ಹಿರೇಬಾಗೇವಾಡಿ: ಮನೆಗೆ ನುಗ್ಗಿ ಮೊಬೈಲ್‌ ಕದ್ದಿದಲ್ಲದೆ ಮಾಲೀಕನ ಬಳಿ ಪಾಸ್‌ವರ್ಡ್‌ ಕೇಳಿದ ಕಳ್ಳ!

ಹಿರೇಬಾಗೇವಾಡಿ: ಮನೆಗೆ ನುಗ್ಗಿ ಮೊಬೈಲ್‌ ಕದ್ದ ಕಳ್ಳ ಬಳಿಕ ಮೊಬೈಲ್‌ ಅನ್ನೂ ಕೇಳಿದ! ಕುತೂಹಲಕಾರಿ ಈ ಘಟನೆ ಗ್ರಾಮದ ಬಸವನಗರದಲ್ಲಿ ನಡೆದಿದೆ. ನಾಗನಗೌಡ ಪಾಟೀಲ ಎಂಬುವರ ಮನೆಗೆ ನುಗ್ಗಿದ ಕಳ್ಳ 15 ಸಾವಿರ ರೂ. ಮೌಲ್ಯದ ಮೊಬೈಲ್‌ ಕದ್ದಿದ್ದಾನೆ. ಮೊಬೈಲ್‌ ಕಳ್ಳತನವಾದದ್ದು ಗೊತ್ತಾಗುತ್ತಲೇ ಆ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಕಳ್ಳ ಮೊಬೈಲ್‌ ಪಾಸ್‌ವರ್ಡ್‌ ಹೇಳುವಂತೆ ಗದರಿಸಿದ್ದಾನೆ!. ಕೆಲ ಹೊತ್ತಿನ ನಂತರ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ. ಈ ಕುರಿತು ನಾಗನಗೌಡ ಪಾಟೀಲ ಪೊಲೀಸ್‌ ದೂರು ನೀಡಲು ನಿರ್ಧರಿಸಿದ್ದಾರೆ. ಇದಲ್ಲದೇ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಕಳ್ಳ ಮೊಬೈಲ್‌ ಓಪನ್‌ ಮಾಡಿ ಕೊಡುವಂತೆ ಕೇಳಿದ್ದಾನೆ. ಶಿಕ್ಷಕಿ ಗದರಿಸಿದ್ದರಿಂದ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ವೈದ್ಯರೊಬ್ಬರ ಮನೆಗೆ ನುಗ್ಗಿದ ಕಳ್ಳ ಒಳಗೆಲ್ಲಅಡ್ಡಾಡಿದ್ದಾನೆ. ವೈದ್ಯರ ಮನೆಯವರು ನೋಡಿ ಗದರಿಸಿ ಹೊರ ಹಾಕಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಮೊಬೈಲ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ಮನೆಗೆ ನುಗ್ಗಿ ಮಾಡಲಾಗುತ್ತಿದೆ.


from India & World News in Kannada | VK Polls https://ift.tt/3vRb6vy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...