ಹೊಸದಿಲ್ಲಿ: ಇದು ಬಯೋಪಿಕ್ಗಳ ಕಾಲ. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಆಯ್ತು. ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಆಯ್ತು. ಬಾಕ್ಸಿಂಗ್ ತಾರೆ ಮೇರಿ ಕೋಮ್ ಕೂಡಾ ಆಯ್ತು. ಇದೀಗ ಸರದಿ. ಹೌದು, ಯುವರಾಜ್ ಸಿಂಗ್ ಜೀವನಾಧಾರಿತ ಚಿತ್ರವು ತೆರೆಗೆ ಅಪ್ಪಳಿಸಲಿದೆ. ಅಷ್ಟಕ್ಕೂ ಚಿತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲಿದೆಯೇ ? ಈ ಪ್ರಶ್ನೆಗೆ ಸ್ವತ: ಎರಡು ಬಾರಿಯ ವಿಶ್ವಕಪ್ ವಿಜೇತ ಹೀರೊ ಆಗಿರುವ ಯುವರಾಜ್ ಸಿಂಗ್ ಉತ್ತರ ನೀಡುತ್ತಾರೆ. ಆ ನಟ ಬೇರೆ ಯಾರೂ ಅಲ್ಲ. ಜನಪ್ರಿಯ ಗಲ್ಲಿ ಬಾಯ್ ಬಾಲಿವುಡ್ ಚಿತ್ರದಲ್ಲಿ ಎಂಸಿ ಶೇರ್ ಕಥಾಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿರುವ ನಟ ಸಿದ್ದಾಂತ್ ಚತುರ್ವೇದಿ. "ಬಹುಶ: ನನ್ನ ಪಾತ್ರವನ್ನು ನಾನೇ ನಿಭಾಯಿಸಿದರೆ ಹತಾಶೆಯಾಗಲಿದೆ. ನೋಡಿ ಅದು ನಿರ್ದೇಶಕರ ಕೆಲಸ. ಅವರೇ ನಿರ್ಧರಿಸಲಿದ್ದಾರೆ. ಹಾಗೊಂದು ವೇಳೆ ಬಾಲಿವುಡ್ ಚಿತ್ರ ನಿರ್ಮಾಣವಾದರೆ, 2019ರ ಗಲ್ಲಿ ಬಾಯ್ ಚಿತ್ರದಲ್ಲಿ ಎಂಸಿ ಶೇರ್ ಪಾತ್ರದಲ್ಲಿ ನಟಿಸಿರುವ ಸಿದ್ಧಾಂತ್ ಚತುರ್ವೇದಿ ಉತ್ತಮ ಆಯ್ಕೆಯಾಗಲಿದ್ದಾರೆ. ಅವರನ್ನು ನನ್ನ ಪಾತ್ರದಲ್ಲಿ ನೋಡಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ. 2011ನೇ ವಿಶ್ವಕಪ್ನಲ್ಲಿ ಕ್ಯಾನ್ಸರ್ ರೋಗದ ಹೊರತಾಗಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಯುವರಾಜ್ ಸಿಂಗ್ ದೇಶಕ್ಕಾಗಿ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ತದಾ ಬಳಿಕ ಕ್ಯಾನ್ಸರ್ ಗೆದ್ದು ಬಂದು ಕ್ರಿಕೆಟ್ ಜೀವನವನ್ನು ಮುಂದುವರಿಸಿದ್ದರು. ಭಾರತದ ಪರ 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್ ಅನುಕ್ರಮವಾಗಿ 1900, 8701 ಹಾಗೂ 1177 ರನ್ ಗಳಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 148 ವಿಕೆಟ್ಗಳನ್ನು ಕಬಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿರುವ ಯುವಿ, ಆಡಿರುವ ಒಂಬತ್ತು ಪಂದ್ಯಗಳಲ್ಲಿ 90.50ರ ಸರಾಸರಿಯಲ್ಲಿ 362 ರನ್ ಕಲೆ ಹಾಕಿದ್ದರು. ಬೌಲಿಂಗ್ನಲ್ಲೂ ಮಿಂಚಿದ ಯುವಿ 15 ವಿಕೆಟ್ಗಳನ್ನು ಕಬಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2wcFsOZ