ಬುಮ್ರಾ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡೋದಾಗಿ ಹೇಳಿದ ಪಾಕ್‌ ಆಲ್‌ರೌಂಡರ್‌!

ಲಾಹೋರ್‌: ಜಾಗತಿಕ ಕ್ರಿಕೆಟ್‌ನಲ್ಲಿ ನೂತನ ಸ್ಟಾರ್‌ ವೇಗಿಯಾಗಿ ಮಿಂಚುತ್ತಿರುವ ಟೀಮ್‌ ಇಂಡಿಯಾದ ಜಸ್‌ಪ್ರೀತ್‌ ಬುಮ್ರಾ ಅವರ ದಾಳಿಯನ್ನು ಧೂಳೀಪಟ ಮಾಡೋದಾಗಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌ ಬಡಾಯಿ ಕೊಚ್ಚಿಕೊಂಡಿದ್ದಾರೆ. ತಾವೇನಾದರೂ ಇನ್ನೂ ಕ್ರಿಕೆಟ್‌ ಆಡುತ್ತಿದ್ದರೆ ಬುಮ್ರಾ ಬೌಲಿಂಗ್‌ನಲ್ಲಿ ಅಬ್ಬರಿಸುತ್ತಿದ್ದೆ ಎಂದಿದ್ದಾರೆ. "ನನ್ನ ವೃತ್ತಿಬದುಕಿನ ವೇಳೆ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿದ್ದೇನೆ. ಹೀಗಾಗಿ ಬುಮ್ರಾ ವಿರುದ್ಧ ಬ್ಯಾಟ್‌ ಮಾಡುವುದು ನನಗೆ ಖಂಡಿತಾ ಕಷ್ಟವಾಗುತ್ತಿರಲಿಲ್ಲ. ಅಂದಹಾಗೆ ಒತ್ತಡ ನನ್ನಮೇಲಲ್ಲ ಅವರ ಮೇಲೆ ಇರುತ್ತಿತ್ತು. ನಾನು ವಸೀಮ್‌ ಅಕ್ರಂ ಮತ್ತು ಗ್ಲೆನ್‌ ಮೆಗ್ರಾತ್‌ ಅವರಂತ ಶ್ರೇಷ್ಠ ವೇಗಿಗಳ ಎದುರು ಆಡಿದ್ದೇನೆ. ಇದಕ್ಕೆ ಹೋಲಿಸಿದರೆ ಬುಮ್ರಾ ನನ್ನ ಮುಂದೆ ಬಚ್ಚಾ. ಅವರೆದುರು ಅಬ್ಬರದ ಬ್ಯಾಟಿಂಗ್‌ ನಡೆಸುತ್ತಿದ್ದೆ," ಎಂದು ಕ್ರಿಕೆಟ್‌ ಪಾಕಿಸ್ತಾನ್‌ ವೆಬ್‌ಸೈಟ್‌ಗೆ ರಝಾಕ್‌ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 40 ವರ್ಷದ ಮಾಜಿ ಆಲ್‌ರೌಂಡರ್‌ ತಂಡದ ಪರ 1999ರಿಂದ 2013ರವರೆಗೆ ಒಟ್ಟು 46 ಟೆಸ್ಟ್‌, 265 ಏಕದಿನ ಮತ್ತು 32 ಟಿ20 ಪಂದ್ಯಗಳನ್ನು ಆಡಿದ್ದಾರೆ. ಬುಮ್ರಾ ಬೌಲಿಂಗ್‌ ಕುರಿತಾಗಿ ಮಾತುಗಳನ್ನು ಮುಂದುವರಿಸಿರುವ ರಝಾಕ್‌, "ಬುಮ್ರಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಗಣನೀಯ ರೀತಿಯಲ್ಲಿ ಪ್ರಗತಿ ಕಂಡಿದ್ದಾರೆ. ಅವರ ಬೌಲಿಂಗ್‌ ಶೈಲಿ ಬಹಳ ವಿಚಿತ್ರವಾದದ್ದು. ಆದರೂ ಚೆಂಡಿನ್‌ ಸೀಮ್‌ ಉತ್ತಮ ರೀತಿಯಲ್ಲಿ ನೆಲಕ್ಕೆ ಬೀಳುವಂತೆ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಯಶಸ್ಸು ಲಭ್ಯವಾಗುತ್ತಿದೆ," ಎಂದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ, ಏಕದಿನ ಕ್ರಿಕೆಟ್‌ನಲ್ಲಿ ಸದ್ಯ ವಿಶ್ವದ ನಂ.1 ಬೌಲರ್‌ ಆಗಿದ್ದಾರೆ. ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಬುಮ್ರಾ, ಚೇತರಿಕೆಯ ಹಾದಿಯಲ್ಲಿದ್ದು ತಂಡಕ್ಕೆ ಮರಳಲು ಅಭ್ಯಾಸ ಆರಂಭಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸ್ಟ್ರೆಂತ್‌ ಅಂಡ್‌ ಕಂಡೀಷನಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದ ರಜನಿಕಾಂತ್‌ ಶಿವಜ್ಞಾನಮ್‌ ಅವರೊಟ್ಟಿಗೆ ತಮ್ಮ ಸಾಮರ್ಥ್ಯ ವೃದ್ಧಿ ಮತ್ತು ಫಿಟ್ನೆಸ್‌ ಸಲುವಾಗಿ ಶ್ರಮವಹಿಸುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆ ಕಾರಣ ಬುಮ್ರಾ, ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಮತ್ತು ಟಿ20 ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ಅವರು ತಂಡಕ್ಕೆ ಮರಳುವುದು ಇನ್ನೂ ಖಾತ್ರಿಯಾಗದ ಕಾರಣ ಡಿ.6ರಂದು ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ತಲಾ 3 ಪಂದ್ಯಗಳ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಯಿಂದಲೂ ಹೊರಗುಳಿಯುವಂತಾಗಿದೆ. ಭಾರತ ತಂಡ 2020ರಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಆ ಹೊತ್ತಿಗೆ ಬುಮ್ರಾ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OM9tvw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...