ತೆಲಂಗಾಣ ಮತ್ತು ಆಂಧ್ರದಲ್ಲಿ ಬೆಲೆ ಕುಸಿತ: ರಾಯಚೂರಿಗೆ ಅನ್ಯ ರಾಜ್ಯದ ಭತ್ತ ಲಗ್ಗೆ!

ರಾಯಚೂರು: ನೆರೆಯ ಮತ್ತು ಆಂಧ್ರದ ಮಾರುಕಟ್ಟೆಯಲ್ಲಿ ಭತ್ತದ ಕುಸಿತ ಕಂಡಿದ್ದರಿಂದ ಜಿಲ್ಲೆಯ ಮಾರುಕಟ್ಟೆಗೆ ನೆರೆಯ ರಾಜ್ಯದ ರು ಲಗ್ಗೆ ಹಾಕಿದ್ದಾರೆ. ಹೀಗಾಗಿ ರಾಯಚೂರಿನ ಮಾರುಕಟ್ಟೆಯಲ್ಲಿ ಭತ್ತದ ಆವಕ ತೀವ್ರ ಏರಿಕೆಯಾಗಿದೆ. ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಬೆಳೆಯುತ್ತಿದ್ದಾರೆ. ಆದರೆ ಸ್ಥಳೀಯ ರೈತರಿಗೆ ಸೂಕ್ತ ಬೆಂಬಲ ಬೆಲೆ ದೊರೆಯುತ್ತಿಲ್ಲ. ಆದರೆ ಪಕ್ಕದ ಆಂಧ್ರ ಹಾಗೂ ತೆಲಂಗಾಣ ರಾಜ್ಯದಿಂದ ರೈತರು ಹೆಚ್ಚಿನ ಭತ್ತವನ್ನು ರಾಯಚೂರಿನ ಗಂಜ್‌ಗೆ ಮಾರಾಟಕ್ಕೆ ತರುತ್ತಿದ್ದು, ನೆರೆಯ ರಾಜ್ಯದ ರೈತರಿಗೆ ದರದಿಂದ ಲಾಭವಾಗುತ್ತಿದೆ. ಆದರೆ ಆವಕ ಹೆಚ್ಚಳದಿಂದ ದರ ಕುಸಿತದ ಭೀತಿಯೂ ಕಾಡುತ್ತಿದೆ. ಹಾಗೂ ತೆಲಂಗಾಣ ರಾಜ್ಯದ ರಾಯಚೂರು ಗಡಿಯಲ್ಲಿರುವ ತಾಲೂಕುಗಳ ವ್ಯಾಪ್ತಿಯಲ್ಲಿ ರೈತರು ಲಕ್ಷಾಂತರ ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಂದ ನೀರಾವರಿ ಸೌಲಭ್ಯ ಪಡೆದುಕೊಂಡಿರುವ ನೆರೆಯ ರಾಜ್ಯದ ರೈತರು ಭತ್ತ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಭತ್ತ ಆವಕ ರಾಯಚೂರು ಮಾರುಕಟ್ಟೆ 35ರಿಂದ 38 ಸಾವಿರ ಕ್ವಿಂಟಲ್‌ ಭತ್ತದ ಆವಕವಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಭತ್ತ ಆವಕವಾಗುತ್ತಿರುವುದರಿಂದ ದರ ಕುಸಿತ ಕಾಣುವ ಆತಂಕ ಸ್ಥಳೀಯ ರೈತರಲ್ಲಿ ಮನೆ ಮಾಡಿದೆ. ಸರಕಾರ ಆರಂಭಿಸಿದ ಖರೀದಿ ಕೇಂದ್ರದ ಪ್ರಕ್ರಿಯೆ ನಿಧಾನ ಗತಿಯಲ್ಲಿದ್ದು, ನೋಂದಣಿ ಮಾಡಿಸಿದ ರೈತರೂ ಖರೀದಿ ಕೇಂದ್ರಕ್ಕೆ ತೆರಳುವುದು ಅಲ್ಲಿನ ಷರತ್ತುಗಳಿಂದ ಅನುಮಾನ ಎಂಬಂತಾಗಿದೆ. ಹೀಗಾಗಿ ಸ್ಥಳೀಯವಾಗಿ ರೈತರು ಅತ್ತ ಬೆಂಬಲ ಬೆಲೆಯೂ ಇಲ್ಲ ಇತ್ತ ಮಾರುಕಟ್ಟೆಯಲ್ಲಿಯೇ ಸಿಕ್ಕ ದರಕ್ಕೆ ಮಾರಾಟ ಮಾಡುವಂತಾಗಿದೆ. ಕೆಲ ರೈತರು ಮುಂದೆ ಬೆಲೆ ಏರಿಕೆಯಾಗುವ ಭವಸೆಯಿಲ್ಲದ್ದರಿಂದ ಸದ್ಯದ ದರಕ್ಕೆ ಮಾರಾಟ ಮಾಡುತ್ತಿದ್ದು, ನೆರೆಯ ರಾಜ್ಯದ ರೈತರಿಗೆ ಇಲ್ಲಿನ ದರದ ಲಾಭ ಸಿಗುವಂತಾಗಿದೆ. ಆಕರ್ಷಿತರಾದ ನೆರೆ ರಾಜ್ಯದ ರೈತ ನೆರೆಯ ರಾಜ್ಯದ ಗದ್ವಾಲ್‌, ಮಂತ್ರಾಲಯ, ಕೋಸಗಿ, ಕೃಷ್ಣಾ ಮತ್ತಿತರೆಡೆಯ ರೈತರು ಆಯಾ ರಾಜ್ಯಗಳಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಗದ ಪರಿಣಾಮ ಕಂಗಾಲಾಗಿದ್ದರು. ಅಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ 1400 ರಿಂದ 1500 ರೂ. ದರವಿದೆ. ಆದರೆ ರಾಯಚೂರಿನ ಮಾರುಕಟ್ಟೆಯಲ್ಲಿ ಸರಕಾರವು ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಮುಂದಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ. ರಾಜ್ಯದಲ್ಲಿ ಭತ್ತ ಬೆಳೆಗಾರರಿಗೆ ರಾಜ್ಯ ಸರಕಾರ ಕ್ವಿಂಟಲ್‌‍ಗೆ ಸರಾಸರಿ 1886 ರೂ. ದರ ನಿಗದಿ ಮಾಡಿದ್ದು, ಹೀಗಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರು ಆಕರ್ಷಿತರಾಗಿದ್ದಾರೆ. ಜಿಲ್ಲೆಯಲ್ಲಿ ಭತ್ತವನ್ನು ಸಾಕಷ್ಟು ಪ್ರಮಾಣದಲ್ಲಿ ರೈತರು ಬೆಳೆದಿದ್ದು ಬೆಂಬಲ ಬೆಲೆಯಲ್ಲಿ ಖರೀದಿ ವಿಳಂಬವಾಗಿದೆ. ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವಂತಾಗಿದೆ. ಚಾಮರಸ ಮಾಲಿ ಪಾಟೀಲ್‌, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ, ರಾಯಚೂರು ತೆಲಂಗಾಣ ರಾಜ್ಯದಲ್ಲಿ ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ದೊರೆಯುತ್ತಿಲ್ಲ. ಸಾಲ ಮಾಡಿ ಭತ್ತ ಬೆಳೆಯನ್ನು ಬೆಳೆದಿದ್ದು ಒಂದು ಕ್ವಿಂಟಲ್‌‍ಗೆ ಕೇವಲ 1500 ರೂ. ಇದೆ ಇದಕ್ಕೆ ದಲ್ಲಾಳಿಗಳ ಕಾಟದಿಂದ ಕೇವಲ 1000 ರೂ. ದೊರೆಯುತ್ತದೆ. ಹೀಗಾಗಿ ರಾಯಚೂರು ಮಾರುಕಟ್ಟೆಗೆ ಬರುತ್ತೇವೆ. ಮೌನೇಶ್‌, ರೈತ, ಗದ್ವಾಲ್‌, ತೆಲಂಗಾಣ


from India & World News in Kannada | VK Polls https://ift.tt/3yciAuG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...