ರಣಜಿ ಟ್ರೋಫಿ ಗೆಲುವು, ನಿಶ್ಚಿತಾರ್ಥ ಎರಡೂ ಖುಷಿ ತಂದಿದೆ: ಉನಾದ್ಕಟ್‌

ಹೊಸದಿಲ್ಲಿ: ಇದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂಲಕ ಸೌರಾಷ್ಟ್ರ ತಂಡಕ್ಕೆ ಚೊಚ್ಚಲ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಇತ್ತೀಚೆಗೆ ಮನೆಯವರು ತೋರಿಸಿದ್ದ ಹುಡುಗಿಯೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಇದರೊಂದಿಗೆ 2020 ಎಡಗೈ ವೇಗಿಗೆ ಅದೃಷ್ಠದ ವರ್ಷ ಎಂದು ಹೇಳಬಹುದು. ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ ಖಾತೆಯಲ್ಲಿ ಅವರೊಂದಿಗೆ ನಿಶ್ಚಿತಾರ್ಥದ ಮಾಡಿಕೊಂಡಿದ್ದ ಫೋಟೊವನ್ನು ಪೋಸ್ಟ್‌ ಮಾಡಿದ್ದರು. ಗುಜರಾತ್‌ ಹೈ ಕೋರ್ಟ್‌ನಲ್ಲಿ ವಕೀಲೆಯಾಗಿರುವ ರಿನ್ನಿ ಅವರೊಂದಿಗೆ 28ರ ಪ್ರಾಯದ ಉನಾದ್ಕಟ್‌ ವೃತ್ತಿ ಜೀವನದ ಎರಡನೇ ಇನಿಂಗ್ಸ್‌ ಆರಂಭಿಸಲು ಸಿದ್ಧರಾಗುತ್ತಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್‌ ಇಂಡಿಯಾ ಜತೆ ಮಾತನಾಡಿರುವ ಅವರು, "ನನ್ನ ಎಲ್ಲ ಸ್ಟಾರ್‌ಗಳನ್ನು ಈ ಸಮಯದಲ್ಲಿ ಜೋಡಿಸಲ್ಪಟ್ಟಿವೆ ಹಾಗೂ ನಾನು ಸಂತೋಷದ ವಲಯದಲ್ಲಿದ್ದೇನೆ. ಒಳ್ಳೆಯ ಸಮಯದಲ್ಲಿ ಎಲ್ಲವೂ ಆಗುತ್ತದೆ ಎಂದು ನಂಬಿದ್ದೆ ಹಾಗೂ ಇದು ನನ್ನ ಸಮಯ. ರಣಜಿ ಟ್ರೋಫಿ ಚಾಂಪಿಯನ್ಸ್‌ ಆದ ಬೆನ್ನಲ್ಲೆ ನನಗೆ ನಿಶ್ಚಿತಾರ್ಥವಾಯಿತು. ಜೀವನ ತುಂಬಾ ಅದ್ಭುತವಾಗಿದೆ,'' ಎಂದು ಹೇಳಿದರು. "ನನ್ನ ಪೋಷಕರು ಕಳೆದ ವರ್ಷವೇ ಹುಡುಗಿ ಹುಡುಕಲು ಆರಂಭಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಎಲ್ಲವೂ ಸಕಾರವಾಯಿತು. ಮದುವೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಆದರೆ, ಈ ವರ್ಷದ ಅಂತ್ಯದಲ್ಲಿ ವಿವಾಹ ನಡೆಯಬಹುದು,'' ಎಂದು ಹೇಳಿದ್ದಾರೆ. ಎಲ್ಲಿ ಮದುವೆ ನಡೆಯಲಿದೆ ಎಂಬುದನ್ನು ನನಗೆ ಗೊತ್ತಿಲ್ಲ. ಭಾವಿ ಪತ್ನಿ ರಿನ್ನಿ ಅವರ ಸ್ಥಳವಾದ ಗುಜರಾತ್‌ ಜುನಾಗಢದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಸರಳವಾಗಿ ನಡೆದಿದ್ದ ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸಹ ಆಟಗಾರ ಮತ್ತು ಅವರ ಪತ್ನಿಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು ಎಂದು ಉನಾದ್ಕಟ್‌ ತಿಳಿಸಿದ್ದಾರೆ. ಉನಾದ್ಕಟ್‌ ಅವರ ಇದು ಒಳ್ಳೆಯ ಸಮಯವೆಂದೇ ಹೇಳಬಹುದು. ಏಕೆಂದರೆ, ಆಫ್‌ ಹಾಗೂ ಆನ್‌ ಫೀಲ್ಡ್‌ನಲ್ಲಿ ಎಲ್ಲವೂ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ನಿಶ್ಚಿತಾರ್ಥವು ಒಂದು ಅಪ್ರತಿಮ ಸಮಾರಂಭವಾಗಿದ್ದು ಅದು ಸಾಕಷ್ಟು ಗಮನ ಸೆಳೆಯಿತು. ಅವರ ತಂಡದ ಸದಸ್ಯರು ಮತ್ತು ಹಿತೈಷಿಗಳು ಅವರಿಗೆ ಹೆಚ್ಚಿನ ಸಂತೋಷವನ್ನು ಹಾರೈಸಿದ್ದರು. ಸೌರಾಷ್ಟ್ರ ಎಡಗೈ ವೇಗಿ ಮುಂಬರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಉನಾದ್ಕಟ್‌ ರಾಜಸ್ಥಾನ್‌ ರಾಯಲ್ಸ್ ತಂಡದ ಕೀ ಬೌಲರ್‌ ಆಗಿದ್ದಾರೆ. ಮಾರ್ಚ್‌ 29ರಂದು ಐಪಿಎಲ್‌ ಆರಂಭವಾಗಬೇಕಿತ್ತು. ಆದರೆ, ಕೊರೊನಾ ವೈರಸ್‌ನಿಂದಾಗಿ 13ನೇ ಆವೃತ್ತಿಯ ಟೂರ್ನಿಯಲ್ಲಿ ಏಪ್ರಿಲ್‌ಗೆ 15ಕ್ಕೆ ಮುಂದೂಡಲಾಗಿದೆ. 2019/20ನೇ ಆವೃತ್ತಿಯ ರಣಜಿ ಟ್ರೋಫಿಯಲ್ಲಿ 10 ಪಂದ್ಯಗಳಾಡಿದ್ದ ಜಯದೇವ್‌ ಉನಾದ್ಕಟ್‌ ಒಟ್ಟು 67 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಮೊದಲ ರಣಜಿ ಬೌಲರ್‌ ಎನಿಸಿಕೊಂಡರು. ಫೈನಲ್‌ ಹಣಾಹಣಿಯಲ್ಲಿ ಬಂಗಾಳವನ್ನು ಮಣಿಸಿದ ಉನಾದ್ಕಟ್‌ ನಾಯಕತ್ವದ ಸೌರಾಷ್ಟ್ರ ತಂಡ ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WmDN43

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...