ಹೊಸದಿಲ್ಲಿ: ನಾಯಕ ವಿರಾಟ್ ಕೊಹ್ಲಿ ಅಜೇಯ 80 ರನ್ಗಳ ಸಹಾಯದಿಂದ ಭಾರತ ತಂಡ ಐದನೇ ಟಿ20 ಪಂದ್ಯದಲ್ಲಿ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 224 ರನ್ ದಾಖಲಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮೊದಲನೇ ಓವರ್ನಲ್ಲಿಯೇ ಅಪಾಯಕಾರಿ ಜೇಸನ್ ರಾಯ್ ವಿಕೆಟ್ ಪಡಯುವ ಮೂಲಕ ಆಘಾತ ನೀಡಿದ್ದರು. ನಂತರ, ಜತೆಯಾಟ ಜೋಸ್ ಬಟ್ಲರ್ ಹಾಗೂ ಡಾವಿಡ್ ಮಲಾನ್ ಜೋಡಿ ಮುರಿಯದ ಎರಡನೇ ವಿಕೆಟ್ಗೆ 130 ರನ್ ದಾಖಲಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಿತು. ಆದರೆ, 13ನೇ ಓವರ್ನಲ್ಲಿ ಕೊಹ್ಲಿ, ಭುವನೇಶ್ವರ್ ಕುಮಾರ್ಗೆ ಚೆಂಡು ನೀಡಿದರು. ಅದರಂತೆ ನಾಯಕನ ನಿರೀಕ್ಷೆಯನ್ನು ಭುವಿ ಹುಸಿ ಮಾಡಲಿಲ್ಲ. ನಿಧಾನಗತಿಯ ಎಸೆತಗಳನ್ನು ಹಾಕಿ ಜೋಸ್ ಬಟ್ಲರ್ ಮೇಲೆ ಭುವನೇಶ್ವರ್ ಕುಮಾರ್ ಒತ್ತಡ ಹೇರಿದರು. ಅದರಂತೆ 13ನೇ ಓವರ್ನ ಐದನೇ ಎಸೆತವನ್ನು ಸರಿಯಾಗಿ ಅಂದಾಜು ಮಾಡುವಲ್ಲಿ ಎಡವಿದ ಇಂಗ್ಲೆಂಡ್ ಆಟಗಾರ ಸಿಕ್ಸರ್ ಬಾರಿಸಲು ಹೋಗಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಬಟ್ಲರ್ ಔಟ್ ಆದ ಬಳಿಕ ಬಹುಬೇಗ ಇಂಗ್ಲೆಂಡ್ ತಂಡದ ಪ್ರಮುಖ ಮೂವರು ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭಾರತ ತಂಡ 36 ರನ್ಗಳಿಂದ ಗೆದ್ದು ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಬಗ್ಗೆ ಇಎಸ್ಪಿಎನ್ ಕ್ರಿಕ್ಇನ್ಫೋ ಜತೆ ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ಭುವನೇಶ್ವರ್ ಕುಮಾರ್ ಅವರ ನಂಬಲಾಗದ ಓವರ್ ಅನ್ನು ಶ್ಲಾಘಿಸಿದರು ಹಾಗೂ ಹಿರಿಯ ವೇಗಿ ಭಾರತ ತಂಡದ ಪ್ರಮುಖ ಅಸ್ತ್ರ ಎಂಬುದನ್ನು ಉಲ್ಲೇಖಿಸಿದ್ದಾರೆ. "ಭುವನೇಶ್ವರ್ ಕುಮಾರ್ ಅವರ ನಂಬಲಾಗದ ಓವರ್ ಇದಾಗಿತ್ತು. 13ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ಗೆ ಕರೆತಂದ ವಿರಾಟ್ ಕೊಹ್ಲಿಯ ನಾಯಕತ್ವ ಅದ್ಭುತ ವಾದದ್ದು. ಏಕೆಂದರೆ ಬಟ್ಲರ್ ಹಾಗೂ ಮಲಾನ್ ಕ್ರೀಸ್ನಲ್ಲಿ ದೀರ್ಘಕಾಲ ನಿಂತಿದ್ದರು. ಅದರಂತೆ ಬುದ್ದಿ ಉಪಯೋಗಿಸಿದ ಭುವಿ ಈ ಜೋಡಿಗೆ ಎಲ್ಲಾ ಎಸೆತಗಳನ್ನು ಮಿಶ್ರಣ ಮಾಡಿದರು," ಎಂದರು. "ಜೋಸ್ ಬಟ್ಲರ್ ಒಂದು ರಿವರ್ಸ್ ಸ್ವೀಪ್ ಮಿಸ್ ಮಾಡಿಕೊಂಡರು. ಏಕೆದರೆ ಈ ಎಸೆತ ಕ್ವಿಕರ್ ಓನ್ ಹಾಗೂ ಯಾರ್ಕರ್ ಆಗಿತ್ತು. ಮತ್ತೊಂದು ಆಫ್ಸೈಡ್ ದ ಆಫ್ ಸ್ಟಂಪ್. ಅದರಂತೆ ತಮ್ಮ ಕೌಶಲ್ಯಕ್ಕೆ ತಕ್ಕಂತೆ ಭುವನೇಶ್ವರ್ 13ನೇ ಓವರ್ನಲ್ಲಿ ಎಲ್ಲಾ ಎಸೆತಗಳನ್ನು ಮಿಶ್ರಣ ಮಾಡಿದರು. ಇದರ ಫಲವಾಗಿ ಜೋಸ್ ಬಟ್ಲರ್ ವಿಕೆಟ್ ಪಡೆದರು. ಇದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು," ಎಂದು ಟೀಮ್ ಇಂಡಿಯಾ ವೇಗಿಯನ್ನು ಗುಣಗಾನ ಮಾಡಿದರು. ಹೊಸ ಚೆಂಡಿನ ಬೌಲರ್ ಆಗಿ ಭುವನೇಶ್ವರ್ ಹೇಗೆ ಯಶಸ್ವಿಯಾಗಿದ್ದಾರೆಂಬುದನ್ನು ಗೌತಮ್ ಗಂಭೀರ್ ಇದೇ ವೇಳೆ ವಿವರಿಸಿದರು. "ಟಿ20 ಕ್ರಿಕೆಟ್ನಲ್ಲಿ ಸೀಮ್ ಬೌಲರ್ಗಳಿಗಿಂತ ಸ್ವಿಂಗ್ ಬೌಲರ್ಗಳನ್ನು ಎದುರಿಸುವುದು ಬಹಳ ಕಷ್ಟ. ಏಕೆಂದರೆ ಸೀಮ್ ಬೌಲರ್ಗಳಿಗೆ ನೀವು ಲೈನ್ ನೋಡಿಕೊಂಡು ಬ್ಯಾಟಿಂಗ್ ಮಾಡಬಹುದು. ಆದರೆ, ಸ್ವಿಂಗ್ ಬೌಲರ್ಗಳಿಗೆ ಸ್ವಲ್ಪ ಹೊತ್ತು ಕಾದು ಆಡಬೇಕಾಗುತ್ತದೆ. ಆದರೆ, ಭುವನೇಶ್ವರ್ ಎರಡೂ ಕಡೆ ಚೆಂಡನ್ನು ಸ್ವಿಂಗ್ ಮಾಡಬಲ್ಲರು. ಈ ಕಾರಣದಿಂದಾಗಿ ಅವರು ಹೊಸ ಚೆಂಡಿನಲ್ಲಿ ಅಪಾಯಕಾರಿ ಬೌಲರ್," ಎಂದು ಗಂಭೀರ್ ತಿಳಿಸಿದರು
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/311HTjg