ರಸ್ತೆ ಅಗೆಯಲು ಹಲವು ನೆಪ, ಮುಚ್ಚೋಕಾಗಲ್ಲ ಅಂದ್ರೆ ಹೆಂಗಪ್ಪಾ? ಜನರ ಸುರಕ್ಷತೆ ಬಗ್ಗೆ ಇಲ್ಲ ಕಿಂಚಿತ್‌ ಕಾಳಜಿ!

ರವಿಕಿರಣ್‌ ವಿ ರಾಮನಗರ: ಹೆಸರಿಗೆ ಜಿಲ್ಲಾ ಕೇಂದ್ರ. ಬೆಂಗಳೂರು- ಮೈಸೂರು ಹೆದ್ದಾರಿ ನಗರದ ಮಧ್ಯೆ ಹಾದು ಹೋಗಿದೆ. ಪ್ರಮುಖ ರಸ್ತೆಗಳನ್ನು ನೋಡಿ ಪರವಾಗಿಲ್ಲ ಎಂದು ಅಂದುಕೊಂಡರೆ ನಿಮ್ಮಷ್ಟು ಮುಗ್ಧರು ಮತ್ತೊಬ್ಬರಿಲ್ಲ. ನಗರದ ರಸ್ತೆಯ ನೈಜ ದರ್ಶನ ಆಗಬೇಕಾದರೆ ಗಲ್ಲಿಗಳಿಗೆ ನುಗ್ಗಬೇಕು. ಬಡಾವಣೆ ಹಾಗೂ ಗಲ್ಲಿ ರಸ್ತೆಗಳನ್ನು ನೋಡಿದರೆ ಯಾವುದೋ ಕುಗ್ಗಾಮ ಹೊಕ್ಕ ಅನುಭವವಾಗದಿರದು. ರಸ್ತೆಗಳೋ, ಗಣಿ ಪ್ರದೇಶಗಳೋ ಎಂಬ ಅನುಮಾನ ಬಾರದಿರದು. ರಸ್ತೆಗಳ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಕಚ್ಛಾ ರಸ್ತೆಗಳದ್ದೇ ಕಾರುಬಾರು:ರಾಮನಗರ ಹೇಳಿಕೇಳಿ ಕೃಷಿ ಪ್ರಧಾನ ತಾಲೂಕು. ಜೊತೆಗೆ ಇಲ್ಲಿ ಕೈಗಾರಿಕೆ ಪ್ರದೇಶವೂ ಇದೆ. ಹೀಗಾಗಿ ಕೃಷ್ಯುತ್ಪನ್ನಗಳು ಹಾಗೂ ಕೈಗಾರಿಕೆ ಉತ್ಪನ್ನಗಳನ್ನು ಸಾಗಿಸಲು ಉತ್ತಮ ರಸ್ತೆಯ ಅಗತ್ಯವಿದೆ. ಸರಕುಗಳ ಶೀಘ್ರ ರವಾನೆಯಾದರೆ ಮಾತ್ರ ಉದ್ದೇಶ ಸಾರ್ಥಕವಾಗುತ್ತದೆ. ಆದರೆ, ಇಷ್ಟು ಸಣ್ಣ ವಿಷಯವೂ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲವೇನೋ ಎಂಬ ಅನುಮಾನ ರಸ್ತೆಗಳನ್ನು ನೋಡಿದರೆ ಕಾಡುತ್ತದೆ. ರಾಮನಗರ ತಾಲೂಕಿನಾದ್ಯಂತ ಕಚ್ಛಾರಸ್ತೆಗಳದ್ದೇ ಕಾರುಬಾರು. ತೇಪೆ ಹಾಕಿ ವಂಚಿಸಿದರು:ಹದಗೆಟ್ಟ ರಸ್ತೆಗಳಿಂದ ರೋಸಿದ್ದ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಹೋದಲ್ಲಿ ಬಂದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ಪಾರಾಗಲು ಒಂದಿಷ್ಟು ರಸ್ತೆಗಳಿಗೆ ತೇಪೆ ಹಾಕುವ ಕಾರ‍್ಯ ಮಾಡಲಾಗಿತ್ತು. ರಸ್ತೆಗೆ ಹಾಕಿದ್ದ ತೇಪೆ ಮರುಕ್ಷಣವೇ ಕಿತ್ತು ಹೋಗಿದೆ. ಹೀಗಾಗಿ ಹುಸಣಹಳ್ಳಿ, ತುಂಬೇನಹಳ್ಳಿ, ನಾಗೋಹಳ್ಳಿ, ವಡ್ಡರ ದೊಡ್ಡಿ ಸೇರಿದಂತೆ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಲಿಸುವ ರಸ್ತೆ ಅಧ್ವಾನಗೊಂಡಿವೆ. ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಷ್ಟೇ ಚೆನ್ನಾಗಿವೆ. ಇದು ಹೇಗಾಗಿದೆ ಎಂದರೆ, ನೀಟಾಗಿ ಡ್ರೆಸ್‌ ಮಾಡಿಕೊಳ್ಳುವ ಬದಲು ಮುಖಕ್ಕಷ್ಟೇ ಪೌಡರ್‌ ಹಚ್ಚಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದಂತಿದೆ. ನೆಪ ಹೇಳಲು ನೂರು ವಿಷಯ:ರಸ್ತೆ ಹಾಳಾಗಿದ್ದೇಕೆ ಎಂದು ನೆಪ ಹೇಳಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೂರೆಂಟು ಕಾರಣ ಸಿಗುತ್ತದೆ. ನೀರು ಸಂಪರ್ಕ ಕಲ್ಪಿಸಲು, ಭೂಗತ ಕೇಬಲ್‌ ಅಳವಡಿಸಲು ರಸ್ತೆ ಅಗೆಯುವುದು ಅನಿವಾರ‍್ಯ. ಅಭಿವೃದ್ಧಿಗಾಗಿ ಒಂದಿಷ್ಟು ತ್ಯಾಗ ಅನಿವಾರ‍್ಯ ಎಂದು ರಸ್ತೆ ಅವ್ಯವಸ್ಥೆ ಬಗ್ಗೆ ಕೇಳಲು ಹೋದವರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪದೇಶ ನೀಡಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ಜನರಿಗೆ ಉತ್ತಮ ರಸ್ತೆ ಒದಗಿಸುವುದು ತಮ್ಮ ಕರ್ತವ್ಯ ಎಂಬ ಮೂಲ ವಿಷಯವನ್ನೇ ಮರೆತಿದ್ದಾರೆ. ಪ್ರತಿಭಟನೆ ನಡೆದಿತ್ತು:ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಹಾಗೂ ನಾಗೋಹಳ್ಳಿ ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದ ಕಾರಣ, ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರು, ರಸ್ತೆಯಲ್ಲಿಯೇ ನಾಟಿ ಮಾಡುವ ಮೂಲಕ ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ ಆಡಳಿತ ವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಇಂತಹ ಪ್ರತಿಭಟನೆಗಳಿಗೆ ಲೆಕ್ಕವೇ ಇಲ್ಲ. ಆದರೆ, ದಪ್ಪಚರ್ಮದ ಜನರಿಗೆ ಇದರ ಬಿಸಿ ತಟ್ಟಿಲ್ಲ.


from India & World News in Kannada | VK Polls https://ift.tt/2ZuVGRU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...