
ಬೆಳಗಾವಿ: ನಾಡ ವಿರೋಧಿ ಚಟುವಟೆ ಮಾಡುತ್ತಿರುವ ಗೆ ನಿಷೇಧ ಹೇರಬೇಕೆಂದು ಕನ್ನಡ ಪರಸಂಘಟನೆಗಳು ಬೃಹತ್ ಹಮ್ಮಿಕೊಂಡ ಹಿನ್ನಲೆಯಲ್ಲಿ ಸುವರ್ಣ ವಿಧಾನಸೌಧ ಸುತ್ತಮುತ್ತಲು ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಸುವರ್ಣ ವಿಧಾನಸೌಧ ಸಮೀಪದ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲೂ ಪೊಲೀಸ್ ಸಿಬ್ಬಂದಿ ಬಲ ಹೆಚ್ಚಿಸಲಾಗಿದೆ. ಈ ನಡುವೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಕರೆ ನೀಡಿದ್ದ ರೈತ ಮುಖಂಡ ಭೀಮಶಿ ಗಡಾದ ಅವರನ್ನು ಬೆಳಗ್ಗೆ 4 ಗಂಟೆಗೆ ತಾಲೂಕಿನ ತುಕ್ಕಾನಟ್ಟಿ ಬಳಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದ ಬೆನ್ನಲ್ಲೇ ಬೆಳಗಾವಿಯಲ್ಲಿ ಮೂರ್ತಿ ಭಗ್ನಗೊಳಿಸಲಾಗಿತ್ತು. ಪ್ರತಿಭಟನೆ ನೆಪದಲ್ಲಿ ಎಂಇಎಸ್ ಕಾರ್ಯಕರ್ತರು ಸರಕಾರಿ ವಾಹನಗಳಿಗೆ, ಹೋಟೆಲ್ ಮತ್ತಿತರ ಕಟ್ಟಡಗಳಿಗೆ ಕಲ್ಲೂ ತೂರಾಟ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕರವೇ ಸೇರಿದಂತೆ ಕನ್ನಡ ಪರ ಸಂಘಟನೆಗಳು ಸುವರ್ಣ ವಿಧಾನಸೌಧ ಬಳಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದ್ದು, ಕನ್ನಡಿಗರಿಗೆ ಧಕ್ಕೆಯುಂಟು ಮಾಡಿದ, ಮೂರ್ತಿಗಳಿಗೆ ಮಸಿ ಬಳಿದ, ಪುತ್ಥಳಿಗಳನ್ನು ಧ್ವಂಸಗೊಳಿಸಿದ ಕನ್ನಡಿಗೆ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಎಂಇಎಸ್ ಅನ್ನು ನಿಷೇಧ ಮಾಡಿ ಎಂದು ಕನ್ನಡ ಪರಸಂಘಟನೆಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಪುಂಡರ ಅಟ್ಟಹಾಸದ ಬಗ್ಗೆ ಕನ್ನಡ ಪರ ಸಂಘಟನೆಗಳು ಬೃಹತ್ ಹೋರಾಟ ನಡೆಸುತ್ತಿದ್ದು, ವಿರೋಧ ಪಕ್ಷದ ನಾಯಕ ಕೂಡಾ ಸಾಥ್ ನೀಡಲಿದ್ದಾರೆ. ಅನಗೋಳದಲ್ಲಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸುವರ್ಣಸೌಧ ಚಲೋ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಖಾಕಿ ಪಡೆ ಎಚ್ಚರಿಕೆ ವಹಿಸಿದೆ.
from India & World News in Kannada | VK Polls https://ift.tt/3qaTRTL