ಬಹಿರಂಗ ಪ್ರಚಾರ ಅಂತ್ಯ, ಸ್ತಬ್ಧಕಾಲ ಆರಂಭ : ಉಪಚುನಾವಣೆ ಕುರಿತು ತಿಳಿಯಲೇಬೇಕಾದ ಮಾಹಿತಿಗಳಿವು!

ಬೆಂಗಳೂರು: ರಾಜ್ಯದ ಹದಿನೈದು ಕಣ ರಂಗೇರಿದ್ದು ಮಂಗಳವಾರ ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಚುನಾವಣೆ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಎಲ್ಲ ತಯಾರಿ ಮಾಡಿಕೊಂಡಿದೆ. ಪ್ರಚಾರ ಸಂದರ್ಭದಲ್ಲಿನ ಎಲ್ಲಅಕ್ರಮಗಳ ಮೇಲೂ ಕಣ್ಣಿಟ್ಟು ಪ್ರಕರಣ ದಾಖಲಿಸಿದೆ. ಪಕ್ಷವಾರು ಸ್ಪರ್ಧೆಗಿಳಿದವರ ಸಂಖ್ಯೆ
  • ಕಾಂಗ್ರೆಸ್‌ -15
  • ಬಿಜೆಪಿ -15
  • ಜೆಡಿಎಸ್‌ -12
  • ಎನ್‌ಸಿಪಿ - 1
  • ಬಿಎಸ್‌ಪಿ 2
  • ನೋಂದಾಯಿತ ಪ್ರಾದೇಶಿಕ ಪಕ್ಷ - 45
  • ಪಕ್ಷೇತರ ಅಭ್ಯರ್ಥಿಗಳು - 75
  • ಕಣದಲ್ಲಿರುವವರು ಒಟ್ಟು ಅಭ್ಯರ್ಥಿಗಳು - 165
ಸ್ಥಬ್ದ ಕಾಲ ಆರಂಭ ಮತದಾನ ಆರಂಭಗೊಳ್ಳುವ 48 ಗಂಟೆಗಳ ಸಮಯವನ್ನು ಸ್ಥಬ್ದ ಕಾಲ ಎಂದು ಆಯೋಗ ಕರೆದಿದೆ.
  • *ಈ ಸಮಯದಲ್ಲಿಬಹಿರಂಗ ಪ್ರಚಾರ ನಡೆಸುವಂತಿಲ್ಲ
  • *ಕ್ಷೇತ್ರದಲ್ಲಿ6 ಗಂಟೆ ನಂತರ ಅಭ್ಯರ್ಥಿ ಹೊರತುಪಡಿಸಿ ಬೇರೆ ಕ್ಷೇತ್ರದವರು ಇರುವಂತಿಲ್ಲ
  • *ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಬಹುದು.
  • *ಕ್ಷೇತ್ರ ವ್ಯಾಪ್ತಿಯ ಎಲ್ಲಹೋಟೆಲ್‌, ಲಾಡ್ಜ್‌ಗಳನ್ನು ಖಾಲಿ ಮಾಡಬೇಕು
ಮತದಾನ ಎಲ್ಲಿ? ಯಾವಾಗ?
  • ಕ್ಷೇತ್ರಗಳು: 15
  • ಮತದಾನ: ಡಿ.5
  • ಸಮಯ: ಬೆಳಗ್ಗೆ 7ರಿಂದ ಸಂಜೆ 6 ಗಂಟೆ
  • ಎಣಿಕೆ: ಡಿಸೆಂಬರ್‌ 9
ಶಾಯಿ ಗುರುತು ಯಾವ ಬೆರಳಿಗೆ? ಈ ಬಾರಿ ಎಡಗೈ ತೋರು ಬೆರಳಿಗೆ ಗುರುತು ಹಾಕಲಾಗುತ್ತದೆ. ಇವಿಎಂ ಬಳಕೆ
  • ಎಂ 3 ಇವಿಎಂ ಯಂತ್ರ ಬಳಕೆ
  • 8326 ಬ್ಯಾಲೆಟ್‌ ಯುನಿಟ್‌
  • 8186 ಕೌಂಟಿಂಗ್‌ ಯುನಿಟ್‌
  • 7876 ವಿವಿಪ್ಯಾಟ್‌ ಅಳವಡಿಕೆ
ಮತದಾರರು ಎಷ್ಟಿದ್ದಾರೆ?
  • ಪುರುಷ - 19,25529
  • ಮಹಿಳೆ - 18,52,027
  • ತೃತೀಯ ಲಿಂಗಿಗಳು - 414
  • ನವಮತದಾರರು - 79714
  • ಹಕ್ಕು ಚಲಾಯಿಸುವವರು ಒಟ್ಟು ಸಂಖ್ಯೆ - 37, 82, 681
ಮತಗಟ್ಟೆ ಎಷ್ಟಿವೆ
  • 4185 ಕೇಂದ್ರ ಸ್ಥಾಪನೆ
  • 39 ಸಖಿ ಮತಗಟ್ಟೆ
  • 13 ವಿಶೇಷಚೇತನರ ಮತಗಟ್ಟೆ
  • 03 ಎಥ್ನಿಕ್‌ ಮತಗಟ್ಟೆ
ಸಿಬ್ಬಂದಿ ಬಳಕೆ
  • 19,299 ಮತಗಟ್ಟೆ ಅಧಿಕಾರಿಗಳು
  • 900 ವೀಕ್ಷಕರು
  • 42,509 ಒಟ್ಟು ಸಿಬ್ಬಂದಿ
ಸೂಕ್ಷ್ಮತೆಗೆ ಕ್ರಮಗಳು
  • 884 ಅತಿಸೂಕ್ಷ್ಮ ಮತಗಟ್ಟೆ
  • 206 ಮತಗಟ್ಟೆಯಲ್ಲಿ ವೆಬ್‌ ಕಾಸ್ಟಿಂಗ್‌
  • 259 ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ
  • 805 ಮೈಕ್ರೋ ಅಬ್ಸರ್ವರ್‌ ನಿಯೋಜನೆ
  • 414 ಕೇಂದ್ರಗಳಿಗೆ ಕೇಂದ್ರ ಭದ್ರತಾ ಸಿಬ್ಬಂದಿ (ಸಿಎಪಿಎಫ್‌ ) ನಿಯೋಜನೆ
ಬಿಗಿ ಕ್ರಮ: ಚುನಾವಣಾ ಅಕ್ರಮ ತಡೆಗಟ್ಟುವುದಕ್ಕೆ ಆಯೋಗ ಬಿಗಿ ಕ್ರಮ ಕೈಗೊಂಡಿದೆ. 10,70, 46, 106.56 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡು 197 ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಎಲ್ಲಪ್ರಕರಣಗಳನ್ನೂ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಆಯೋಗ ಸೂಚನೆ ನೀಡಿದೆ. ಅಕ್ರಮದ ವಿರುದ್ಧ ಕ್ರಮಗಳು
  • 4,16,09, 145 ರೂ. ನಗದು
  • 4,58,57, 092 ರೂ.ಮೌಲ್ಯದ ಮದ್ಯ
  • 4,950 ರೂ. ಮೌಲ್ಯದ ಮಾದಕ ವಸ್ತು
  • 1,95,74, 919 ರೂ. ಮೌಲ್ಯದ ಗೃಹ ಬಳಕೆ ವಸ್ತುಗಳು
ಪ್ರಮುಖರ ವಿರುದ್ಧ ಎಫ್‌ಐಆರ್‌
  • ಹಣ ಹಂಚಿಕೆ ಆರೋಪ: ಡಿಸಿಎಂ ಗೋವಿಂದ ಕಾರಜೋಳ
  • ಬಿಜೆಪಿ ನೋಟು-ಕಾಂಗ್ರೆಸ್‌ಗೆ ಓಟು ಹೇಳಿಕೆ: ಮಾಜಿ ಸಿಎಂ ಸಿದ್ದರಾಮಯ್ಯ
  • ನಿಂದನಾತ್ಮಕ ಹೇಳಿಕೆ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌
  • ಜಾತಿ ಪ್ರಚೋದನೆ ಹೇಳಿಕೆ: ಸಚಿವ ಬಿ.ಶ್ರೀರಾಮುಲು, ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಶಿವರಾಜ್‌ ತಂಗಡಗಿ
  • ಮಕ್ಕಳ ಬಳಕೆ: ಬೆಳಗಾವಿಯಲ್ಲಿ ಮಕ್ಕಳನ್ನು ಪ್ರಚಾರಕ್ಕೆ ಬಳಸಿರುವ ಕಾರಣಕ್ಕಾಗಿ ಕಾಂಗ್ರೆಸ್‌ ಮುಖಂಡರು
  • ಲಿಂಗಾಯತ ವೀರಶೈವ ಮತ ಬಿಜೆಪಿಗೆ ತಪ್ಪಬಾರದು ಹೇಳಿಕೆ: ಸಿಎಂ ಯಡಿಯೂರಪ್ಪ


from India & World News in Kannada | VK Polls https://ift.tt/381FQ0G

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...