ಮನೆಗೇ ಹುಡುಕಿಕೊಂಡು ಬಂತು ಅದೃಷ್ಟ: ರಿಕ್ಷಾ ಚಾಲಕನಿಗೆ ಒಲಿಯಿತು ₹12 ಕೋಟಿಯ ಬಂಪರ್ ಲಾಟರಿ

ಕೊಚ್ಚಿ: ಅದೃಷ್ಠ ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಸಮಯ ಬಂದಾಗ ಅದೃಷ್ಟ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ ಎನ್ನುವ ಮಾತಿದೆ. ಕೇರಳದ ಆಟೋ ರಿಕ್ಷಾ ಚಾಲಕನೊಬ್ಬನ ಬಾಳಲ್ಲಿ ಈ ಮಾತು ನಿಜವಾಗಿದೆ. ಅದೃಷ್ಠ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದ್ದು, ಬರೋಬ್ಬರಿ ₹ 12 ಕೋಟಿಯ ಹೊಡೆದಿದೆ. ಕೇರಳದ ಎರ್ನಾಕುಳಂ ಜಿಲ್ಲೆಯ ಮರಾಡು ಎಂಬ ಗ್ರಾಮದ ನಿವಾಸಿಯಾಗಿರುವ, ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ ಜಯಪಾಲನ್‌ ಪಿ ಎಂಬವರಿಗೆ ₹ 12 ಕೋಟಿಯ ಲಾಟರಿ ಹೊಡೆದಿದ್ದು, ಬಡತನದಿಂದ ಬೆಂದು ಹೋಗಿದ್ದ ಅವರ ಬಾಳಲ್ಲಿ ಇದೀಗ ಭರವಸೆಯ ಆಶಾಕಿರಣಗಳು ಮೂಡಿವೆ. ಪ್ರತೀ ವರ್ಷದಂತೆ ಈ ವರ್ಷವೂ ಸರ್ಕಾರದ ಓಣಂ ಬಂಪರ್‌ ಲಾಟರಿ ಟಿಕೇಟ್‌ ಖರೀದಿ ಮಾಡಿದ್ದ ಜಯಪಾಲನ್‌ಗೆ ಈ ಬಾರಿ ತನಗೇ ಲಾಟರಿ ಹೊಡೆಯಲಿದೆ ಎನ್ನುವ ಯಾವುದೇ ನಿರೀಕ್ಷೆ ಇರಲಿಲ್ಲ. 'ಪ್ರತೀ ಬಾರಿ ಬಂಪರ್‌ ಲಾಟರಿ ಟಿಕೆಟ್‌ಗಳು ಬಂದಾಗ ಖರೀದಿ ಮಾಡುವುದು ನನ್ನ ಹವ್ಯಾಸವಾಗಿತ್ತು. ಈ ಬಾರಿಯೂ ಹಾಗೆಯೇ ಟಿಕೆಟ್‌ ಖರೀದಿ ಮಾಡಿದೆ. ಪುಣ್ಯಕ್ಕೆ ಲಾಟರಿ ನನಗೆ ಹೊಡೆದಿದೆ. ಅದೃಷ್ಟ ಹೀಗೆ ಖುಲಾಯಿಸಲಿದೆ ಎಂದು ನಾನು ಅಂದುಕೊಂಡಿರಲಿಲ್ಲ' ಎಂದು ಜಯಪಾಲನ್‌ ಹೇಳುವಾಗ ಅರಳಿದ ಮುಖದಲ್ಲಿ ನಗು ತೇಲಾಡುತ್ತಿತ್ತು. ತ್ರಿಪುನಿತುರ ಎಂಬಲ್ಲಿರುವ ಮೀನಾಕ್ಷಿ ಲಾಟರಿ ಏಜೆನ್ಸಿಯಿಂದ ಜಯಪಾಲನ್‌ ಅವರು ಲಾಟರಿ ಟಿಕೆಟಟ್‌ ಖರೀದಿ ಮಾಡಿದ್ದರು. ಸೆ. 19 ರಂದು ಲಾಟರಿ ವಿಜೇತರ ಹೆಸರು ಘೋಷಣೆ ಮಾಡಿದಾಗ ಅದರಲ್ಲಿ ಜಯಪಾಲನ್‌ ಅವರು ಖರೀದಿ ಮಾಡಿದ ಟಿಕೆಟ್‌ಗೆ ಲಾಟರಿ ಹೊಡೆದಿತ್ತು. ಟಿ.ವಿ ಮಾಧ್ಯಮಗಳಲ್ಲಿ ಬಹುಮಾನ ವಿಜೇತ ಲಾಟರಿ ನಂಬರ್‌ಗಳು ಪ್ರಸಾರವಾಗುತ್ತಿದ್ದಂತೆಯೇ ಇಡೀ ಕೇರಳದ ಮಂದಿ ಯಾರಿರಬಹುದು ಎಂದು ಕುತೂಹಲದ ಕಣ್ಣಲ್ಲಿ ಕಾಯುತ್ತಿದ್ದರು. ಆ ದಿನ ರಾತ್ರಿ ಪಾಳಿಯ ಕೆಲಸ ಮಡಿದ್ದ ಜಯಪಾಲನ್‌ಗೆ ತನಗೇ ಲಾಟರಿ ಹೊಡೆದಿದೆ ಎನ್ನುವುದೂ ಕೂಡ ತಿಳಿದಿರಲಿಲ್ಲ. ಸೋಮವಾರದ ಬೆಳಗ್ಗಿನ ವಾರ್ತೆಯಲ್ಲಿ ಲಾಟರಿ ವಿಜೇತ ಟಿಕೆಟ್‌ ನಂಬರ್‌ ಪ್ರಸಾರವಾಗುತ್ತಿದ್ದಂತೆಯೇ, ಜಯಪಾಲನ್ ಆ ದಿನ ಮನೆಯಲ್ಲೇ ಉಳಿದುಕೊಂಡಿದ್ದರು. ಬಳಿಕ ತನ್ನ ಪತ್ನಿ ಹಾಗೂ ಮಗನಿಗೆ ಲಾಟರಿ ಹೊಡೆದಿದ್ದು ತನ್ನ ಟಿಕೆಟ್‌ಗೆ ಎಂದು ತಿಳಿಸಿದ್ದರು. ಅದೇ ದಿನ ಕೆನರಾ ಬ್ಯಾಂಕ್‌ನ ಪಳ್ಳಿಂದ ಬ್ರಾಂಚ್‌ನಲ್ಲಿ ನೀಡಿ ಹಣ ಪಡೆದುಕೊಳ್ಳಲು ಹೋದಾಗಲೇ, ಜಯಪಾಲನ್‌ಗೆ ಲಾಟರಿ ಹೊಡೆದಿದೆ ಎನ್ನುವ ವಿಚಾರ ಹೊರ ಜಗತ್ತಿಗೆ ಗೊತ್ತಾಗಿದೆ. 'ಲಾಟರಿ ಹೊಡೆದ ದಿನ ಆನು ರಾತ್ರಿ ಪಾಳಿಯ ಕೆಲಸ ಮಾಡುತ್ತಿದ್ದೆ. ನನಗೇ ಲಾಟರಿ ಹೊಡೆದಿದೆ ಎನ್ನುವುದು ನನಗೆ ಮರುದಿನ ಬೆಳಗ್ಗೆ ತಿಳಿಯಿತು. ಪ್ರತೀ ಋತುವಿನ ಬಂಪರ್‌ ಲಾಟರಿ ಟಿಕೆಟ್‌ ನಾನು ಖರೀದಿ ಮಾಡುತ್ತಿದೆ. ಈ ಬಾರಿ ಅದೃಷ್ಟ ನನಗೆ ಒಲಿದಿದೆ' ಎಂದು ಜಯಪಾಲನ್ ಸಂತೋಷ ವ್ಯಕ್ತ ಪಡಿಸಿದರು. ಒಟ್ಟು ₹ 12 ಕೋಟಿಯ ಲಾಟರಿ ಇದಾಗಿದ್ದು, ಡೀಲರ್‌ ಕಮೀಷನ್‌, ತೆರಿಗೆ ಹಣ ಕಳೆದು ₹ 7.39 ಕೋಟಿ ಜಯಪಾಲನ್‌ ಅವರಿಗೆ ಸಿಗಲಿದೆ. ಈ ಹಣದಿಂದ ಸಾಲ ತೀರಿಸುವ ಹಾಗೂ ಮನೆ ಕಟ್ಟುವ ಬಯಕೆಯನ್ನು ಹೊಂದಿದ್ದಾರೆ ಜಯಪಾಲನ್‌.


from India & World News in Kannada | VK Polls https://ift.tt/3nVWeKN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...