ಎಚ್‌ಡಿಕೆ ಸರಕಾರದ ಅವೈಜ್ಞಾನಿಕ ಕ್ರಮ: ಗಡಿ ಸಂರಕ್ಷಣಾ ಆಯೋಗಕ್ಕೆ ನದಿ ರಕ್ಷಣೆಯ ಹೊಣೆ!

- ಶಶಿಧರ ಹೆಗಡೆ, ಬೆಂಗಳೂರು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರದ ಅವಧಿಯಲ್ಲಿ ಗಡಿ ಸಂರಕ್ಷಣೆ ಆಯೋಗದ ಸುಪರ್ದಿಗೆ ನದಿ ರಕ್ಷಣೆಯನ್ನೂ ವಹಿಸಲಾಗಿದೆ. ಇದರೊಂದಿಗೆ ನಿಷ್ಕ್ರಿಯವೆಂಬ ಅಪವಾದಕ್ಕೆ ಗುರಿಯಾಗಿರುವ ಗಡಿ ಆಯೋಗಕ್ಕೆ ಮತ್ತೊಂದು ಕಾರ್ಯಭಾರ ಹೊರಿಸಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಮತ್ತೊಮ್ಮೆ ತಗಾದೆ ತೆಗೆದಿದ್ದರಿಂದ ಈ ಅಂಶವೀಗ ಬೆಳಕಿಗೆ ಬಂದಿದೆ. ನಾಡು ನುಡಿ ಹಾಗೂ ನೆಲ ಜಲ ರಕ್ಷಣೆಗೆ ಪ್ರತ್ಯೇಕವಾದ ವ್ಯವಸ್ಥೆಯಿರಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಬೇಕು. ಇಂಥ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕನ್ನಡ ಪರ ಹೋರಾಟಗಾರರು ಹಾಗೂ ಚಿಂತಕರು ಆರಂಭದಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ, ಹಿಂದಿನ ಮೈತ್ರಿ ಸರಕಾರದ ವಿಚಿತ್ರ ನಿರ್ಧಾರದಿಂದ ಗಡಿ ಸಂರಕ್ಷಣಾ ಆಯೋಗವು 'ಕರ್ನಾಟಕ ಗಡಿ ಹಾಗೂ ನದಿಗಳ ಸಂರಕ್ಷಣಾ ಆಯೋಗ' ಎಂದು ಬದಲಾಗಿದೆ. ವಾಸ್ತವದಲ್ಲಿ ಗಡಿ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂಬ ಒತ್ತಾಯವಿದೆ. ನ್ಯಾ.ವಿ.ಎಸ್‌.ಮಳೀಮಠ್‌ ಅವರಿದ್ದಾಗಲೂ ಇದೇ ಸಲಹೆ ನೀಡಿದ್ದರು. ಆದರೆ, ಈ ಆಯೋಗಕ್ಕೆ ನದಿ ವಿವಾದ ತಳಕು ಹಾಕಿರುವ ಸರಕಾರ ಈ ಸಂಸ್ಥೆಯ ಉದ್ದೇಶವನ್ನೇ ಬುಡಮೇಲು ಮಾಡಲು ಹೊರಟಂತಾಗಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಜಲ ವಿವಾದವೇ ಬೇರೆ: ಅಂತಾರಾಜ್ಯ ಜಲ ವಿವಾದ ಇತ್ಯರ್ಥಕ್ಕೆ ಲಕ್ಷ್ಯ ಹರಿಸುವುದು ಆಯೋಗದ ಹೊಸ ಜವಾಬ್ದಾರಿ. ಜಲ ವಿವಾದಕ್ಕೂ ಗಡಿ ವಿವಾದಕ್ಕೂ ನಂಟು ಕಲ್ಪಿಸುವುದೇ ಅವೈಜ್ಞಾನಿಕ. ಯಾಕೆಂದರೆ ಜಲಸಂಪನ್ಮೂಲ ಇಲಾಖೆಯಲ್ಲಿ ಅಂತಾರಾಜ್ಯ ಜಲ ವಿವಾದ ಕೋಶವಿದೆ. ಇದರಲ್ಲಿತಾಂತ್ರಿಕ ಪರಿಣಿತರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಕಾನೂನು ಸಂಬಂಧವಾಗಿ ಕಾನೂನು ಇಲಾಖೆಯಲ್ಲೂ ಇದಕ್ಕೊಂದು ಕೋಶವಿದೆ. ನುರಿತ ವಕೀಲರ ತಂಡವೂ ಈ ಕಾರ್ಯದಲ್ಲಿ ನಿರತವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಸಿದ್ಧ ವಕೀಲ ಫಾಲಿ ಎಸ್‌.ನಾರಿಮನ್‌ ರಾಜ್ಯದ ತಂಡವನ್ನು ಮುನ್ನಡೆಸುತ್ತಾರೆ. ಹೀಗಿರುವಾಗ ಗಡಿ ರಕ್ಷಣೆಯೊಂದಿಗೆ ನದಿ ರಕ್ಷಣೆ ಕೈಗೊಳ್ಳಲು ಆಯೋಗಕ್ಕೆ ಭಾರ ಹಾಕಿರುವುದೇ ಅಸಮರ್ಪಕ ಎನ್ನಿಸಿಕೊಂಡಿದೆ. ಸಂಪರ್ಕವೇ ಇಲ್ಲ!ಕೃಷ್ಣಾ, ಮಹದಾಯಿ ಹಾಗೂ ಕಾವೇರಿ ಜಲ ವಿವಾದಗಳನ್ನು ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ವ್ಯಾಪ್ತಿಗೆ ವಹಿಸಲಾಗಿದೆ. ಆದರೆ, ಈ ಆಯೋಗಕ್ಕೂ ಜಲ ಸಂಪನ್ಮೂಲ ಇಲಾಖೆಗೂ ಸಂಪರ್ಕವೇ ಇದ್ದಂತಿಲ್ಲ. ಜಲ ವಿವಾದ ಸಂಬಂಧದಲ್ಲಿ ಅಂತಾರಾಜ್ಯ ಜಲ ವಿವಾದ ಕೋಶದೊಂದಿಗೆ ಈ ಆಯೋಗದ ಸಮನ್ವಯವೂ ಅಷ್ಟಕ್ಕಷ್ಟೇ ಎಂಬ ಆರೋಪವಿದೆ. ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದೊಂದಿಗೆ ನಮ್ಮ ಸಭೆ ನಡೆದಿರುವುದು ತಿಳಿದಿಲ್ಲ. ಆಯೋಗದವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರಷ್ಟೇ. - ಇಜಾಜ್‌ ಹುಸೇನ್‌, ಅಂತಾರಾಜ್ಯ ಜಲ ವಿವಾದ ಕೋಶದ ಮುಖ್ಯ ಎಂಜಿನಿಯರ್‌ ಗಡಿ ಮತ್ತು ನದಿ ವಿವಾದದ ವ್ಯತ್ಯಾಸ ಗೊತ್ತಿಲ್ಲದೇ ಈ ಉದ್ದೇಶಕ್ಕೆ ಒಂದೇ ಆಯೋಗ ರಚಿಸಿರುವುದು ಮೂರ್ಖತನ. ಗಡಿ ವಿವಾದ ಇತ್ಯರ್ಥಕ್ಕೆ ಪ್ರತ್ಯೇಕ ಸಮಿತಿಯೇ ಇರಬೇಕು. ನದಿ ವಿವಾದ ಸಂಬಂಧವೂ ಪ್ರತ್ಯೇಕ ಪ್ರಾಧಿಕಾರ ರಚಿಸಿದರೆ ಅಡ್ಡಿಯಿಲ್ಲ. - ಭೀಮಾಂಶಕರ ಪಾಟೀಲ, ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಗಡಿ ಹಾಗೂ ನದಿಗಳ ರಕ್ಷಣೆ ಆಯೋಗ ರಚಿಸಿ ಬಹುತೇಕ ವರ್ಷವಾಗಿದೆ. ಗಡಿ ವಿಚಾರದಲ್ಲಿನಾನು ಬಹಳ ವರ್ಷದಿಂದಲೂ ಕೆಲಸ ಮಾಡುತ್ತಿದ್ದೇನೆ. - ಕೆ.ಎನ್‌.ಬೆಂಗೇರಿ, ಗಡಿ ಆಯೋಗದ ಸದಸ್ಯ


from India & World News in Kannada | VK Polls https://ift.tt/2EVsWnE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...