ಭಾರತ ತಂಡದಲ್ಲಿ ಕೊಹ್ಲಿ-ಶಾಸ್ತ್ರಿ ಸಕ್ಸಸ್‌ಗೆ ಕಾರಣ ವಿವರಿಸಿದ ಮಾಜಿ ವೇಗಿ!

ಹೊಸದಿಲ್ಲಿ: ಭಾರತ ತಂಡದ ನಾಯಕ , ಮುಖ್ಯ ಕೋಚ್‌ ರವಿಶಾಸ್ತ್ರಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಕಳೆದ ವರ್ಷ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಸೋಲಿನ ಬಳಿಕ ಇವರಿಬ್ಬರೂ ಸುದ್ದಿಗೋಷ್ಠಿಯಲ್ಲಿ ಒಬ್ಬರನ್ನೊಬ್ಬರು ಶ್ಲಾಘಿಸಿದ್ದರು. ಎರಡನೇ ಅವಧಿ ಮುಖ್ಯ ಕೋಚ್‌ ಆಗಿ ಬರುವೆ ಮುನ್ನವೇ ಕೊಹ್ಲಿ, ರವಿಶಾಸ್ತ್ರಿ ಅವರನ್ನು ಸಮರ್ಥಿಸಿಕೊಂಡಿದ್ದರು. ವಿರಾಟ್‌ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರ ಸಾರಥ್ಯದಲ್ಲಿ ಭಾರತ ತಂಡ, 2018/19ನೇ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಸೇರಿದಂತೆ ಹಲವು ಮಹತ್ತರ ಸರಣಿಗಳಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಪ್ರಸ್ತುತ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಒಳಗೊಂಡಿದೆ. ಆ ಮೂಲಕ ಜಗತ್ತಿನ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಇತ್ತೀಚೆಗೆ ಸ್ಟಾರ್‌ ಸ್ಪೋರ್ಟ್‌ ಕ್ರಿಕೆಟ್‌ ಕನೆಕ್ಟಡ್‌ ಚಾಟ್‌ ಶೋನಲ್ಲಿ ಮಾತನಾಡಿದ ಮಾಜಿ ವೇಗಿ , ವಿರಾಟ್‌ ಕೊಹ್ಲಿ ಹಾಗೂ ಭಾರತ ತಂಡದಲ್ಲಿ ಯಶಸ್ಸು ಸಾಧಿಸುತ್ತಿರುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ. "ವಿರಾಟ್‌ ಕೊಹ್ಲಿ ಇಷ್ಟದಂತೆ ಇರಲು ರವಿಶಾಸ್ತ್ರಿ ಬಿಡುತ್ತಾರೆ. ರವಿಶಾಸ್ತ್ರಿ ಬಗ್ಗೆ ಕೊಹ್ಲಿಗೆ ಚೆನ್ನಾಗಿ ತಿಳಿದಿದೆ. ಅವರು ನಮ್ಮಿಂದ ಏನು ನಿರೀಕ್ಷೆ ಮಾಡಲಿದ್ದಾರೆಂಬುದು ನಾಯಕನಿಗೂ ಗೊತ್ತು," ಎಂದು ನೆಹ್ರಾ ವಿವರಿಸಿದರು. "ರವಿಶಾಸ್ತ್ರಿ ಅದ್ಭುತ ಪ್ರೇರಣೆ ತುಂಬುವ ವ್ಯಕ್ತಿಯಾಗಿದ್ದು, ಇದೇ ರವಿ ಭಾಯ್‌ ಅವರ ಸಾಮರ್ಥ್ಯ. ಅವರು ನಿಮಗೆ ಸಾಕಷ್ಟು ವಿಶ್ವಾಸ ತುಂಬುತ್ತಾರೆ. ನೀವು ಒಮ್ಮೆ ಫಾರ್ಮ್‌ ಕಳೆದುಕೊಂಡು ಜರ್ಜರಿತವಾದರೆ, ಅವರೇ ಮುಂದೆ ಬಂದು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ. ವಿರಾಟ್‌ ಕೊಹ್ಲಿ ಕೂಡ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಈ ಇಬ್ಬರ ವ್ಯಕ್ತಿತ್ವದಲ್ಲಿ ಒಂದೇ ರೀತಿಯ ಸಾಮ್ಯತೆಯಿದೆ. ಹಾಗಾಗಿ, ಇವರಿಬ್ಬರ ನಡುವಣ ಉತ್ತಮ ಹೊಂದಾಣಿಕೆ ಇದೆ," ಎಂದು ಮಾಜಿ ವೇಗಿ ತಿಳಿಸಿದರು. ಎಲ್ಲಾ ಸಂಗತಿಗಳ ಬಗ್ಗೆ ಕೊಹ್ಲಿ ಹಾಗೂ ಶಾಸ್ತ್ರಿ ಒಪ್ಪುವುದಿಲ್ಲ, ಆದರೆ ತೀರ್ಮಾನ ತೆಗೆದುಕೊಳ್ಳುವಾಗ ಪರಸ್ಪರ ಒಬ್ಬರು ಮತ್ತೊಬ್ಬರ ಮಾತನ್ನು ಆಲಿಸುತ್ತಾರೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬೌಲಿಂಗ್‌ ಕೋಚ್‌ ಆಶಿಶ್‌ ನೆಹ್ರಾ ತಿಳಿಸಿದ್ದಾರೆ. "ಎಲ್ಲಾ ಸಮಯದಲ್ಲೂ ಇವರಿಬ್ಬರೂ ಸಂಗತಿಗಳ ಬಗ್ಗೆ ಒಮ್ಮತವಿರುವುದಿಲ್ಲ. ಆದರೆ ಕೆಲ ಅಂಶಗಳಲ್ಲಿ ಮಾತ್ರ ಇವರು ಮುನ್ನಡೆಯುತ್ತಾರೆ, ಅಂದರೆ, ನಾಯಕ ತೀರ್ಮಾನವೇ ಅಂತಿಮ ಅಲ್ಲ ಅಥವಾ ಮುಖ್ಯ ಕೋಚ್‌ ನಿರ್ಧಾರವೇ ಅಂತಿಮವಲ್ಲ. ನನ್ನ ಪ್ರಕಾರ ಇವರಿಬ್ಬರದೂ 50-50 ಜತೆಯಾಟ," ಎಂದು ನೆಹ್ರಾ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸೆಪ್ಟೆಂಬರ್‌ 19ರಿಂದ ಯುಎಇಯಲ್ಲಿ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಡೆಯಲಿದ್ದು, ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಮುನ್ನಡೆಸುವ ವಿರಾಟ್‌ ಕೊಹ್ಲಿ ಮೊದಲನೇ ಐಪಿಎಲ್‌ ಟ್ರೋಫಿ ಗೆಲ್ಲುವ ತುಡಿತದಲ್ಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ECv9rc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...