ಭುವನೇಶ್ವರ್‌ಗಿಂತ ಕೌಶಲಭರಿತ ವೇಗಿ ವಿಶ್ವದಲ್ಲಿಯೇ ಇಲ್ಲವೆಂದ ವಾನ್‌!

ಹೊಸದಿಲ್ಲಿ: ಗಾಯದಿಂದಾಗಿ ಸತತ 15 ತಿಂಗಳ ಕಾಲ ವಿಶ್ರಾಂತಿ ಪಡೆದು ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ಮರಳಿದ್ದ ಅನುಭವಿ ವೇಗಿ ಅವರ ಪ್ರದರ್ಶನವನ್ನು ಆಂಗ್ಲರ ಮಾಜಿ ನಾಯಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಹ್ಮದಬಾದ್‌ನಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್‌ ಕೇವಲ 4 ವಿಕೆಟ್‌ ಮಾತ್ರ ಪಡೆದಿದ್ದರು. ಆದರೆ, ಅವರ ನಿರ್ಣಾಯಕ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅದರಂತೆ ಐದನೇ ಹಾಗೂ ಸರಣಿ ನಿರ್ಣಾಯಕ ಟಿ20 ಪಂದ್ಯದಲ್ಲಿ 4 ಓವರ್‌ಗಳಿಗೆ ಕೇವಲ 15 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೇ ಲಯವನ್ನು ಅವರು ಓಡಿಐ ಸರಣಿಯ ಆರಂಭಿಕ ಪಂದ್ಯದಲ್ಲಿಯೂ ಮುಂದುವರಿಸಿದ್ದರು. 9 ಓವರ್‌ಗಳಲ್ಲಿ 30 ರನ್‌ ನೀಡಿ ಎರಡು ವಿಕೆಟ್‌ ತನ್ನ ಖಾತೆಗೆ ಹಾಕಿಕೊಂಡಿದ್ದರು. ಆ ಮೂಲಕ ಆತಿಥೇಯ ಬ್ಯಾಟ್ಸ್‌ಮನ್‌ ಹರಿಸಿದ್ದ ರನ್‌ ಹೊಳೆಯನ್ನು ನಿರ್ಣಾಯಕ ಸಮಯದಲ್ಲಿ ಭುವಿ ಕಡಿಹಾಣ ಹಾಕಿದ್ದರು. ಅವರ ಬೌಲಿಂಗ್ ಎಕಾನಮಿ ತಂಡದ ಸಹ ಆಟಗಾರರಿಗೂ ಮಾದರಿಯಾಗಿತ್ತು. ಕ್ರಿಕ್‌ಬಝ್‌ ಜತೆ ಮಾತನಾಡುತ್ತಾ ಭುವನೇಶ್ವರ್ ಕುಮಾರ್‌ ಅವರನ್ನು ಶ್ಲಾಘಿಸಿದ ಮೈಕಲ್‌ ವಾನ್‌, ಸೀಮಿತ ಓವರ್‌ಗಳ ಸ್ವರೂಪದಲ್ಲಿ ಪ್ರಸ್ತುತ ವಿಶ್ವದ ಅತ್ಯಂತ ಕೌಶಲಭರಿತ ಬೌಲರ್‌ ಎಂದು ಬಣ್ಣಿಸಿದರು. "ಭುವನೇಶ್ವರ್ ಕುಮಾರ್‌ ಅವರು ಪ್ರಸ್ತುತ ವಿಶ್ವದ ಬಿಳಿ ಚೆಂಡಿನ ಅತ್ಯಂತ ಕೌಶಲಭರಿತ ಬೌಲರ್ ಆಗಿದ್ದಾರೆ. ಒಂದು ಗಂಟೆಗೆ 80 ಮೈಲಿ ವೇಗದಲ್ಲಿ ಬೌಲಿಂಗ್‌ ಮಾಡುವ ಹಾಗೂ ತಾವು ಅಂದುಕೊಂಡಂತೆ ಚೆಂಡನ್ನುಚಲಿಸುವಂತೆ ಮಾಡುವ ಭುವೇಶ್ವರ್ ರೀತಿ ಬೇರೆ ಯಾವ ಬೌಲರ್‌ ಅನ್ನು ನಾನು ನೋಡಿಯೇ ಇಲ್ಲ. ಭುವನೇಶ್ವರ್ ಕುಮಾರ್‌ ತಮ್ಮ ಬೌಲಿಂಗ್‌ನಲ್ಲಿ ಇನ್‌ಸ್ವಿಂಗರ್‌-ಔಟ್‌ ಸ್ವಿಂಗರ್‌ ಹಾಗೂ ಕಟ್ಟರ್‌ ಎಸೆತಗಳನ್ನು ಪ್ರಯೋಗ ಮಾಡುತ್ತಾರೆ. ಜತೆಗೆ, ಸನ್ನಿವೇಶಕ್ಕೆ ತಕ್ಕಂತೆ ಯಾರ್ಕರ್ ಹಾಗೂ ಬೌನ್ಸರ್‌ಗಳನ್ನು ಹಾಕುತ್ತಾರೆ. ವಿಶ್ವದಲ್ಲಿಯೇ ಇಷ್ಟು ಕೌಶಲ ಹೊಂದಿರುವ ಬೌಲರ್‌ಗಳನ್ನು ನಾನು ನೋಡಿಯೇ ಇಲ್ಲ," ಎಂದು ಭಾರತದ ವೇಗಿಯನ್ನು ವಾನ್‌ ಶ್ಲಾಘಿಸಿದರು. "ಒಂದು ವಾರದಲ್ಲಿ ಯಾವುದೇ ದಿನ ಗಂಟೆಗೆ 90 ಮೈಲಿ ವೇಗದಲ್ಲಿ ಬೌಲಿಂಗ್‌ ಮಾಡುವವರನ್ನು ನನಗೆ ಕೊಡಿ, ನಾನು ಅವರನ್ನುಎದುರಿಸಲು ಸಿದ್ದನಿದ್ದೇನೆ. ಏಕೆಂದರೆ ನಾನು ವೇಗವನ್ನು ಇಷ್ಟಪಡುತ್ತೇನೆ. ಆದರೆ, ಭುವನೇಶ್ವರ್ ಕುಮಾರ್ ಅವರಂತ ಬೌಲರ್‌ಗೆ ಆಡಬೇಕಾದರೆ ನೀವು ಚಿಂತಿಸಬೇಕಾದ ಅಗತ್ಯವಿದೆ. ಏಕೆಂದರೆ ಇತರೆ ಬೌಲರ್‌ಗಳ ರೀತಿ ಅವರ ಎಸೆತ ಇರುವುದಿಲ್ಲ. ಒಂದೊಂದು ಎಸೆತವೂ ಒಂದೊಂದು ರೀತಿ ವಿಭಿನ್ನವಾಗಿರುತ್ತದೆ. ಅವರ ಬೌಲರ್‌ನಲ್ಲಿ ನಿಮ್ಮ ಫುಟ್‌ವರ್ಕ್‌ಗೆ ಪರೀಕ್ಷೆಯಾಗಿರುತ್ತದೆ," ಎಂದು ಮೈಕಲ್ ವಾನ್ ಹೇಳಿದರು. ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಓಡಿಐ ಸರಣಿಯ ಎರಡನೇ ಹಣಾಹಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಮೊದಲನೇ ಪಂದ್ಯ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tM1bW2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...