ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತವರೇ ನಿಜವಾದ ಅನರ್ಹರು : ಸಿದ್ದರಾಮಯ್ಯಗೆ ಟಾಂಗ್‌ ನೀಡಿದ ಕಟೀಲ್

ಚಿಕ್ಕಬಳ್ಳಾಪುರ: ರಾಜೀನಾಮೆ ಕೊಟ್ಟ ಒಂದೇ ಕಾರಣಕ್ಕೆ ಶಾಸಕರನ್ನು ಅನರ್ಹರು ಎಂದು ಹೇಳುತ್ತಾರೆ. ಇಲ್ಲಿ ನಿಜವಾದ ಅನರ್ಹರು ಯಾರು ಸ್ವಾಮಿ? ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ನಿಮ್ಮನ್ನು ಜನತೆ ಸೋಲಿಸಿದರು. ನೀವು ಅನರ್ಹರಲ್ಲವೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅವರು ಮಾಜಿ ಸಿಎಂ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದರು. ನಿಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆಗೆ ಹೋದಿರಿ, ಎಷ್ಟು ಸ್ಥಾನ ಪಡೆದುಕೊಂಡಿರಿ ನಿಮ್ಮನ್ನು ಜನ ತಿರಸ್ಕಾರ ಮಾಡಿಲ್ಲವೇ? ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿನಡೆಸಿದರು. ರಾಜ್ಯದ ಜನ ಸಿದ್ಧರಾಮಯ್ಯರನ್ನು ಅನರ್ಹ ಮಾಡಿ, ಯಡಿಯೂರಪ್ಪರನ್ನು ಅರ್ಹ ಮಾಡಿದರು. ಅನರ್ಹ, ಅನರ್ಹ ಎಂದು ಹೇಳುವ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಕೂಡ ಅರ್ಹನೇ ಆಗಿರಬಹುದು. ಆದರೆ ಅವರು ಇಲ್ಲಿನ ಜನರಿಗೆ ಅಮೂಲ್ಯ ರತ್ನವಿದ್ದಂತೆ ಎಂದು ಹೇಳಿದರು. ಅವರು ತನ್ನ ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲು ಹಾಗೂ ಮಂಚೇನಹಳ್ಳಿ ತಾಲೂಕಿಗಾಗಿ ರಾಜೀನಾಮೆ ಕೊಟ್ಟರು. ಆದರೆ ಕೆಲವರು ಸ್ವಾರ್ಥ ರಾಜಕಾರಣದಿಂದ ತಿಹಾರ್ ಜೈಲು ಸೇರಿದರು. ಅಲ್ಲಿ ಕರ್ನಾಟಕದ ಭವಿಷ್ಯ ಬರೆಯಲು ನೋಡಿದರು ಆಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅನ್ನು ಟೀಕಿಸಿದರು.


from India & World News in Kannada | VK Polls https://ift.tt/2RfD9Tx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...