ಪಾಲಕ್ಕಾಡ್: ಕೇರಳದಲ್ಲಿ ಬಿಜೆಪಿ ಬಹುಮತ ಸಿಗಲಿದೆ ಅಥವಾ ಕಿಂಗ್ ಮೇಕರ್ ಆಗಲು ಬೇಕಾದ ಸ್ಥಾನಗಳು ಸಿಗಲಿದೆ ಎಂದು ಮೆಟ್ರೋ ಮ್ಯಾನ್ ಇ ಶ್ರೀಧರನ್ ವಿಶ್ವಾಸ ವ್ಯಕ್ತಪಡಿದ್ದಾರೆ. ಪಾಲಕ್ಕಾಡ್ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ನಲ್ಲಿ ಭಾಗಿಯಾಗಿದ ಬಳಿಕ ಬಿಜೆಪಿ ನಾಯಕ ಇ ಶ್ರೀಧರನ್ ಕೇರಳ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ಕೇರಳದಲ್ಲಿ ಉತ್ತಮ ಭವಿಷ್ಯವಿದೆ. ಈ ಬಾರಿ ಬಹುಮತ ಪಡೆದುಕೊಂಡು ಕಿಂಗ್ ಮೇಕರ್ ಆಗಲಿದೆ. ಬಿಜೆಪಿಗೆ ಮತ ಹಾಕುವುದರಿಂದ ಕೇರಳದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು. ಇನ್ನು ತಮ್ಮ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಖಂಡಿತವಾಗಿಯೂ ಗೆಲುವು ಸಾಧಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೇರಳದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ, ಕೈಗಾರಿಕೆಗಳು ಮಾತ್ರ ರಾಜ್ಯಕ್ಕೆ ಸಂಪತ್ತನ್ನು ತರಬಲ್ಲವು. ಹೀಗಾಗಿ ಕೈಗಾರಿಕೆಯನ್ನು ಕೇರಳಕ್ಕೆ ನಾನು ತರುತ್ತೇನೆ ಎಂದರು. ಇನ್ನು ಕೇರಳದಲ್ಲಿ ಹೆಚ್ಚು ನಿರುದ್ಯೋಗವಿದ್ದು, ಉದ್ಯೋಗ ಸೃಷ್ಟಿಯ ಅಗತ್ಯವಿದೆ ಎಂದರು. ಶಿಕ್ಷಣ ವ್ಯವಸ್ಥೆ ಗುಣಮಟ್ಟವನ್ನು ಹೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ, ಪಾರದರ್ಶಕ, ಪರಿಣಾಮಕಾರಿ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರವನ್ನು ತರಲು ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕಾಲು ತೊಳೆಯುವುದು ಭಾರತ ಸಂಸ್ಕೃತಿ!ಇನ್ನು ಇದೆ ವೇಳೆ ಮತದಾರರು ನನ್ನ ಕಾಲು ತೊಳೆದಿರುವುದನ್ನು ಎಡ ಪಕ್ಷಗಳು ರಾಜಕೀಯಗೊಳಿಸುತ್ತಿದೆ.ಆದರೆ ಹಿರಿಯರ ಕಾಲು ತೊಳೆಯುವುದು ಭಾರತದ ಸಂಸ್ಕೃತಿ ಎಂದು ಎಡ ಪಕ್ಷಗಳಿಗೆ ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮಲ್ಲಿ ಹಿರಿಯರ ಕಾಲುಗಳನ್ನು ಮಕ್ಕಳು ತೊಳೆಯುತ್ತಾರೆ. ಇದು ನಮ್ಮಲ್ಲಿನ ಸಂಪ್ರಾದಾಯ ಹಾಗೂ ಸಂಸ್ಕೃತಿ ಎಂದು ತಿಳಿಸಿದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರು ಈ ಶ್ರೀಧರನ್ ಅವರ ಕಾಲು ತೊಳೆದಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು.
from India & World News in Kannada | VK Polls https://ift.tt/3sp8Olc