ಹೊಸದಿಲ್ಲಿ: ಈ ದಶಕದ ಅಚ್ಚು ಮೆಚ್ಚಿನ ನಾಯಕ, ವಿಕೆಟ್ಕೀಪರ್ ಮತ್ತು ಆಟಗಾರ ಯಾರೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ () ತನ್ನ ಸೋಷಿಯಲ್ ಮೀಡಿಯಾ ಖಾತೆ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಅಭಿಮಾನಿಗಳ ಉತ್ತರ ಬಹುತೇಕ ಏಕಮುಖವಾಗಿ ಮೂಡಿ ಬಂದಿದೆ. ಐಸಿಸಿಯ ಈ ಪ್ರಶ್ನೆಗೆ ನಾ ಮುಂದು ತಾ ಮುಂದು ಎಂದು ಉತ್ತರಿಸಿರುವ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಮಾಜಿ ನಾಯಕ ಅವರನ್ನು ನೆಚ್ಚಿನ ನಾಯಕ, ನೆಚ್ಚಿನ ವಿಕೆಟ್ಕೀಪರ್ ಹಾಗೂ ನೆಚ್ಚಿನ ಆಟಗಾರನ ವಿಭಾಗಗಳಲ್ಲಿ ಬಹು ಸಂಖ್ಯೆಯಲ್ಲಿ ಆಯ್ಕೆ ಮಾಡಿದ್ದಾರೆ. ಧೋನಿ ಇತ್ತೇಚೆಗಷ್ಟೇ ತಮ್ಮ ವೃತ್ತಿ ಬದುಕಿನಲ್ಲಿ 15 ವರ್ಷಗಳನ್ನು ಪೂರೈಸಿದ ಸಂಭ್ರಮ ಆಚರಿಸಿದ್ದಾರೆ. 2004ರಲ್ಲಿ ಅವರು ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ, ಬಳಿಕ 2017ರಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ತಮ್ಮ ನಾಯಕತ್ವವನ್ನು ಯುವ ನಾಯಕ ವಿರಾಟ್ ಕೊಹ್ಲಿ ಹಸ್ತಾಂತರಿಸಿದರು. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ () ಟೂರ್ನಿಯಲ್ಲಿ ಈಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗೇ ಉಳಿದಿದದ್ದಾರೆ. "ನೆಚ್ಚಿನ ನಾಯಕ, ನೆಚ್ಚಿನ ವಿಕೆಟ್ಕೀಪರ್ ಹಾಗೂ ನೆಚ್ಚಿನ ಆಟಗಾರ ಎಲ್ಲವೂ ಎಂಎಸ್ ಧೋನಿ," ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ, "ಭಾರತ ಕಂಡ ಅತ್ಯುತ್ತಮ ನಾಯಕ. ವಿಶ್ವ ಶ್ರೇಷ್ಠ ನಾಯಕ ಕೂಡ," ಎಂದು ಗುಣಗಾನ ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಟೂರ್ನಿಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 1983ರ ಬಳಿಕ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಕೀರ್ತಿ ಧೋನಿ ಅವರದ್ದು. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡ ಪ್ರಶಸ್ತಿ ಎತ್ತಿ ಹಿಡಿದಿತ್ತು. ಅಂದಿನಿಂದ ಪ್ರಾರಂಭವಾದ ಧೋನಿ ಯುಗ ಭಾರತ ತಂಡವನ್ನು ಯಶಸ್ಸಿನ ಅಲೆಯಲ್ಲಿ ಸಾಗುವಂತೆ ಮಾಡಿತು. ಟೆಸ್ಟ್ ಕ್ರಿಕೆಟ್ನಲ್ಲೂ ಭಾರತ ತಂಡ ಧೋನಿ ಸಾರಥ್ಯದಲ್ಲಿ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಿತ್ತು. ಬಳಿಕ ಭಾರತದಲ್ಲಿ ನಡೆದ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಎತ್ತಿ ಹಿಡಿದಿತ್ತು. ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ 2ನೇ ವಿಶ್ವಕಪ್ ಗೆದ್ದುಕೊಟ್ಟ ಧೋನಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿದ್ದರು. ಬಳಿಕ 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಒಟ್ಟಾರೆ ಐಸಿಸಿ ಟೂರ್ನಿಗಳಲ್ಲಿ ಧೋನಿ ಸಾರಥ್ಯದ ಟೀಮ್ ಇಂಡಿಯ ಹಲವು ಪ್ರಶಸ್ತಿಗಳನ್ನು ಬೇಟೆಯಾಡಿತ್ತು. ಇದೇ ವೇಳೆ ಧೋನಿ ಅಚ್ಚುಮೆಚ್ಚಿನ ನಾಯಕ ಎಂದು ಪಾಕಿಸ್ತಾನದಿಂದಲೂ ಅಭಿಮಾನಿಗಳು ಟ್ವೀಟ್ ಮಾಡಿರುವುದು ವಿಶೇಷ. ಮತ್ತೂ ಕೆಲ ಅಭಿಮಾನಿಗಳು ಈ ವರ್ಷ ಧೋನಿ ನಾಯಕತ್ವ ವಹಿಸಿದ್ದರೆ ಖಂಡಿತವಾಗಿಯೂ ವಿಶ್ವಕಪ್ ಗೆಲ್ಲುತ್ತಿದ್ದೆವು ಎಂದಿದ್ದಾರೆ. ಮತ್ತೂ ಕೆಲ ಅಭಿಮಾನಿಗಳು ಧೋನಿ ಭಾರತ ಏಕದಿನ ತಂಡದ ನಾಯಕನಾಗಿಯೂ, ರೋಹಿತ್ ಟಿ20 ತಂಡದ ಹಾಗೂ ವಿರಾಟ್ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಬೇಕೆಂಬ ಸಲಹೆ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35SfTiK