ಅಬು ಧಾಬಿ: ವಿರುದ್ಧ ಉತ್ತಮ ಆರಂಭದ ಲಾಭವನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆಂದು ನಾಯಕ ರೋಹಿತ್ ಶರ್ಮಾ 7 ವಿಕೆಟ್ಗಳ ಸೋಲಿನ ಬಳಿಕ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪರಾಭವದೊಂದಿಗೆ ಮುಂಬೈ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಗುರುವಾರ ಇಲ್ಲಿನ ಶೇಖ್ ಜಾವೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 56 ಎಸೆತಗಳಿಗೆ 78 ರನ್ ಗಳಿಸುವ ಮೂಲಕ ಭರ್ಜರಿ ಅಡಿಪಾಯ ಹಾಕಿಕೊಟ್ಟಿತ್ತು. ಆದರೆ, ರೋಹಿತ್ 33 ರನ್ಗೆ ಔಟಾಗುತ್ತಿದ್ದಂತೆ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಇದರ ಹೊರತಾಗಿಯೂ 42 ಎಸೆತಗಳಲ್ಲಿ 55 ರನ್ ಚೆಚ್ಚಿದ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ 155 ರನ್ ಕಲೆ ಹಾಕಲು ನೆರವಾಗಿದ್ದರು. ಆದರೆ, ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ಕೇವಲ 15.1 ಓವರ್ಗಳಿಗೆ ಸುಲಭವಾಗಿ 159 ರನ್ ಗಳಿಸಿ ಗೆಲುವಿನ ದಡ ಸೇರಿತು. ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಕ್ರಮವಾಗಿ 53 ಹಾಗೂ 74 ರನ್ ಸಿಡಿಸಿ ಕಕೆಆರ್ ಗೆಲುವಿಗೆ ನೆರವಾದರು. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, "ಕೆಲ ಜಾಗಗಳಲ್ಲಿ ನಾವು ತಪ್ಪು ತಿದ್ದಿಕೊಳ್ಳಬೇಕಾಗಿದೆ. ಉತ್ತಮ ಆರಂಭದ ಹೊರತಾಗಿಯೂ ಬ್ಯಾಕೆಂಡ್ನಲ್ಲಿ ನಮ್ಮ ಆಟ ಸರಿ ಇರಲಿಲ್ಲ. ಆದರೆ, ಇಲ್ಲಿನ ಪಿಚ್ ಅತ್ಯುತ್ತಮವಾಗಿತ್ತು. ಅಂದಹಾಗೆ ಉತ್ತಮ ಆರಂಭದ ಲಾಭವನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಸ್ಟಂಪ್ಸ್ ಮೇಲೆ ಇರುವ ಬಗ್ಗೆ ಹಾಗೂ ಬ್ಯಾಟ್ಸ್ಮನ್ಗಳು ಅವಕಾಶಗಳನ್ನು ಪಡೆದುಕೊಳ್ಳುವ ಬಗ್ಗೆ ನಾವು ಮಾತನಾಡಿದ್ದೆವು. ಆದರೆ, ಇದು ನಮ್ಮ ಪಾಲಿಗೆ ವರ್ಕ್ಔಟ್ ಆಗಲಿಲ್ಲ. ಇಂತಹ ಸಂಗತಿಗಳು ನಡೆಯುವುದು ಸಾಮಾನ್ಯ, ಆದರೆ, ಈ ಬಗ್ಗೆ ನಾನು ಜಾಸ್ತಿ ಚಿಂತಿಸುವುದಿಲ್ಲ ಹಾಗೂ ಮುಂದಿನ ಪಂದ್ಯಗಳ ಕಡೆ ಗಮನಹರಿಸುತ್ತೇನೆ," ಎಂದು ಹೇಳಿದ್ದಾರೆ. ಆರಂಭಿಕ ಜತೆಯಾಟದ ಬಳಿಕ ಮುಂಬೈ ಇಂಡಿಯನ್ಸ್ಗೆ ಹೇಳಿಕೊಳ್ಳುವಂತಹ ಪಾಲುದಾರಿಕೆ ಸಿಕ್ಕಿರಲಿಲ್ಲ. ಆದರೆ, ಒಂದು ಹಂತದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಕೈರಾನ್ ಪೊಲಾರ್ಡ್ ಹಾಗೂ ಕೃಣಾಲ್ ಪಾಂಡ್ಯ ಜೋಡಿ 18 ಎಸೆತಗಳಿಗೆ 30 ರನ್ ಜೊತೆಯಾಟವಾಡಿತ್ತು. ಆದರೆ, ಮುಂಬೈ ಇಂಡಿಯನ್ಸ್ ದೊಡ್ಡ ಮೊತ್ತ ಕಲೆಹಾಕಲು ಇದು ಸಾಕಾಗಲಿಲ್ಲ. "ಕ್ರಿಕೆಟ್ನ ಮೂಲ ಸಂಗತಿ ಏನೆಂದರೆ ಸಣ್ಣ-ಸಣ್ಣ ಜೊತೆಯಾಟವಾಡುವುದು. ಆರಂಭಿಕ ವಿಕೆಟ್ಗೆ ಉತ್ತಮ ಜೊತೆಯಾಟ ಮೂಡಿ ಬಂದ ಬಳಿಕ, ನಮಗೆ ಸಣ್ಣ-ಸಣ್ಣ ಜೊತೆಯಾಟ ಲಭಿಸಿತ್ತು. ಆದರೆ, ನಿಯಮಿತವಾಗಿ ವಿಕೆಟ್ ಉರುಳುತ್ತಿದ್ದರಿಂದ ನಮಗೆ ಸ್ವಲ್ಪ ಹಿನ್ನಡೆಯಾಯಿತು. ಇಂತಹ ಸನ್ನಿವೇಶದಲ್ಲಿ ಹೊಸ ಬ್ಯಾಟ್ಸ್ಮನ್ಗಳು ಚೆಂಡನ್ನು ಹೊಡೆಯಲು ಸಾಧ್ಯವಾಗುವುದಿಲ್ಲ. ಅಂದಹಾಗೆ, ಕಳೆದ ಪಂದ್ಯದಲ್ಲಿಯೂ ಇದೇ ನಾವು ಇದೇ ತಪ್ಪು ಮಾಡಿದ್ದೆವು. ಹಾಗಾಗಿ, ಈ ತಪ್ಪನ್ನು ತಿದ್ದಿಕೊಳ್ಳಬೇಕಾದ ಅಗತ್ಯವಿದೆ," ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಮುಂದಿನ ಭಾನುವಾರ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ohEjhV