ಮನೆಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿ ಸುಸ್ತಾಗಿ ಹೋದ ಶಿಖರ್ ಧವನ್

ಹೊಸದಿಲ್ಲಿ: ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಡೀ ದೇಶವೇ ಒಗ್ಗಟ್ಟಾಗಿ ಮಹಾಮಾರಿ ವಿರುದ್ದ ಹೋರಾಡುತ್ತಿದೆ. ಕೋವಿಡ್ 19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ 21 ದಿನಗಳ ಕಾಲ ಅಂದರೆ ಏಪ್ರಿಲ್ 14ರ ವರೆಗೆ ದೇಶವನ್ನೇ ಸ್ತಬ್ಧಗೊಳಿಸಲಾಗಿದೆ. ಸಾಮಾಜಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿ ದೇಶದ ಜನತೆಗೆ ಮನೆಯಲ್ಲೇ ಇರುವಂತೆಯೇ ಸೂಚಿಸಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಯಾವುದೇ ಕ್ರಿಕೆಟ್ ಚಟುವಟಿಕೆಗಳಿಲ್ಲದೆ ಭಾರತೀಯ ಕ್ರಿಕೆಟಿಗರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಿಜಾಂಶವನ್ನು ಒಪ್ಪಿಕೊಳ್ಳಬೇಕು. ಮನೆಯಲ್ಲೇ ಬಟ್ಟೆ ತೊಳೆಯುವುದು, ಶೌಚಾಲಯ ಶುಚಿಗೊಳಿಸುವುದು ಹೀಗೆ ಮನೆಯೆಲ್ಲ ಕೆಲಸಗಳನ್ನು ಶಿಖರ್ ಧವನ್ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಹಂಚಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಆಯೆಶಾ ಧವನ್ ಹಾಯಾಗಿ ಮೇಕ್ ಅಪ್ ಮಾಡುತ್ತಿರುವ ದೃಶ್ಯವನ್ನು ಹಂಚಲಾಗಿದೆ. ಇವೆಲ್ಲವೂ ಕೊರೊನಾ ವೈರಸ್ ಎಫೆಕ್ಟ್ ಎಂದು ಧವನ್ ತಮಾಷೆಯ ವಿಡಿಯೋ ಮೂಲಕ ಹಂಚುವ ಪ್ರಯತ್ನ ಮಾಡಿದ್ದಾರೆ. ಹೌದು, ಬಿಡುವಿಲ್ಲದ ಕ್ರಿಕೆಟ್‌ನಿಂದ ಬೆಸತ್ತು ಹೋಗಿರುವ ಕ್ರಿಕೆಟಿರೀಗ ಬಹುತೇಕ ಸಮಯವನ್ನು ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಕಳೆಯುವಂತಾಗಿದೆ. ಈಗ ಪತ್ನಿ ಆದೇಶವನ್ನು ಚಾಚು ತಪ್ಪದೇ ಪಾಲಿಸುತ್ತಿರುವ ಧವನ್, ಮನೆಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ 'ಜಬ್‌ಸೇ ಹುಯಿ ಹೈ ಶಾದಿ, ಅಸು ಬಹ ರಹಾ ಹುಂ' (ಮದುವೆಯಾದ ಬಳಿಕ ಕಣ್ಣೀರಿಡುತ್ತಿದ್ದೇನೆ) ಹಿಂದಿ ಹಾಡನ್ನು ಹಂಚಿರುವುದು ಮತ್ತಷ್ಟು ತಮಾಷೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ 'ನಿಮ್ಮ ಧ್ವನಿ ಕೇಳಿಸುತ್ತಿದೆ' ಎಂದು ಹೇಳುವ ಮೂಲಕ ತಮ್ಮ ಪರಿಸ್ಥಿತಿಯೂ ಇದಕ್ಕೆ ಸಮಾನವಾಗಿದೆ ಎಂಬುದನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಕ್ರಿಕೆಟಿಗರಾದ ಶೋಯಬ್ ಮಲಿಕ್, ಮೊಹಮ್ಮದ್ ನಬಿ, ಶ್ರೀವಾಸ್ತವ್ ಗೋಸ್ವಾಮಿ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಎಲ್ಲರೂ ಮನೆಯಲ್ಲಿರುವ ಈ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ಮನೆಯ ಹೊರಗಡೆ ಆಹಾರವನ್ನು ಇಡುವಂತೆ ಶಿಖರ್ ಧವನ್ ಮನವಿ ಮಾಡಿದ್ದರು. ಬದುಕು ಸಹಜವಾಗಿರುವಾಗ ವೇಳೆ ಪ್ರಾಣಿ, ಪಕ್ಷಿಗಳಿಗೆ ಆಹಾರ ದೊರಕುತ್ತಿದ್ದವು. ಆದರೆ ಈಗ ಎಲ್ಲರೂ ಮನೆಯಲ್ಲೇ ಕಳೆಯುವುದರಿಂದ ಪ್ರಾಣಿ, ಪಕ್ಷಿಣಗಳು ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಈ ಬಗ್ಗೆ ಧವನ್ ವಿಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅಂದ ಹಾಗೆ ಗಾಯ ಮುಕ್ತಗೊಂಡಿರುವ ಶಿಖರ್ ಧವನ್, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿ ವೇಳೆ ಕಮ್‌ಬ್ಯಾಕ್ ಮಾಡಬೇಕಿತ್ತು. ಆದರೆ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ ಅಂತಿಮ ಎರಡು ಪಂದ್ಯಗಳನ್ನು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದರಿಂದ ಧವನ್ ಮತ್ತಷ್ಟು ಕಾಯಬೇಕಾಗಿದೆ. ಏತನ್ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದ್ದು, ಈ ಬಾರಿ ನಡೆಯುವುದೇ ಅನುಮಾನವೆನಿಸಿದೆ. ಐಪಿಎಲ್ 2020 ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಧವನ್ ಪ್ರತಿನಿಧಿಸುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UF7xXd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...