ರಮೇಶ್‌ ಜಾರಕಿಹೊಳಿಗೆ ಸಾಮಾಜಿಕ ನ್ಯಾಯದ ಮಾತನಾಡುವ ಹಕ್ಕಿಲ್ಲ: ಸಿದ್ದರಾಮಯ್ಯ ತಿರುಗೇಟು

ರಾಯಬಾಗ (): ರಮೇಶ್ ಜಾರಕಿಹೊಳಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹಿಂದುಳಿದವರಿಗೆ, ಪ. ಜಾತಿ - ಪಂಗಡದವರಿಗೆ, ಅಲ್ಪ ಸಂಖ್ಯಾತರಿಗೆ ಸೇರಿದ ಎಷ್ಟು ಜನರಿಗೆ ಟಿಕೆಟ್‌ ನೀಡಿದೆ ಎಂಬುದನ್ನು ಮೊದಲು ಅವರು ತಿಳಿದುಕೊಳ್ಳಲಿ ಎಂದು ಮಾಜಿ ಸಿಎಂ ತಿರುಗೇಟು ನೀಡಿದರು. ರಾಯಬಾಗ ಪಟ್ಟಣದ ಮಹಾವೀರ ಸಭಾಭವನದ ಆವರಣದಲ್ಲಿ ಭಾನುವಾರ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಆಯೋಜಿಸಿದ್ದ ಚುನಾಯಿತ ಜನ ಪ್ರತಿನಿಧಿಗಳ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 'ಕಾಂಗ್ರೆಸ್‌ ಪಕ್ಷ ವಿವೇಕ ರಾವ್‌ ಪಾಟೀಲರಿಗೆ ಅನ್ಯಾಯ ಮಾಡಿದೆ ಎಂದು ಹೇಳುತ್ತಿರುವ ರಮೇಶ್ ಜಾರಕಿಹೊಳಿಗೆ, ಲಖನ್‌ ಬದಲಾಗಿ ವಿವೇಕ ರಾವ್‌ ಪಾಟೀಲರು ಸ್ಪರ್ಧೆ ಮಾಡಿದ್ದರೆ ಈ ಗೊಂದಲ ಇರುತ್ತಿರಲಿಲ್ಲ' ಎಂದರು. ಇನ್ನು, ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಹಾಗಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರು ಬರೆದ ಸಂವಿಧಾನ ಬದಲಾವಣೆ ಮಾಡಬೇಕೆನ್ನುತ್ತಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, '15 ವರ್ಷಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಲ್ಲಿ ಒಗ್ಗಟ್ಟು ಕಾಣಿಸುತ್ತಿದೆ. ಇದು ಹೀಗೇ ಮುಂದುವರಿದರೆ ಗೆಲುವಿನ ಪ್ರದರ್ಶನ ಕಾಣಲಿದೆ. ನಮ್ಮ ಪಕ್ಷದಲ್ಲಿದ್ದ ಕೊಳೆ ದೂರ ಹೋಗಿದೆ' ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಯವರನ್ನು ಟೀಕಿಸಿದರು. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಬಿಜೆಪಿಯಿಂದ ಇಬ್ಬರು ಸ್ಪರ್ಧಿಸಿದ್ದಾರೆ. ಒಬ್ಬರು 'ಎ' ಟೀಂ, ಮತ್ತೊಬ್ಬರು 'ಬಿ' ಟೀಂ. ಗೊಂದಲ ಸೃಷ್ಟಿಸುವವರು ಈಗ ಬಿಜೆಪಿಯಲ್ಲಿದ್ದಾರೆ. ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ನಾನು ಏಜೆಂಟ್‌ ಆಗದ್ದಿದ್ದರೆ ನೂರಕ್ಕೆ ನೂರು ಮತಗಳು ಲಖನ್‌ಗೆ ಬೀಳುತ್ತವೆ. ಹೀಗಾಗಿ ನಾನು ಮತ್ತು ನನ್ನ ಮಕ್ಕಳು ಹಾಗೂ ಕಾರ್ಯಕರ್ತರು ಏಜೆಂಟ್‌ರಾಗುತ್ತಿದ್ದೇವೆ' ಎಂದು ಹೇಳಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣ ರಾವ್‌ ಚಿಂಗಳೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಎಸ್‌. ಬಿ. ಘಾಟಗೆ ಮಾತನಾಡಿದರು. ಕಾಂಗ್ರೆಸ್‌ ಉಸ್ತುವಾರಿ ಐವನ್‌ ಡಿಸೋಜಾ, ಮಾಣಿಕರಾವ್‌ ಠಾಕೂರ, ಶಾಸಕರಾದ ಗಣೇಶ ಹುಕ್ಕೇರಿ, ಸಂಗಮೇಶ್ವರ, ಮಾಜಿ ಸಚಿವರಾದ ವೀರ ಕುಮಾರ ಪಾಟೀಲ, ಎ. ಬಿ. ಪಾಟೀಲ, ಡಿ. ಬಿ. ಇನಾಂದಾರ, ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ರಾಯಬಾಗ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಗೌಡ ಪಾಟೀಲ, ಮಾಜಿ ಶಾಸಕರಾದ ಮೋಹನ ಶಾ, ಕಾಕಾ ಸಾಹೇಬ ಪಾಟೀಲ, ರಾಜು ಕಾಗೆ ಇತರರು ಇದ್ದರು.


from India & World News in Kannada | VK Polls https://ift.tt/31n162M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...