ಬೆಂಗಳೂರು: ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೇಳಿದ್ದಾರೆ. ಹಾಗಾದರೆ ಎಲ್ಲರ ಮೇಲೂ ನಡೆಯಲಿ. ಸತ್ಯ ಶೋಧನ ಕಮಿಟಿ ರಚನೆ ಮಾಡಲಿ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನೈತಿಕ ಸಂಬಂಧ ವಿಚಾರವಾಗಿ ಎಲ್ಲಾ ಶಾಸಕರ ತನಿಖೆ ಆಗಲಿ ಎಂದು ಸಚಿವ ಸುಧಾಕರ್ ಸವಾಲು ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಪ್ರತಿಕ್ರಿಯೆ ನೀಡಿದರು. ಸುಧಾಕರ್ ಬೇಡಿಕೆಯಂತೆ ಮುಖ್ಯಮಂತ್ರಿಗಳು ತನಿಖೆ ಮಾಡಲಿ. ಎಲ್ಲಾ 225 ಶಾಸಕರ ಮೇಲೂ ತನಿಖೆ ನಡೆಯಲಿ ಎಂದು ಇದೆ ವೇಳೆ ಸತೀಶ್ ಜಾರಕಿಹೊಳಿ ಆಗ್ರಹ ಮಾಡಿದರು. ಇನ್ನು ಹೆಚ್.ಡಿ.ರೇವಣ್ಣ ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರದಲ್ಲೂ ಇವರೇ ರಾಜ್ಯದಲ್ಲೂ ಇವರೆ ಇದ್ದಾರೆ, ಈ ನಿಟ್ಟಿನಲ್ಲಿ ತನಿಖೆ ನಡೆಯಲಿ. ಅಗತ್ಯ ಬಿದ್ದರೆ ರಾಮನ ದೇವಸ್ಥಾನಕ್ಕೆ ಹೋಗಿ ಬರಲಿ ಎಂದು ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಸಿ.ಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ , ಎಲ್ಲಾ ಸಚಿವರು, ಶಾಸಕರ ತನಿಖೆ ನಡೆಯಲಿ. ಆಗ ಎಲ್ಲರ ಬಂಡವಾಳ ಬಹಿರಂಗ ಆಗುತ್ತೆ. ಅನೈತಿಕ ಸಂಬಂಧ ಹೊರಬರುತ್ತದೆ ಎಂದಿದ್ದರು. ಇದೀಗ ಕಾಂಗ್ರೆಸ್ ಈ ಸಂಬಂಧ ಮುಗಿಬಿದ್ದಿದೆ.
from India & World News in Kannada | VK Polls https://ift.tt/3ccJuJo