ಜನರನ್ನು ಸೆಳೆಯುವಲ್ಲಿ ವಿಫಲವಾದ ‘ನಮ್ಮ ಮೆಟ್ರೋ’; BMRCLಗೆ ನಿತ್ಯ 1 ಲಕ್ಷ ಪ್ರಯಾಣಿಕರ ನಷ್ಟ!

ಮಹಾಬಲೇಶ್ವರ ಕಲ್ಕಣಿಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಲ್ಲಿನ ಮೆಟ್ರೊ ನಿಗಮಗಳಂತೆ ರೈಲು ಪ್ರಯಾಣ ದರಗಳಲ್ಲಿ ರಿಯಾಯಿತಿ ಘೋಷಿಸಿ, ಪ್ರಯಾಣಿಕರನ್ನು ಆಕರ್ಷಿಸುವಲ್ಲಿ 'ನಮ್ಮ ಮೆಟ್ರೊ' ಸಂಪೂರ್ಣ ವಿಫಲವಾಗಿದೆ. ಹೀಗಾಗಿಯೇ, ಮೆಟ್ರೊ ಏರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಬದಲಿಗೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೈದರಾಬಾದ್‌, ಚೆನ್ನೈ, ಹೊಸದಿಲ್ಲಿ ಮತ್ತು ಕೊಚ್ಚಿ ಮೆಟ್ರೊ ರೈಲು ನಿಗಮಗಳು ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿವೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌ , ಪ್ರವಾಸಿಗರಿಗಾಗಿ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ನೀಡುತ್ತಿವೆ. ವಾರಾಂತ್ಯದ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳ ದಿನಗಳಂದು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳಲು ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ. ಕೋವಿಡ್‌ ಕಾಣಿಸಿಕೊಳ್ಳುವ ಮುನ್ನ 48 ಕಿ.ಮೀ ರೈಲು ಮಾರ್ಗದಲ್ಲಿ ನಿತ್ಯ 4 ಲಕ್ಷ ಮಂದಿ ಸಂಚರಿಸುತ್ತಿದ್ದರು. ಈ ವರ್ಷದಲ್ಲಿ ಮೆಟ್ರೊ ಜಾಲವು 56.01 ಕಿ.ಮೀ ವಿಸ್ತಾರಗೊಂಡಿದ್ದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವೇ ಆಗಿಲ್ಲ. ಸದ್ಯ ಪ್ರತಿದಿನ ಸರಾಸರಿ 3 ಲಕ್ಷ ಮಂದಿಯಷ್ಟೇ ಪ್ರಯಾಣ ಮಾಡುತ್ತಿದ್ದಾರೆ. ಕೊರೊನಾ ಅಲೆಗಳ ಅಬ್ಬರದ ಬಳಿಕ 'ನಮ್ಮ ಮೆಟ್ರೊ' ನಿತ್ಯ ಒಂದು ಲಕ್ಷ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದೆ.

ಬೆಂಗಳೂರಿನಲ್ಲಿ ಮೆಟ್ರೊ ಏರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಬದಲಿಗೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೈದರಾಬಾದ್‌, ಚೆನ್ನೈ, ಹೊಸದಿಲ್ಲಿ ಮತ್ತು ಕೊಚ್ಚಿ ಮೆಟ್ರೊ ರೈಲು ನಿಗಮಗಳು ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿವೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌ , ಪ್ರವಾಸಿಗರಿಗಾಗಿ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ನೀಡುತ್ತಿವೆ. ವಾರಾಂತ್ಯದ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳ ದಿನಗಳಂದು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳಲು ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ.


ಜನರನ್ನು ಸೆಳೆಯುವಲ್ಲಿ ವಿಫಲವಾದ ‘ನಮ್ಮ ಮೆಟ್ರೋ’; BMRCLಗೆ ನಿತ್ಯ 1 ಲಕ್ಷ ಪ್ರಯಾಣಿಕರ ನಷ್ಟ!

ಮಹಾಬಲೇಶ್ವರ ಕಲ್ಕಣಿ

ಬೆಂಗಳೂರು:

ದೇಶದ ಪ್ರಮುಖ ಮಹಾನಗರಗಳಲ್ಲಿನ ಮೆಟ್ರೊ ನಿಗಮಗಳಂತೆ ರೈಲು ಪ್ರಯಾಣ ದರಗಳಲ್ಲಿ ರಿಯಾಯಿತಿ ಘೋಷಿಸಿ, ಪ್ರಯಾಣಿಕರನ್ನು ಆಕರ್ಷಿಸುವಲ್ಲಿ 'ನಮ್ಮ ಮೆಟ್ರೊ' ಸಂಪೂರ್ಣ ವಿಫಲವಾಗಿದೆ. ಹೀಗಾಗಿಯೇ, ಮೆಟ್ರೊ ಏರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಬದಲಿಗೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೈದರಾಬಾದ್‌, ಚೆನ್ನೈ, ಹೊಸದಿಲ್ಲಿ ಮತ್ತು ಕೊಚ್ಚಿ ಮೆಟ್ರೊ ರೈಲು ನಿಗಮಗಳು ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿವೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್‌ , ಪ್ರವಾಸಿಗರಿಗಾಗಿ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ನೀಡುತ್ತಿವೆ. ವಾರಾಂತ್ಯದ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳ ದಿನಗಳಂದು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳಲು ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ. ಕೋವಿಡ್‌ ಕಾಣಿಸಿಕೊಳ್ಳುವ ಮುನ್ನ 48 ಕಿ.ಮೀ ರೈಲು ಮಾರ್ಗದಲ್ಲಿ ನಿತ್ಯ 4 ಲಕ್ಷ ಮಂದಿ ಸಂಚರಿಸುತ್ತಿದ್ದರು. ಈ ವರ್ಷದಲ್ಲಿ ಮೆಟ್ರೊ ಜಾಲವು 56.01 ಕಿ.ಮೀ ವಿಸ್ತಾರಗೊಂಡಿದ್ದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವೇ ಆಗಿಲ್ಲ. ಸದ್ಯ ಪ್ರತಿದಿನ ಸರಾಸರಿ 3 ಲಕ್ಷ ಮಂದಿಯಷ್ಟೇ ಪ್ರಯಾಣ ಮಾಡುತ್ತಿದ್ದಾರೆ. ಕೊರೊನಾ ಅಲೆಗಳ ಅಬ್ಬರದ ಬಳಿಕ 'ನಮ್ಮ ಮೆಟ್ರೊ' ನಿತ್ಯ ಒಂದು ಲಕ್ಷ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದೆ.



ರಿಯಾಯಿತಿ ಹೆಚ್ಚಳದ ಬದಲು ಕಡಿತ
ರಿಯಾಯಿತಿ ಹೆಚ್ಚಳದ ಬದಲು ಕಡಿತ

ಮೆಟ್ರೊ ನಿಗಮವು ಆರಂಭದಲ್ಲಿ ಸ್ಮಾರ್ಟ್‌ ಕಾರ್ಡ್‌ ಖರೀದಿಸಿದವರಿಗೆ ಪ್ರಯಾಣ ದರದಲ್ಲಿ ಶೇ 15ರಷ್ಟು ರಿಯಾಯಿತಿ ನೀಡುತ್ತಿತ್ತು. ಈ ಪ್ರಮಾಣವನ್ನು ಜಾಸ್ತಿ ಮಾಡುವ ಬದಲಿಗೆ ಇಳಿಕೆ ಮಾಡಿದೆ. ಸದ್ಯ ಕೇವಲ ಶೇ.5ರಷ್ಟು ಮಾತ್ರ ರಿಯಾಯಿತಿ ನೀಡಲಾಗುತ್ತಿದೆ. ಕೊರೊನಾ ಲಾಕ್‌ಡೌನ್‌ ತೆರವಿನ ಬಳಿಕ ರೈಲು ಸಂಚಾರ ಅವಧಿಯನ್ನು ಕಡಿತಗೊಳಿಸಿದ್ದರಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿತ್ತು. ಪ್ರಯಾಣಿಕರ ಒತ್ತಾಯದ ಮೇರೆಗೆ ಸಂಚಾರ ಅವಧಿಯನ್ನು ವಿಸ್ತರಿಸಿತು. ಇದರಿಂದ ಪ್ರಯಾಣಿಕರ ಸಂಖ್ಯೆ ಕೂಡ ತುಸು ಏರಿಕೆಯಾಗಿದೆ. ಸ್ಮಾರ್ಟ್‌ ಕಾರ್ಡ್‌ ಬಳಕೆದಾರರಿಗೆ ಆಕರ್ಷಕ ರಿಯಾಯಿತಿ ನೀಡಿದರೆ, ಮೆಟ್ರೊ ರೈಲು ಏರುವವರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಗಳಿವೆ.

ಬಿಎಂಟಿಸಿ ಮಾದರಿಯಲ್ಲಿ ಮೆಟ್ರೊ ರೈಲು ನಿಗಮವೂ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸ್‌ಗಳನ್ನು ವಿತರಣೆ ಮಾಡಬೇಕು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ಸ್ವಂತ ವಾಹನಗಳಲ್ಲಿ ಹೋಗುವ ಬದಲು ಮೆಟ್ರೊ ರೈಲುಗಳನ್ನು ಬಳಸುತ್ತಾರೆ. ಇದರಿಂದ ಪ್ರಯಾಣಿಕರ ಸಂಖ್ಯೆಯೂ ಜಾಸ್ತಿಯಾಗಲಿದೆ. ನಿಗಮಕ್ಕೆ ಆದಾಯವೂ ಬರಲಿದೆ ಎನ್ನುತ್ತಾರೆ ಮೆಟ್ರೊ ಪ್ರಯಾಣಿಕ ರಮೇಶ್‌.



ಕೊಚ್ಚಿ ಮೆಟ್ರೊಗೆ ಬಲ ನೀಡಿದ ವಿದ್ಯಾರ್ಥಿ ಪಾಸ್‌
ಕೊಚ್ಚಿ ಮೆಟ್ರೊಗೆ ಬಲ ನೀಡಿದ ವಿದ್ಯಾರ್ಥಿ ಪಾಸ್‌

ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರಯಾಣದ ವ್ಯವಸ್ಥೆ ಕಲ್ಪಿಸುವಲ್ಲಿ ಕೊಚ್ಚಿ ಮೆಟ್ರೊ ನಿಗಮವು ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳು 1800 ರೂ. ಪಾವತಿಸಿ ಮಾಸಿಕ ಪಾಸ್‌ ಖರೀದಿಸಿದರೆ, 100 ಟ್ರಿಪ್‌ ಸಂಚರಿಸಬಹುದಾಗಿದೆ. ಯಾವುದೇ ನಿಲ್ದಾಣದಲ್ಲಿ ಪ್ರವೇಶಿಸಬಹುದು ಹಾಗೂ ನಿರ್ಗಮಿಸಬಹುದು. ವಿದ್ಯಾರ್ಥಿಗಳಿಗಾಗಿ 80 ರೂ. ಗಳ ದೈನಂದಿನ ಪಾಸ್‌ ಕೂಡ ಪರಿಚಯಿಸಲಾಗಿದೆ. ಈ ಪಾಸ್‌ನಿಂದ ದಿನದಲ್ಲಿ ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದು. ಪಾಸ್‌ ಸೌಲಭ್ಯವಿರುವುದರಿಂದ ಕೊಚ್ಚಿ ಮೆಟ್ರೊ ನಿಗಮವು ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರಯಾಣಿಕರ ದಟ್ಟಣೆ ಇಲ್ಲದ ಸಂದರ್ಭಗಳಲ್ಲಿ (ಮುಂಜಾನೆ 5.45 ರಿಂದ 8 ಗಂಟೆ ಮತ್ತು ರಾತ್ರಿ 8 ರಿಂದ 11 ಗಂಟೆ) ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜತೆಗೆ ಪ್ರತಿ ಸ್ಮಾರ್ಟ್‌ ಕಾರ್ಡ್‌ ಮೇಲೆ ಶೇ 20ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. 250 ರೂ.ಗಳ ವಾರಾಂತ್ಯದ ಪಾಸ್‌ ಖರೀದಿಸಿ, ಶನಿವಾರ ಮತ್ತು ಭಾನುವಾರ ಎಷ್ಟು ಬಾರಿ ಬೇಕಾದರೂ ಪ್ರಯಾಣಿಸಹುದು. ಇಂಥಹ ಕೊಡುಗೆಗಳನ್ನು 'ನಮ್ಮ ಮೆಟ್ರೊ'ದಲ್ಲೂ ನೀಡಿದರೆ, ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದೆ.



ಚೆನ್ನೈ, ದಿಲ್ಲಿಯಲ್ಲಿದೆ ಟೂರಿಸ್ಟ್‌ ಕಾರ್ಡ್‌
ಚೆನ್ನೈ, ದಿಲ್ಲಿಯಲ್ಲಿದೆ ಟೂರಿಸ್ಟ್‌ ಕಾರ್ಡ್‌

ಚೆನ್ನೈ ಮತ್ತು ಹೊಸದಿಲ್ಲಿ ಮೆಟ್ರೊ ನಿಗಮಗಳು ಪ್ರವಾಸಿಗರ ಅನುಕೂಲಕ್ಕಾಗಿ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ಅನ್ನು ಪರಿಚಯಿಸಿವೆ. ಚೆನ್ನೈನಲ್ಲಿ 100 ರೂ.ಗಳ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ ಖರೀದಿಸಿ, ದಿನಪೂರ್ತಿ ಎಷ್ಟು ಸಲ ಬೇಕಾದರೂ ಮೆಟ್ರೊ ರೈಲುಗಳಲ್ಲಿ ಸಂಚರಿಸಬಹುದು. ಒಂದು ತಿಂಗಳ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ಗೆ 2500 ರೂ. ನಿಗದಿಪಡಿಸಲಾಗಿದೆ. ಸ್ಮಾರ್ಟ್‌ ಕಾರ್ಡ್‌ ಹಿಂದಿರುಗಿಸಿದರೆ 50 ರೂ. ವಾಪಸ್‌ ಕೊಡಲಾಗುತ್ತದೆ. ಹೊಸದಿಲ್ಲಿಯಲ್ಲಿ 200 ರೂ. ದೈನಂದಿನ ಕಾರ್ಡ್‌ ಅಥವಾ ಮೂರು ದಿನದ ಸಂಚಾರಕ್ಕೆ 500 ರೂ.ಗಳ ಸ್ಮಾರ್ಟ್‌ ಕಾರ್ಡ್‌ ಖರೀದಿಸಿದರೆ, ಅನಿಮಿಯತವಾಗಿ ಪ್ರಯಾಣ ಮಾಡಬಹುದಾಗಿದೆ. ಹೊಸದಿಲ್ಲಿ ಮೆಟ್ರೊ ನಿಗಮವು ಭಾನುವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಪ್ರಯಾಣ ದರದಲ್ಲಿ 10 ರೂ. ರಿಯಾಯಿತಿ ನೀಡುತ್ತದೆ. ಮಾಹಿತಿ ತಂತ್ರಜ್ಞಾನ ನಗರಿ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಬೆಂಗಳೂರು ದೇಶ, ವಿದೇಶಿಗರ ನೆಚ್ಚಿನ ಪ್ರವಾಸಿ ತಾಣ ಕೂಡ ಹೌದು. ದೇಶದ ಇತರೆ ಮೆಟ್ರೊ ನಿಗಮಗಳಂತೆ ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌ಗಳನ್ನು ಪರಿಚಯಿಸಿದರೆ, ಪ್ರಯಾಣಿಕರ ಸಂಖ್ಯೆ ಹೆಚ್ಚಲು ನೆರವಾಗಲಿದೆ.



ನಮ್ಮ ಮೆಟ್ರೊದಲ್ಲಿ ರಿಯಾಯಿತಿ ಕಡಿಮೆ
ನಮ್ಮ ಮೆಟ್ರೊದಲ್ಲಿ ರಿಯಾಯಿತಿ ಕಡಿಮೆ

ಚೆನ್ನೈ ಮೆಟ್ರೊದಲ್ಲಿ ಸ್ಮಾರ್ಟ್‌ ಕಾರ್ಡ್‌ಗೆ ಶೇ 20, ಹೊಸದಿಲ್ಲಿ ಮತ್ತು ಹೈದರಾಬಾದ್‌ ಮೆಟ್ರೊದಲ್ಲಿ ಶೇ 10ರಷ್ಟು ರಿಯಾಯತಿ ನೀಡಲಾಗುತ್ತಿದೆ. ಆದರೆ, ನಮ್ಮ ಮೆಟ್ರೊದಲ್ಲಿ ಕೇವಲ ಶೇ.5ರಷ್ಟು ಮಾತ್ರ ನೀಡಲಾಗುತ್ತಿದೆ. ಮುಂಬಯಿ ಮೆಟ್ರೊದಲ್ಲಿ 200 ರಿಚಾರ್ಚ್ ಮಾಡಿದರೆ ಶೇ 2 ಹಾಗೂ 600 ರೂ. ಗಿಂತ ಹೆಚ್ಚು ರಿಚಾರ್ಚ್ ಮಾಡಿದರೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ನಮ್ಮ ಮೆಟ್ರೊದಲ್ಲಿ ಎಷ್ಟು ರೂಪಾಯಿ ರಿಚಾರ್ಚ್ ಮಾಡಿದರೂ ಕೇವಲ ಶೇ. 5ರಷ್ಟು ರಿಯಾಯಿತಿ ಮಾತ್ರ ಕೊಡಲಾಗುತ್ತಿದೆ.



ದುಬಾರಿ ದರ
ದುಬಾರಿ ದರ

ಟ್ರಾಫಿಕ್‌ಜಾಮ್‌, ಹೊಗೆ, ದೂಳಿನ ಕಿರಿಕಿರಿ ಇಲ್ಲದೆ ಸಕಾಲದಲ್ಲಿ ಗಮ್ಯ ಸ್ಥಳ ತಲುಪಿಸುವ ಮೆಟ್ರೊ ರೈಲುಗಳಲ್ಲಿ ಪ್ರಯಾಣ ದರ ದುಬಾರಿ ಎಂಬ ದೂರಿದೆ. ಉದ್ಯೋಗ ಅಥವಾ ಇನ್ನಿತರೆ ಕೆಲಸ ಕಾರ್ಯಗಳಿಗೆ ತೆರಳಲು ದ್ವಿಚಕ್ರ ವಾಹನಗಳಲ್ಲಿ ಬರುವವರು ಮೆಟ್ರೊ ನಿಲ್ದಾಣಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ರೈಲುಗಳನ್ನೇರಬೇಕಿದೆ. ಹೀಗಾಗಿ, ಪಾರ್ಕಿಂಗ್‌ ಶುಲ್ಕವನ್ನೂ ತೆರಬೇಕಾಗುತ್ತದೆ. ಪಾರ್ಕಿಂಗ್‌ ಶುಲ್ಕ,ಸೇರಿ ಮೆಟ್ರೊ ರೈಲಿನ ದರವನ್ನು ಲೆಕ್ಕ ಹಾಕಿದರೆ ಕೆಲವೊಮ್ಮೆ ಇತರೆ ಸಾರಿಗೆಯೇ ಅಗ್ಗವಾಗುತ್ತದೆ.





from India & World News in Kannada | VK Polls https://ift.tt/3J4pHdl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...