ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್‌; ಯುವತಿಯ ಪತ್ತೆಗಾಗಿ ಎಸ್ಐಟಿ ತಂಡ ಬೆಳಗಾವಿಯಲ್ಲಿ ಬೀಡು!

: ಅಶ್ಲೀಲ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಅಪಹರಣ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಶನಿವಾರ ಮುಂಜಾನೆ ಬೆಳಗಾವಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಎಸಿಪಿ ನಾಗರಾಜ ಹಾಗೂ ಇನ್ಸ್‌ಪೆಕ್ಟರ್ ಕೇಶವಮೂರ್ತಿ ನೇತೃತ್ವದ ಐವರ ಅಧಿಕಾರಿಗಳನ್ನೊಳಗೊಂಡ ತಂಡ ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಎಪಿಎಂಸಿ ಪೊಲೀಸರ ಜೊತೆ ಸೇರಿ ತನಿಖೆ ನಡೆಸಿದ್ದಾರೆ. ಯುವತಿ ಕುಟುಂಬದವರು ವಾಸವಿದ್ದ ಬಾಡಿಗೆ ಮನೆಗೆ ಆಗಮಿಸಿದ್ದ ಅಧಿಕಾರಿಗಳು ಮನೆ ಮಾಲಿಕರಿಂದ ಮಾಹಿತಿ ಪಡೆದಿದ್ದಾರೆ. ಯುವತಿ ಈ ಹಿಂದೆ ಯಾವಾಗ ಮನೆಗೆ ಬಂದಿದ್ದಳು. ಬೇರೆಯವರು ಯಾರಾದರು ಭೇಟಿ ನೀಡುತ್ತಿದ್ದಾರಾ. ಮನೆಯವರು ಇಲ್ಲಿಂದ ಯಾವಾಗ ಹೋಗಿದ್ದು ಎಂಬಿತ್ಯಾದಿ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಇನ್ನು ತಮ್ಮ ಮಗಳನ್ನು ಅಪಹರಣ ಮಾಡಿ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವೀಡಿಯೋ ತಯಾರಿಸಿದ್ದಾರೆ ಎಂದು ಆರೋಪಿಸಿ ಸಿಡಿಯಲ್ಲಿ ಇದ್ದಾಳೆ ಎನ್ನಲಾದ ಯುವತಿಯ ತಂದೆ, ಮಾರ್ಚ್ 16ರಂದು ಬೆಳಗಾವಿ ನಗರದ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ನಂತರ ಯುವತಿಯ ಕುಟುಂಬದವರು ನಾಪತ್ತೆಯಾಗಿದ್ದು ಬೆಳಗಾವಿ ಪೊಲೀಸರಿಗೂ ದೂರದಾರರ ಇರುವ ಸುಳಿವು ಲಭ್ಯವಾಗಿಲ್ಲ. ದೂರು ದಾಖಲಿಸಿದ ತಕ್ಷಣವೇ ಸಂತ್ರಸ್ತೆ ಪಾಲಕರು ಅಜ್ಞಾತ ಸ್ಥಳದಿಂದ ನಮ್ಮ‌ ಮಗಳನ್ನ ಹುಡಕಿಕೊಡಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದರು. ಇದಾದ ನಂತರ ಬೆಳಗಾವಿ ಪೊಲೀಸರು ಈ ದೂರನ್ನು ಬೆಂಗಳೂರು ನಗರದ ಆರ್.ಟಿ. ನಗರ ಪೊಲೀಸರ ಠಾಣೆಗೆ ವರ್ಗಾಯಿಸಿದ್ದರು ಈ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳ ತನಿಖೆಯ ಕುರಿತಾಗಿ ಸಂತ್ರಸ್ತೆಯ ಪಾಲಕರ ಶೋಧನೆ ಮತ್ತು ವಿಚಾರಣೆಗಾಗಿ ಬೆಳಗಾವಿ ನಗರಕ್ಕೆ ಬಂದಿದ್ದಾರೆ. ಬೆಳಗಾವಿಯ ನಗರದ ಸಿಪಿಐ ಜಾವೇದ ಮುಷಾಪುರೆ ಮತ್ತು ಎಪಿಎಂಸಿ ಠಾಣೆಯ ಪೊಲೀಸರ ಸಹಾಯದಿಂದ ಎಸ್ಐಟಿ ಅಧಿಕಾರಿಗಳ ಶೋಧನೆ ಸಾಯಂಕಾಲದವರಗೂ ಮುಂದುವರಿದೆ ಎಂದು ತಿಳಿದು ಬಂದಿದೆ. ಈ ಕುರಿತು, ನಗರದ ಡಿವೈಎಸ್ಪಿ ವಿಕ್ರಮ್ ಆಮ್ಟೆ (ಕಾ&ಸು) ವಿಜಯ ಕರ್ನಾಟಕ ವೆಬ್ ಜತೆ ಮಾತ್ನಾಡಿ, ಎಸ್‌ಐಟಿ ಅಧಿಕಾರಿಗಳು ನಮ್ಮ ಬೆಳಗಾವಿಗೆ ಬಂದಿರುವ ಕುರಿತು ನನಗೆ ಮಾಹಿತಿ ಇಲ್ಲ‌, ಏಕೆಂದರೆ ನಾನು ಉಪಚುನಾವಣೆಯ ಕಾರ್ಯಗಳಲ್ಲಿ ಇದ್ದಿರುವ ಕಾರಣ ನನಗೆ ಈ ಕುರಿತು ಮಾಹಿತಿ ಇಲ್ಲ, ಮಾಹಿತಿ ತಿಳಿದುಕೊಂಡು ಮಾಧ್ಯಮದವರಿಗೆ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3f2fzpc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...