ಹೊಸದಿಲ್ಲಿ: ಈರುಳ್ಳಿಯ ಬೆಲೆ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು ಮಿತಿಯನ್ನು ಪರಿಷ್ಕರಿಸಿದೆ. ಚಿಲ್ಲರೆ ಮಾರಾಟಗಾರರು 5 ಟನ್ ಹಾಗೂ ಸಗಟು ಮಾರಾಟಗಾರರು 25 ಟನ್ಗಿಂತ ಹೆಚ್ಚು ಈರುಳ್ಳಿ ದಾಸ್ತಾನು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆಯನ್ನು ಸುಗಮಗೊಳಿಸಲು ಈ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ವಿಷಯ ತಿಳಿಸಿದ್ದು ಆಮದು ಮಾಡಿಕೊಂಡಿರುವ ಈರುಳ್ಳಿ ದಾಸ್ತಾನಿಗೆ ಪರಿಷ್ಕೃತ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಚಿಲ್ಲರೆ ಮಾರಾಟಗಾರರಿಗೆ 10 ಟನ್ ಹಾಗೂ ಸಗಟು ಮಾರಾಟಗಾರರಿಗೆ 50 ಟನ್ ವರೆಗೆ ಮಾತ್ರ ಈರುಳ್ಳಿ ದಾಸ್ತಾನು ಮಾಡಲು ಅವಕಾಶವಿತ್ತು.
from India & World News in Kannada | VK Polls https://ift.tt/35ZFohN