ಕಾಂಗ್ರೆಸ್-ಜೆಡಿಎಸ್ ಮುಳುಗಿದ ಹಡಗುಗಳಂತೆ ಈಗಾಗಲೇ ಸೋಲೊಪ್ಪಿಕೊಂಡಿವೆ : ಸದಾನಂದಗೌಡ

ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಮುಳುಗಿದ ಹಡಗುಗಳಂತಾಗಿವೆ. ಈ ಎರಡೂ ಪಕ್ಷಗಳು ಈಗಾಗಲೇ ಸೋಲೊಪ್ಪಿಕೊಂಡಿವೆ ಎಂಬುದಕ್ಕೆ ಈಗ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯೇ ಉತ್ತಮ ಉದಾಹರಣೆ ಎಂದು ಕೇಂದ್ರ ಸಚಿವ ಮಂಗಳವಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್‌ ಪರ ಉನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದರು. ಡಿ. 9ರ ನಂತರ ಈ ಸರಕಾರ ಉಳಿಯಲ್ಲ ಎಂದು ಹೇಳುವ ಇವರು ಯಾಕೆ ರಾಜ್ಯ ಸಭೆಗೆ ಅಭ್ಯರ್ಥಿಯನ್ನು ಹಾಕಿಲ್ಲ. ಎರಡೂ ಪಕ್ಷಗಳು (ಕಾಂಗ್ರೆಸ್‌ - ಜೆಡಿಎಸ್‌) ಜಂಟಿಯಾಗಿ ಅಭ್ಯರ್ಥಿ ಹಾಕಬಹುದಿತ್ತು. ನಮ್ಮ ಕೆ.ಸಿ.ರಾಮಮೂರ್ತಿ ಅವರು ಕಾಂಗ್ರೆಸ್‌ನಲ್ಲಿ ರಾಜೀನಾಮೆ ಕೊಟ್ಟು. ಈಗ ಅವಿರೋಧವಾಗಿ ರಾಜ್ಯ ಸಭೆಗೆ ಪ್ರವೇಶ ಮಾಡಿದ್ದಾರೆ. ಇದನ್ನು ಮೊದಲೇ ಅರಿತ ಕಾಂಗ್ರೆಸ್ ನಾವು ನಾಮಪತ್ರ ಸಲ್ಲಿಸಿದರೂ ಮುಖಭಂಗ ಆಗುತ್ತೆ ಎಂಬ ಕಾರಣದಿಂದ ನಾಮಪತ್ರವ್ನೇ ಸಲ್ಲಿಸಿಲ್ಲ. ಇದು ಅವರು ಸೋಲನ್ನು ಒಪ್ಪಿಕೊಳ್ಳುವಂತ ಸಂದೇಶ ಎಂದು ಹೇಳಿದರು. ಗುಡ್ ಗವರ್‌ನೆನ್ಸ್ ಅಂಡ್ ಡೆವಲಪಿಂಗ್ ಮಾತ್ರವೇ ನನ್ನ ಉದ್ದೇಶ. ಸುಧಾಕರ್ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿ. ದೇವರ ಇಚ್ಚೆಯಂತೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಈ ಉಪ ಚುನಾವಣೆ ಮೂಲಕ ಚಿಕ್ಕಬಳ್ಳಾಪುರಕ್ಕೆ ಒಳ್ಳೆಯ ಕಾಲ ಕೂಡಿಬಂದಿದೆ ಎಂದು ಭಾವಿಸಿದ್ದೇನೆ. ತಾವು ಪ್ರತಿನಿಸುತ್ತಿರುವ ಕ್ಷೇತ್ರದ ಅಭಿವೃದ್ಧಿ ಮಾಡುವುದು ಯಾವುದೇ ಒಬ್ಬ ಶಾಸಕ, ಸಂಸದನ ಕರ್ತವ್ಯ. ಕೇವಲ ಶಾಸಕನಾಗಿ ಉಳಿಯುವುದು ಯಾವುದೇ ಜನಪ್ರತಿನಿಧಿಗೆ ಗೌರವ ತರುವಂತಹದಲ್ಲ ಎಂದರು. ಇವತ್ತಿನ ದಿನಗಳಲ್ಲಿ ಯಾವುದಾದರೂ ಅಧಿಕಾರದಲ್ಲಿರುವ ಪಕ್ಷ ಇದ್ದರೆ ಅದರ ಕಡೆ ಚೀಲ ಹಿಡಿದುಕೊಂಡು ಹೋಗ್ತಾರೆ ಆದರೆ, ತನ್ನ ಪಕ್ಷ ಅಧಿಕಾರದಲ್ಲಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿ ಆಗದಿದ್ದರೆ ಆ ಪಕ್ಷದಲ್ಲಿ ನಾನು ಯಾಕೆ ಇರಬೇಕು ಎಂಬ ಭಾವನೆ ಬರುತ್ತೆ.ಅಂತಹ ಶಾಸಕರಲ್ಲಿ ಡಾ.ಕೆ.ಸುಧಾಕರ್ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. 14 ತಿಂಗಳಿಂದ ಶಾಸಕನಾಗಿದ್ದರೂ ಮುಖ್ಯಮಂತ್ರಿ ಕಾಣಬೇಕಾದರೆ ಹೋಟೆಲ್‌ವೊಂದರ ಬದಿಯಲ್ಲಿ ಕಾಯಬೇಕಾದ ದಯನೀಯ ಪರಸ್ಥಿತಿ ಇತ್ತು. ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಲ್ಲಿ ಕಾಣಲು ಆಗಲೇ ಇಲ್ಲ. ಕ್ಷೇತ್ರಕ್ಕೆ ನಯಾಪೈಸೆ ಅನುದಾನ ಕೊಡಲು ಆಗಿಲ್ಲ. ಹಾಗಾಗಿ ಇಂತಹ ಪಕ್ಷದಲ್ಲಿ ನಾನು ಇರುವುದು ಸೂಕ್ತ ಅಲ್ಲ ಅಂತ ಹೇಳಿ ಅಧಿಕಾರವನ್ನೇ ತ್ಯಾಗ ಮಾಡಿದ ಅದ್ಭುತ ನಾಯಕ ಸುಧಾಕರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಗಾಗಿ ಸುಧಾಕರ್ ಅಧಿಕಾರ ಬಿಡಲಿಲ್ಲ. ಜನತೆಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಎರಡು ವರ್ಷದೊಳಗೆ ಎತ್ತಿನಹೊಳೆ ನೀರು ಜಿಲ್ಲೆಗೆ ಬರುತ್ತೆ. ಭಗೀರಥನ ರೀತಿಯಲ್ಲಿ ಸುಧಾಕರ್ ಚಿಕ್ಕಮಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ನೀರು ತರ್ತಾರೆ ಎಂದರು.


from India & World News in Kannada | VK Polls https://ift.tt/37Z04Iw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...