- ಐತಿಚಂಡ ರಮೇಶ್ ಉತ್ತಪ್ಪ, ಇದು ಮೈಸೂರಿನ ಹೃದಯಭಾಗದ ಕುವೆಂಪುನಗರದಲ್ಲಿ ನಿತ್ಯ ಕಾಣುತ್ತಿರುವ ದೃಶ್ಯ. ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿರುವ ಪರಿ. ಕುವೆಂಪುನಗರದ ಸುತ್ತಮುತ್ತ ಬಡಾವಣೆಗಳಿಂದ ಈ ರೀತಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಈ ರಸ್ತೆಯಲ್ಲಿಯೇ ಪೋಲೀಸ್ ಠಾಣೆ ಇದೆ, ಆರ್ಟಿಒ ಹಾಗೂ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ನಿವಾಸ ಇದೆ. ಇವರ ಕಣ್ಣೆದುರಿಗೆ ಈ ರೀತಿ ಮಕ್ಕಳನ್ನು ಜಾನುವಾರುಗಳನ್ನು, ಕುರಿಗಳನ್ನು ಸಾಗಿಸುವಂತೆ ನಿತ್ಯ ಕರೆದೊಯ್ಯುತ್ತಿದ್ದರೂ ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ತಡೆದು ಇದರ ಚಾಲಕನಿಗೆ ಬುದ್ಧಿ ಹೇಳುವುದಿಲ್ಲ. ಏಕೆಂದರೆ ನಮ್ಮದು ಹಗಲು ಕುರುಡಿನ ವ್ಯವಸ್ಥೆ. ಊರವರ ಉಸಾಬರಿ ನಮಗೆ ಏಕೆ ಎಂಬ ಮನೋಭಾವನೆ. ಗೂಡ್ಸ್ ವಾಹನಗಳಲ್ಲಿಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಕರೆದೊಯ್ಯುವಂತಿಲ್ಲಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದನ್ನು ಆರ್ಟಿಒ ಹಾಗೂ ಪೊಲೀಸ್ ಇಲಾಖೆಯೂ ಜಾರಿಗೊಳಿಸಿದೆ. ಆದರೆ, ಇತರ ವಾಹನಗಳ ಗೂಡ್ಸ್ ತುಂಬುವ ಜಾಗದಲ್ಲಿಮಕ್ಕಳನ್ನು ತುಂಬಿ ಕರೆದೊಯ್ಯಬಹುದೇ ಎನ್ನುವುದು ಈಗಿನ ಪ್ರಶ್ನೆ. ಏಕೆಂದರೆ, ಇದು ಪ್ರಯಾಣಿಕರನ್ನು ಕರೆದೊಯ್ಯುವ ಆಟೊ ರಿಕ್ಷಾ. ಇದರಲ್ಲಿಪ್ರಯಾಣಿಕರ ಸಾಮಗ್ರಿಗಳನ್ನು ತುಂಬುವ ಜಾಗದಲ್ಲಿಮಕ್ಕಳನ್ನು ತುಂಬಿ ಸಾಗಿಸಲಾಗುತ್ತಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಗೂಡ್ಸ್ ವಾಹನಗಳಲ್ಲಿಮಕ್ಕಳನ್ನು ಕರೆದೊಯ್ಯುವ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿಡಿಡಿಪಿಐ ಅವರು ಬಿಇಒಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೂ ಈ ರೀತಿ ಅಪಾಯಕಾರಿಯಾಗಿ ಮಕ್ಕಳನ್ನು ಕರೆದೊಯ್ಯುತ್ತಿರುವುದು ನಿಂತಿಲ್ಲ. ಉರುಳಿನಂತಹ ಬೇಲಿ ಈ ಚಿತ್ರದಲ್ಲಿರುವ ಆಟೊ ರಿಕ್ಷಾದಲ್ಲಿ ಮಕ್ಕಳನ್ನು ತುಂಬಲಾಗಿದೆ. ಸಾಮಗ್ರಿ ತುಂಬುವ ಜಾಗದಲ್ಲಿರಸ್ತೆ ಬದಿಗೆ ಮುಖಮಾಡಿ ಮಕ್ಕಳನ್ನು ಕೂರಿಸಿದ್ದು, ಅವರು ಹೊರ ಬೀಳದಿರಲಿ ಎಂದು ಜಾನುವಾರುಗಳಿಗೆ ತಡೆ ಬೇಲಿ ನಿರ್ಮಿಸುವಂತೆ ಹಗ್ಗ ಬಿಗಿಯಲಾಗಿದೆ. ಒಂದು ವೇಳೆ ಚಾಲಕ ಕೊಂಚ ಎಚ್ಚರ ತಪ್ಪಿ ಬ್ರೇಕ್ ಹಾಕಿದರೆ, ಇಲ್ಲವೇ ಗುಂಡಿಗೆ ಬಿದ್ದಲ್ಲಿ, ಹಂಪ್ ಹಾರಿಸಿದಲ್ಲಿಮಕ್ಕಳು ಕೆಳ ಜಾರುವುದು ಗ್ಯಾರಂಟಿ. ಈ ಸಂದರ್ಭ ಹಗ್ಗ ಕುತ್ತಿಗೆಗೆ ಸಿಲುಕಿ ಅನಾಹುತ ಸಂಭವಿಸಬಹುದು. ಜೀವದ ಜೊತೆ ಚೆಲ್ಲಾಟ ಪೋಷಕರಿಗೆ ತಮ್ಮ ಮಕ್ಕಳು ಒಮ್ಮೆ ಶಾಲೆಗೆ ಹೋಗಿ ಬರಬೇಕು. ಶಿಕ್ಷಕರಿಗೆ ಹೇಗಾದರೂ ಮಕ್ಕಳು ಬರಲಿ, ಬಂದ ನಂತರ ಮಾತ್ರ ನಮ್ಮ ಜವಾಬ್ದಾರಿ ಎಂಬ ಸ್ಥಿತಿ. ಆಡಳಿತ ಮಂಡಳಿಗೆ ಫೀಸ್ ವಸೂಲಿ ಚಿಂತೆ. ಇದರ ನಡುವೆ ಮಕ್ಕಳನ್ನು ಕೇಳುವವರೇ ಇಲ್ಲ. ವಾಹನ ಹೇಗಿರಬೇಕು? ಕಾನೂನಿನಲ್ಲಿಶಾಲಾ ಮಕ್ಕಳನ್ನು ಸಾಗಿಸುವ ವಾಹನ ಹೇಗಿರಬೇಕು ಎನ್ನುವ ಕುರಿತು ಕಟ್ಟುನಿಟ್ಟಿನ ಸೂಚನೆ ಇದೆ. ವಾಹನದ ಹೊರಗೆ ಮಕ್ಕಳು ಕೈ,ಕಾಲು ಇಳಿಬಿಡುವಂತಿಲ್ಲ. ಕಿಟಕಿ ಮುಚ್ಚಿರಬೇಕು. ವಾಹನಕ್ಕೆ ಕ್ಲೀನರ್ ಇರಬೇಕು. ಬ್ಯಾಗ್ಗಳಲ್ಲಿಟಾಪ್ನಲ್ಲಿ ಇಲ್ಲವೇ ಎರಡು ಬದಿಯಲ್ಲಿತೂಗಿಬಿಡುವಂತಿಲ್ಲ. ಆ ವಾಹನ ಆರ್ಟಿಒ ಕಚೇರಿ ಅನುಮತಿ ಪಡೆದಿರಬೇಕು ಎಂದಿದೆ. ಆದರೆ, ಇದು ಪಾಲನೆಗೆ ಅಲ್ಲ ಎನ್ನುವುದು ಎಲ್ಲರ ನಿರ್ಲಕ್ಷ್ಯ. ಎಲ್ಲಿದೆ ಕ್ಯಾಬ್ ಕಮಿಟಿ? ಪ್ರತಿ ಶಾಲೆಯಲ್ಲಿಪೋಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸ್ಕೂಲ್ ಕ್ಯಾಬ್ ಕಮಿಟಿ ರಚಿಸಬೇಕು. ಈ ಸಮಿತಿ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳನ್ನು ಪರಿಶೀಲಿಸಿ ದೃಢೀಕರಿಸಬೇಕು. ಇದರ ಆಧಾರದಲ್ಲಿ ಆರ್ಟಿಒ ಕಚೇರಿಯಿಂದ ಅನುಮತಿ ನೀಡುತ್ತಾರೆ. ಈ ವರ್ಷ ಹೊರಡಿಸಿದ ಆದೇಶದ ಇದು. ಎಲ್ಲಾಶಾಲೆಗಳ ನಂಬರ್ ಪ್ಲೇಟ್ ಇಲ್ಲ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿಒಂದು. ಇಂತಹ ಪ್ರದೇಶದಲ್ಲಿಈ ರೀತಿ ಅಪಾಯಕಾರಿಯಾಗಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಪೊಲೀಸ್, ಆರ್ಟಿಒ ಅಧಿಕಾರಿಗಳ ನಿರ್ಲಕ್ಷ್ಯ ಹೇಗಿದೆ ಎಂದರೆ ಈ ಆಟೊ ರಿಕ್ಷಾಗೆ ನಂಬರ್ ಪ್ಲೇಟ್ ಕೂಡ ಇಲ್ಲ. ಕೇವಲ ದಂಡ ವಸೂಲಿಗೆ ಆಸಕ್ತರಾಗುವ ಪೊಲೀಸರಿಗೆ ತಮ್ಮ ಠಾಣೆ ಮುಂದೆ ಸಾಗುವ ಈ ವಾಹನ ಇನ್ನೂ ಕಣ್ಣಿಗೆ ಬೀಳದಿರುವುದು ಅಚ್ಚರಿ ಎಂದು ಸಾರ್ವಜನಿಕರು ಹೇಳುತ್ತಾರೆ.
from India & World News in Kannada | VK Polls https://ift.tt/2P76Hjo