರದಿ ಸಲ್ಲಿಸಲು ಸೂಚಿಸಲಾಗಿದೆ. ಒಪ್ಪಂದಗಳಿಗೆ ಬೀಳಲಿ ಬ್ರೇಕ್‌ ಖಾಸಗಿ ಕ್ಲಿನಿಕ್‌ ದಂಧೆ ಒಂದು ಕಡೆಯಾದರೆ ಸರಕಾರಿ ಆಸ್ಪತ್ರೆ ವೈದ್ಯರ ಒಳ ಒಪ್ಪಂದಗಳು ಮತ್ತೊಂದು ಕಡೆ ಜನರಿಗೆ ತೀವ್ರ ಸ್ವರೂಪದಲ್ಲಿ ಕಾಡುತ್ತಿವೆ. ಸರಕಾರಿ ಆಸ್ಪತ್ರೆ ವೈದ್ಯರಲ್ಲಿ ಕೆಲವರು ಜನೌಷಧ ಮಳಿಗೆಯಲ್ಲಿ ಸಿಗಬಹುದಾದ ಕಡಿಮೆ ದರದ ಔಷಧಗಳನ್ನು ಹೊರತುಪಡಿಸಿ, ಖಾಸಗಿ ಮೆಡಿಕಲ್‌ ಔಷಧಗಳನ್ನೇ ಸೂಚಿಸುತ್ತಿರುವ ಉದಾಹರಣೆಗಳಿವೆ. ದೊಡ್ಡಬಳ್ಳಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಟ್ಟಡದಲ್ಲಿನ ಜನೌಷಧ ಮಳಿಗೆ ಬಗ್ಗೆ ಅನೇಕ ರೋಗಿಗಳಿಗೆ ಮಾಹಿತಿಯೇ ಇಲ್ಲದಂತಾಗಿದ್ದು, ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪ್ರಚಾರ ನೀಡಬೇಕಿದೆ. ಜತೆಗೆ, ವೈದ್ಯರು ಜನೌಷಧ ಮಳಿಗೆಗೆ ಹೆಚ್ಚಿನ ಮನ್ನಣೆ ನೀಡಬೇಕಾದ ಅಗತ್ಯವಿದೆ. ಆದೇಶ ಅಕ್ರಮಕ್ಕೆ ಹಾದಿಯಾಗದಿರಲಿಆರೋಗ್ಯ ಇಲಾಖೆಯಲ್ಲಿ ಕ್ಲಿನಿಕ್‌, ಡಯಾಲಿಸಿಸ್‌ ಕೇಂದ್ರಗಳು ಸೇರಿದಂತೆ ಯಾವುದೇ ವೈದ್ಯಕೀಯ ವಲಯದ ಪ್ರಗತಿಗೆ ಸಂಬಂಧಿಸಿದಂತೆ ಪರವಾನಗಿಗಳು ಬೇಕೆಂದರೆ ಕೆಲ ಸಿಬ್ಬಂದಿ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆನ್ನುವ ಆರೋಪಗಳಿವೆ. ಹೀಗಾಗಿ, ಪ್ರಸ್ತುತ ಜಿಪಂ ಆದೇಶವನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಸಿಬ್ಬಂದಿ ನಕಲಿ ಕ್ಲಿನಿಕ್‌ಗಳಿಂದ ಹಣಕ್ಕೆ ಬೇಡಿಕೆಯಿಡುವ ಸಾಧ್ಯತೆಗಳಿದ್ದು, ಜಿಪಂ ಅಧಿಕಾರಿಗಳು ಗಮನ ಹರಿಸಬೇಕಿದೆ. ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್‌, ಮೆಡಿಕಲ್‌ ಶಾಪ್‌ ಅವ್ಯವಸ್ಥೆ ಬದಲಿಸುವಂತೆ ನಡೆಸಿದ ಪ್ರತಿಭಟನೆಗೆ ಜಿಪಂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಇನ್ನಾದರು ಎಚ್ಚೆತ್ತುಕೊಂಡು ಶೀಘ್ರ ವೈದ್ಯಕೀಯ ವಲಯದ ಈ ಅವ್ಯವಸ್ಥೆಯನ್ನು ಬದಲಿಸಿದರೆ ಜನರಿಗೆ ಅನುಕೂಲವಾಗಲಿದೆ. ರವಿ ರಾಜಘಟ್ಟ, ಕರವೇ ಹೋರಾಟಗಾರ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್‌ಗಳ ಪರಿಶೀಲನೆಗೆಂದು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಶೀಘ್ರ ಜಿಲ್ಲೆಯಾದ್ಯಂತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಡಾ.ತಿಪ್ಪೇಸ್ವಾಮಿ ಡಿಎಚ್‌ಒ, ಬೆಂ.ಗ್ರಾ. ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್‌ಗಳು, ಮೆಡಿಕಲ್‌ ಶಾಪ್‌ ಅವ್ಯವಸ್ಥೆ ಸೇರಿದಂತೆ ದೊಡ್ಡಬಳ್ಳಾಪುರದ ಜನೌಷಧಿ ಮಳಿಗೆ ಸಂಬಂಧಿಸಿದಂತೆ ಪರಿಶೀಲನೆ ಮತ್ತು ವರದಿ ನೀಡಲು ಆರೋಗ್ಯ ಇಲಾಖೆಗೆ 15 ದಿನಗಳ ಗಡುವು ನೀಡಲಾಗಿದ್ದು, ನಿಯಮ ಬಾಹಿರವಾಗಿ ಜನರಿಗೆ ಸಮಸ್ಯೆ ತಂದೊಡ್ಡುವವರ ವಿರುದ್ಧ ಖಚಿತವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಂ.ಆರ್‌.ರವಿಕುಮಾರ್‌ ಸಿಇಒ, ಜಿಪಂ


from India & World News in Kannada | VK Polls https://ift.tt/3DcRhl6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...