ನಾಯಕನಾಗಿ ಈ ಸಂಗತಿಗಳು ನನ್ನನ್ನು ಕೊಲ್ಲುತ್ತಿವೆ ಎಂದ ಕೆ.ಎಲ್‌ ರಾಹುಲ್‌!

ದುಬೈ: ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಬಳಿಕ ಪ್ಲೇ ಆಫ್ಸ್‌ ಹಾದಿಯನ್ನು ಜೀವಂತವಾಗಿರಿಕೊಂಡಿದೆ. ಪಂದ್ಯದ ಗೆಲುವಿನ ಬಳಿಕ ಕೆಎಲ್‌ ರಾಹುಲ್‌ ಸಂತಸ ವ್ಯಕ್ತಪಡಿಸಿದ್ದು, ತಾವು ನಾಯಕನಾಗಿ ತಂಡದಲ್ಲಿ ಎದುರಿಸುತ್ತಿರುವ ಕಠಿಣ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 166 ರನ್‌ ಗುರಿ ಹಿಂಬಾಲಿಸಿದ್ದ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಗೆಲುವು ಸಾಧಿಸಲು ಕೋಲ್ಕತಾ ನೈಟ್‌ ರೈಡರ್ಸ್ ಕೊನೆಯ ಓವರ್‌ವರೆಗೂ ಅವಕಾಶ ಮಾಡಿಕೊಡಲಿಲ್ಲ. ಪ್ರಸಕ್ತ ಟೂರ್ನಿಯಲ್ಲಿ ನಾಯಕ ಅವರ 5ನೇ ಅರ್ಧಶತಕ ಹಾಗೂ ಮಯಾಂಕ್‌ ಅಗರ್ವಾಲ್‌ ಅವರ 40 ರನ್‌ ಗಳಿಸಿದ ಹೊರತಾಗಿಯೂ ಪಂಜಾಬ್‌ ಕೊನೆಯ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ಮೂರು ಓವರ್‌ಗಳಲ್ಲಿ ಪಂಜಾಬ್‌ ಕಿಂಗ್ಸ್‌ಗೆ 24 ರನ್‌ ಅಗತ್ಯವಿತ್ತು. ಈ ವೇಳೆ ಕೇವಲ 9 ಎಸೆತಗಳಲ್ಲಿ ಶಾರೂಖ್‌ ಖಾನ್‌ ಎರಡು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದ ರಾಹುಲ್‌ ನೆಮ್ಮದಿಯ ನೆಟ್ಟುಸಿರು ಬಿಡುವಂತಾಯಿತು. ಅಂದಹಾಗೆ ಯುಎಇ ಚರಣದಲ್ಲಿ ಶಾರೂಖ್‌ ಖಾನ್‌ ಅವರ ಮೊದಲ ಪಂದ್ಯ ಇದಾಗಿತ್ತು. ಆದರೂ ತಮಿಳುನಾಡಿನ ಯುವ ಬ್ಯಾಟ್ಸ್‌ಮನ್‌ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಬೇಸರ ಮೂಡಿಸಲಿಲ್ಲ. ಕೆ.ಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವೇಳೆ ಯುವ ಬ್ಯಾಟ್ಸ್‌ಮನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. "ಬ್ಯಾಟಿಂಗ್‌ ಕೋಚ್‌ಗಳ ಬಳಿ ಸಾಕಷ್ಟು ಕೆಲಸ ಮಾಡಿದ್ದಾರೆ, ಅವರ ಬಳಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ. ಈ ಕಾರಣದಿಂದಾಗಿಯೇ ಆತ 170 ಅಥವಾ 180 ರನ್‌ಗಳ ವರೆಗೂ ಯಾವುದೇ ಅಪಾಯವಿಲ್ಲದೆ ಆಡಬಲ್ಲರು. ಆತ ದೊಡ್ಡ ದೊಡ್ಡ ಸಿಕ್ಸರ್‌ ಬಾರಿಸುತ್ತಾನೆಂದು ನಮಗೆ ತಿಳಿದಿದೆ. ಇದನ್ನೆ ಅವರು ತಮಿಳುನಾಡು ತಂಡದ ಪರ ಮಾಡಿದ್ದಾರೆ. ಆದರೆ, ಅವರು ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು ರಾಹುಲ್‌ ಗುಣಗಾನ ಮಾಡಿದ್ದಾರೆ. "ಕೆಲವೊಮ್ಮೆ ನಾವು ನಮ್ಮ ಮೇಲೆ ಒತ್ತಡವನ್ನು ಹಾಕಿಕೊಳ್ಳುತ್ತೇವೆ. ನಮ್ಮದು ಉತ್ತಮ ತಂಡ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ನಮ್ಮ ಮೇಲೆ ನಾವು ಒತ್ತಡ ಹಾಕಿಕೊಳ್ಳುವುದು ತಂಡದ ಗೆಲುವಿಗೆ ಸಹಾಯವಾಗುವುದಿಲ್ಲ. ಯುಎಇಯಲ್ಲಿನ ಈ ನಾಲ್ಕು ಪಂದ್ಯಗಳು ಇದಕ್ಕೆ ಸೂಕ್ತ ಉದಾಹರಣೆ. ಯುವ ತಂಡವಾಗಿ ನಮಗೆ ಇದು ಅತ್ಯುತ್ತಮ ಕಲಿಕೆಯಾಗಿದೆ," ಎಂದು ತಿಳಿಸಿದರು ಪಂಜಾಬ್‌ ಕಿಂಗ್ಸ್ ನಾಯಕನಾಗಿ ತಾವು ಎದುರಿಸುತ್ತಿರುವ ಬಹು ದೊಡ್ಡ ಇಕ್ಕಟ್ಟಿನ ಪರಿಸ್ಥಿತಿಯನ್ನು ವಿವರಿಸಿದ ಕೆ.ಎಲ್‌ ರಾಹುಲ್, ಯುವ ಪ್ರತಿಭಾವಂತ ಆಟಗಾರನ್ನು ಕೈ ಬಿಡುತ್ತಿರುವುದು ಅತ್ಯಂತ ಕಠಿಣ ನಿರ್ಧಾರವಾಗಿದೆ. ಆದರೆ, ಕ್ರಿಸ್‌ ಗೇಲ್‌ ಟಿ20 ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಲು ಬಯೋ-ಬಬಲ್‌ ತೊರೆದಿರುವುದರಿಂದ ಯುವ ಆಟಗಾರರಿಗೆ ಅವಕಾಶ ಲಭಿಸಿದಂತಾಗಿದೆ ಎಂದಿದ್ದಾರೆ. "ಯುವ ಆಟಗಾರರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ನೀಡದೆ ಇರುವಂತಹ ಸಂಗತಿಗಳು ನಾಯಕನಾಗಿ ನನ್ನನ್ನು ಕೊಲ್ಲುತ್ತಿವೆ. ಕ್ರಿಸ್‌ ಗೇಲ್‌ ಬಯೋ-ಬಬಲ್‌ ತೊರೆದಿದ್ದಾರೆ. ಆದ್ದರಿಂದ ಹಲವು ಬದಲಾವಣೆಗಳೊಂದಿಗೆ ಅತ್ಯುತ್ತಮ ಪ್ಲೇಯಿಂಗ್‌ ಇಲೆವೆನ್‌ ಅನ್ನು ನಾವು ಕಟ್ಟಿದ್ದೇವೆ. ಶಾರ್ಜಾಗೆ ನಾವು ತೆರಳಲಿದ್ದು, ಅಲ್ಲಿ ಏನಾಗುತ್ತದೆ ನೋಡೋಣ," ಎಂದು ಕೆ.ಎಲ್‌ ರಾಹುಲ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mkxOrM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...