ಮೈಸೂರು: ತಮಿಳುನಾಡು ವಿರುದ್ಧದ ಗೆಲುವಿನೊಂದಿಗೆ ಈ ವರ್ಷ ರಣಜಿ ಟ್ರೋಫಿಯಲ್ಲಿ ಭರ್ಜರಿ ಆರಂಭ ಕಂಡ ಮಾಜಿ ಚಾಂಪಿಯನ್ಸ್ ತಂಡ, ತನ್ನ ಎರಡನೇ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಜಿದ್ದಾಜಿದ್ದಿನ ಪೈಪೋಟಿಯ ನಡುವೆ ಇನಿಂಗ್ಸ್ ಮುನ್ನಡೆಯಲ್ಲಿ ಡ್ರಾ ಸಾಧಿಸಿತ್ತು. ಆದರೀಗ ಎದುರು ಸೋಲಿನ ಸುಳಿಗೆ ಸಿಲುಕಿದೆ. ಇಲ್ಲಿನ ಎಸ್ಡಿಎನ್ಆರ್ ಒಡೆಯರ್ ಕ್ರೀಡಾಂಗಣ(ಗಂಗೋತ್ರಿ ಗ್ಲೇಡ್ಸ್)ದಲ್ಲಿ ಬುಧವಾರ ಆರಂಭಗೊಂಡ 'ಬಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಹಿಮಾಚಲ ಪ್ರದೇಶ ಎದುರು ಮೊದಲ ದಿನವೇ ತನ್ನ ಪ್ರಥಮ ಇನಿಂಗ್ಸ್ನಲ್ಲಿ 166 ರನ್ಗಳ (67.2 ಓವರ್) ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿದೆ. ಟಾಸ್ ಗೆದ್ದು ಬೃಹತ್ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ ತೆಗೆದುಕೊಂಡ ಕರ್ನಾಟಕ ಎದುರಾಳಿಯ ಮಾರಕ ಬೌಲಿಂಗ್ ದಾಳಿ ಎದುರು ತಬ್ಬಿಬ್ಬಾಯಿತು. ಹಿಮಾಚಲ ಪ್ರದೇಶ ತಂಡದ ಬಲಗೈ ವೇಗಿಗಳಾದ ಕಣ್ವರ್ ಅಭಯ್ (37ಕ್ಕೆ 5), ವೈಭವ್ ಅರೋರ (41ಕ್ಕೆ 2) ಮತ್ತು ಅನುಭವಿ ರಿಶಿ ಧವನ್ (27ಕ್ಕೆ 3) ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿ ಆತಿಥೇಯ ಕರ್ನಾಟಕ ತಂಡದ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಪರೇಡ್ ಮಾಡುವಂತೆ ಮಾಡಿದರು. ಕರ್ನಾಟಕ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ (0) ಮತ್ತು ದೇವದತ್ ಪಡಿಕ್ಕಲ್ (0) ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರುತ್ತಿದ್ದಂತೆಯೇ ಕರ್ನಾಟಕ ತಂಡದ ಪತನ ಆರಂಭವಾಯಿತು. ಪರಿಣಾಮ 89 ರನ್ ಗಳಿಸುವ ಹೊತ್ತಿಗಾಗಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೂ, ನಾಯಕ ಕರುಣ್ ನಾಯರ್ ಅವರ ಜವಾಬ್ದಾರಿಯುತ ಪ್ರದರ್ಶನದಿಂದ ರಾಜ್ಯ ತಂಡ 150 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ತಂಡಕ್ಕೆ ರನ್ ಹೆಕ್ಕಿತಂದ ಕರುಣ್, 185 ಎಸೆತಗಳಲ್ಲಿ 8 ಫೋರ್ಗಳನ್ನು ಒಳಗೊಂಡ 81 ರನ್ಗಳ ಕೊಡುಗೆ ಸಲ್ಲಿಸಿದರು. ಉಳಿದಂತೆ ಡಿ. ನಿಶ್ಚಲ್ (16), ಶ್ರೇಯಸ್ ಗೋಪಾಲ್ (27), ಜೆ ಸುಚಿತ್ (10) ಮತ್ತು ಅಭಿಮನ್ಯು ಮಿಥುನ್ (21) ಮಾತ್ರವೇ ಎರಡಂಕಿಯ ರನ್ ಗಳಿಸಿದ ಬ್ಯಾಟ್ಸ್ಮನ್ಗಳೆನಿಸಿದರು. ಮೂರು ವಿಕೆಟ್ ಕಳೆದುಕೊಂಡ ಹಿಮಾಚಲ ತಂಡ ಆತಿಥೇಯ ತಂಡವನ್ನು ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿದ ಬಳಿಕ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಹಿಮಾಚಲ ತಂಡ, ದಿನದಾಟದ ಅಂತ್ಯಕ್ಕೆ 17 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 29 ರನ್ಗಳನ್ನು ಗಳಿಸಿದೆ. ಎದುರಾಳಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಪ್ರಶಾಂತ್ ಚೋಪ್ರಾ (5), ಸುಮೀತ್ ವರ್ಮಾ (7) ಮತ್ತು ಅಂಕಿತ್ ಕಲ್ಸಿ (0) ಅವರನ್ನು ಔಟ್ ಮಾಡಿದ ಕರ್ನಾಟಕ ತಂಡ ತಿರುಗೇಟು ನೀಡಿದೆ. ರಾಜ್ಯದ ಪರ ಎಡಗೈ ವೇಗಿ ಪ್ರತೀಕ್ ಜೈನ್ (11ಕ್ಕೆ 2) ಯಶಸ್ವಿ ಬೌಲರ್ ಎನಿಸಿದರೆ, ಅವರಿಗೆ ವಾಸುಕಿ ಕೌಶಿಕ್ (10ಕ್ಕೆ 1) ಉತ್ತಮ ಸಾಥ್ ನೀಡಿದರು. ಗ್ರಹಣ ಕಾರಣ ಗುರುವಾರ ತಡವಾಗಿ ಆಟ ಆರಂಭಸೂರ್ಯಕ್ರಹಣ ಕಾರಣ ಗುರುವಾರ ಪಂದ್ಯ 2 ಗಂಟೆ ತಡವಾಗಿ ಆರಂಭವಾಗಲಿದೆ. 9.30ಕ್ಕೆ ಆರಂಭವಾಗಬೇಕಿದ್ದ 2ನೇ ದಿನದಾಟ ಗುರುವಾರ ಬೆಳಗ್ಗೆ 11.15ಕ್ಕೆ ಆರಂಭವಾಗಲಿದೆ. ಈ ಅವಧಿಯಲ್ಲಿ ಕಡಿತವಾಗುವ ಓವರ್ಗಳನ್ನು ಪಂದ್ಯದ 3ನೇ ಮತ್ತು 4ನೇ ದಿನದಾಟದಲ್ಲಿ ಸೇರಿಸಲಾಗುತ್ತದೆ. ಸಂಕ್ಷಿಪ್ತ ಸ್ಕೋರ್ ಕರ್ನಾಟಕ: ಮೊದಲ ಇನಿಂಗ್ಸ್ 67.2 ಓವರ್ಗಳಲ್ಲಿ 166/10 (ಡಿ ನಿಶ್ಚಲ್ 16, ಕರುಣ್ ನಾಯರ್ 81, ಶ್ರೇಯಸ್ ಗೋಪಾಲ್ 27, ಅಭಿಮನ್ಯು ಮಿಥುನ್ 21; ಕಣ್ವರ್ ಅಭಯ್ 37ಕ್ಕೆ 5, ವೈಭವ್ ಅರೋರ 41ಕ್ಕೆ 2, ಅನುಭವಿ ರಿಶಿ ಧವನ್ 27ಕ್ಕೆ 3). ಹಿಮಾಚಲ ಪ್ರದೇಶ: ಮೊದಲ ಇನಿಂಗ್ಸ್ 17 ಓವರ್ಗಳಲ್ಲಿ 29/3 (ಪ್ರಿಯಾನ್ಷು ಖಂಡೂರಿ ಔಟಾಗದೆ 14, ಪ್ರಶಾಂತ್ ಚೋಪ್ರಾ 5, ಸುಮೀತ್ ವರ್ಮಾ 7; ಪ್ರತೀಕ್ ಜೈನ್ 11ಕ್ಕೆ 2, ವಾಸುಕಿ ಕೌಶಿಕ್ 10ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2t0oT6T