ದೇಶದಲ್ಲಿ ಈವರೆಗೂ ನಡೆದ ಹೆಲಿಕಾಪ್ಟರ್ ದುರಂತಗಳ ಹಿಂದಿದೆ ಕರಾಳ ಚರಿತ್ರೆ!

ಹೊಸದಿಲ್ಲಿ: ಭಾರತದ ಸೇನಾಪಡೆಯ ಮುಖ್ಯಸ್ಥ ಬಿಪಿನ್‌ ರಾವತ್ ( ) ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ಪತನಗೊಂಡು ದೇಶವೇ ಆಘಾತಕ್ಕೊಳಗಾಗಿತ್ತು. ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಹದಿಮೂರು ಜನರು ದುರಂತ ಸಾವನ್ನಪ್ಪಿದ್ದರು. ಈ ಘಟನೆಯ ಸುದ್ದಿ ತಿಳಿದು ದೇಶದ ಜನತೆ ಆಘಾತಕ್ಕೊಳಗಾಗಿದ್ದಾರೆ. ದೇಶದಲ್ಲಿ ಹೆಲಿಕಾಪ್ಟರ್ ದುರಂತ () ಸಂಭವಿಸಿರೋದು ಇದೇ ಮೊದಲಲ್ಲ. ಇಂತಹ ದುರಂತಗಳಿಗೆ ಕರಾಳ ಚರಿತ್ರೆಯೇ ಇದೆ. ಈ ಹಿಂದೆಯೂ ಅನೇಖ ಗಣ್ಯರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. 1945 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರು ಪ್ರಯಾಣಿಸುತ್ತಿದ್ದ ವಿಮಾನ ತೈವಾನ್‌ನಲ್ಲಿಅಪಘಾತಕ್ಕೀಡಾಗಿ ಬೋಸ್‌ ಮೃತಪಟ್ಟಿದ್ದರು. ಇವರ ಸಾವಿನ ಕುರಿತು ಇಂದಿಗೂ ವಿವಾದ ಉಳಿದಿದೆ. ಪೂರ್ಣ ಸತ್ಯ ಇನ್ನೂ ಅನಾವರಣಗೊಂಡಿಲ್ಲ. ಇಂದಿರಾ ಗಾಂಧಿ ಪುತ್ರ ಸಂಜಯ್‌ ಗಾಂಧಿ 1980ರಲ್ಲಿ ಘಟಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಹೊಸದಿಲ್ಲಿಯ ಸಫ್ದರ್‌ಜಂಗ್‌ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. 1994ರಲ್ಲಿ ಪಂಜಾಬ್‌ ರಾಜ್ಯಪಾಲ ಸುರೇಂದ್ರ ಸಿಂಗ್‌ ಮತ್ತು ಅವರ ಕುಟುಂಬದ 9 ಸದಸ್ಯರು ಸೂಪರ್‌ ಕಿಂಗ್‌ ವಿಮಾನದಲ್ಲಿ ಅರುಣಾಚಲ ಪ್ರದೇಶದ ಗಿರಿಶ್ರೇಣಿಗಳ ಮೇಲೆ ಹಾರುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಒಂಬತ್ತು ಮಂದಿ ಮೃತಪಟ್ಟಿದ್ದರು. 2001ರಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಮಾಧವ್‌ ರಾವ್‌ ಸಿಂಧಿಯಾ ಅವರು ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಕಾನ್ಪುರಕ್ಕೆ ತೆರಳುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ವಿಮಾನ ಮಾರ್ಗ ಮಧ್ಯೆ ಸ್ಫೋಟಿಸಿ ಮೃತಪಟ್ಟಿದ್ದರು. 2002ರಲ್ಲಿ ಲೋಕಸಭಾ ಸ್ಪೀಕರ್‌ ಹಾಗೂ ತೆಲುಗು ದೇಶಂ ನಾಯಕ ಜಿ. ಎಂ.ಸಿ ಬಾಲಯೋಗಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡಿತ್ತು. 2005ರಲ್ಲಿ ಹರಿಯಾಣ ರಾಜ್ಯದ ಕೃಷಿ ಸಚಿವ ಒ.ಪಿ. ಜಿಂದಾಲ್‌ ಅವರು ಸಹರಾನ್‌ಪುರಕ್ಕೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಾಂತ್ರಿಕ ದೋಷದಿಂದ ದುರಂತಕ್ಕೀಡಾಗಿತ್ತು. ಅದರಲ್ಲಿ ಜಿಂದಾಲ್‌ ಮೃತಪಟ್ಟಿದ್ದರು. 2009ರಲ್ಲಿ ಆಂಧ್ರದ ಚಿತ್ತೂರು ಜಿಲ್ಲೆಯ ದಟ್ಟಾರಣ್ಯದಲ್ಲಿ ಬೆಲ್‌ 430 ಹೆಲಿಕಾಪ್ಟರ್‌ ಪತನಗೊಂಡು ಅಂದಿನ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ್‌ ರೆಡ್ಡಿ ದುರಂತ ಸಾವನ್ನಪ್ಪಿದ್ದರು. 2011ರಲ್ಲಿ ಅರುಣಾಚಲ ಪ್ರದೇಶದ ಸಿಎಂ ದೋರ್ಜೆ ಖಂಡು ಇದ್ದ ಕಾಪ್ಟರ್‌ ನಾಪತ್ತೆಯಾಯಿತು. 5 ದಿನದ ಬಳಿಕ ಅವರ ಶವ ಮತ್ತು ಛಿದ್ರಗೊಂಡ ಕಾಪ್ಟರ್‌ ಚೀನಾ ಗಡಿಯಲ್ಲಿ ಪತ್ತೆಯಾಯಿತು. ಸದ್ಯ ಇಂತಹದ್ದೇ ಆಘಾತಕಾರಿ ಅಪಘಾತ ಮತ್ತೊಮ್ಮೆ ಸಂಭವಿಸಿದ್ದು, ಪರಿಣಾಮ ದೇಶದ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ದುರಂತ ಸಾವನ್ನಪ್ಪಿದ್ದಾರೆ.


from India & World News in Kannada | VK Polls https://ift.tt/3pIk8Zd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...