'ಚೆಂಡು ಸ್ಟ್ಯಾಂಡ್ಸ್‌ಗೆ ಹೋಗಬಹುದೆಂದು ಭಾವಿಸಿದ್ದೆ' ಗೇಮ್‌ ಪ್ಲಾನ್‌ ತಿಳಿಸಿದ ಶಾರೂಖ್‌!

ದುಬೈ: ವಿರುದ್ಧದ ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡದ 5 ವಿಕೆಟ್‌ಗಳ ಗೆಲುವಿಗೆ ನೆರವಾದರು. ಪಂದ್ಯದ ಗೆಲುವಿನ ಬಳಿಕ 26ರ ಪ್ರಾಯದ ಯುವ ಬ್ಯಾಟ್ಸ್‌ಮನ್‌ ತಮ್ಮ ಗೇಮ್‌ ಪ್ಲಾನ್‌ ಬಹಿರಂಗಪಡಿಸಿದರು. ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 166 ರನ್‌ ಗುರಿ ಹಿಂಬಾಲಿಸಿದ್ದ ತಂಡಕ್ಕೆ ಗೆಲುವು ಸಾಧಿಸಲು ಕೋಲ್ಕತಾ ನೈಟ್‌ ರೈಡರ್ಸ್ ಕೊನೆಯ ಓವರ್‌ವರೆಗೂ ಅವಕಾಶ ಮಾಡಿಕೊಡಲಿಲ್ಲ. ಪ್ರಸಕ್ತ ಟೂರ್ನಿಯಲ್ಲಿ ನಾಯಕ ಅವರ 5ನೇ ಅರ್ಧಶತಕ ಹಾಗೂ ಮಯಾಂಕ್‌ ಅಗರ್ವಾಲ್‌ ಅವರ 40 ರನ್‌ ಗಳಿಸಿದ ಹೊರತಾಗಿಯೂ ಪಂಜಾಬ್‌ ಕೊನೆಯ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ಮೂರು ಓವರ್‌ಗಳಲ್ಲಿ ಪಂಜಾಬ್‌ ಕಿಂಗ್ಸ್‌ಗೆ 24 ರನ್‌ ಅಗತ್ಯವಿತ್ತು. ಈ ವೇಳೆ ಕೇವಲ 9 ಎಸೆತಗಳಲ್ಲಿ ಶಾರೂಖ್‌ ಖಾನ್‌ ಎರಡು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅದರಲ್ಲೂ ಕೆ.ಎಲ್‌ ರಾಹುಲ್ ವಿಕೆಟ್‌ ಒಪ್ಪಿಸಿದ ಬಳಿಕ ಪಂಜಾಬ್‌ಗೆ 4 ಎಸೆತಗಳಿಗೆ 4 ರನ್‌ ಅಗತ್ಯವಿತ್ತು. ಈ ವೇಳೆ ಶಾರೂಖ್‌ ಖಾನ್‌ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡು ಬ್ಯಾಟ್ಸ್‌ಮನ್‌ ನಿರೀಕ್ಷೆ ಮಾಡಿದಷ್ಟು ದೂರ ಹೋಗಲಿಲ್ಲ. ಬೌಂಡರಿ ಲೈನ್‌ ಬಳಿ ರಾಹುಲ್‌ ತ್ರಿಪಾಠಿ ಕ್ಯಾಚ್‌ ಪಡೆಯಲು ಪ್ರಯತ್ನಿಸಿದರು. ಆದರೆ, ಕೊದಲೆಳೆಯ ಅಂತರದಲ್ಲಿ ತ್ರಿಪಾಠಿ ಎಡವಿದ್ದರಿಂದ ಚೆಂಡು ನಿಯಂತ್ರಣಕ್ಕೆ ಸಿಗದೆ ಬೌಂಡರಿ ಲೈನ್‌ ದಾಟಿತು, ಪಂಜಾಬ್‌ಗೆ ಅದೃಷ್ಟದ ಸಿಕ್ಸರ್‌ ಆಗುವ ಮೂಲಕ ರಾಹುಲ್‌ ಪಡೆಗೆ ಪ್ಲೇ ಆಫ್ಸ್‌ ಆಸೆ ಜೀವಂತವಾಯಿತು. ರೋಚಕ ಪಂದ್ಯದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಶಾರೂಖ್‌ ಖಾನ್‌, "ನಾನು ಕ್ರೀಸ್‌ಗೆ ತೆರಳಿದಾಗ ಪಂದ್ಯದ ಸನ್ನಿವೇಶ ನಿರ್ಣಾಯಕವಾಗಿತ್ತು ಹಾಗೂ ಮತ್ತೊಂದು ತುದಿಯಲ್ಲಿ ಕೆ.ಎಲ್‌ ರಾಹುಲ್‌ ಇದ್ದರು. ನಾಯಕ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಕಾರಣ ನಾನು ಮೊದಲನೇ ಎಸೆತದಿಂದಲೇ ಬಿರುಸಿನ ಆಟಕ್ಕೆ ಕೈ ಹಾಕಿದೆ," ಎಂದರು. "ಅಂದಹಾಗೆ ಕೊನೆಯ ಎಸೆತವನ್ನು ನಾನು ಅತ್ಯುತ್ತಮವಾಗಿಯೇ ಆಡಿದ್ದೆ ಹಾಗೂ ಚೆಂಡು ಸ್ಟ್ಯಾಂಡ್ಸ್‌ಗೆ ತಲುಪಬಹುದು ಎಂದೇ ಭಾವಿಸಿದ್ದೆ. ಆದರೆ, ಅನಿರೀಕ್ಷಿತವಾಗಿ ಅದು ಸಂಭವಿಸಲಿಲ್ಲ. ಆದರೂ, ಅವಕಾಶ ಪಡೆದುಕೊಳ್ಳುವಷ್ಟು ಧೈರ್ಯಶಾಲಿಯಾಗಿದ್ದೇನೆಂದು ನಾನು ಭಾವಿಸಿದೆ, ಅದರಂತೆ ಅದೃಷ್ಟ ನಮ್ಮ ಕೈ ಹಿಡಿಯಿತು," ಎಂದು ಹೇಳಿದರು. ಪಂದ್ಯವನ್ನು ಯಶಸ್ವಿಯಾಗಿ ಫಿನಿಷ್‌ ಮಾಡಿದ ಬಗ್ಗೆ ಬೆಳಕು ಚೆಲ್ಲಿದ ಶಾರೂಖ್‌ ಖಾನ್‌, ಪಂದ್ಯದ ಪ್ರಕ್ರಿಯೆಗೆ ಅಂಟಿಕೊಂಡು ಗ್ಯಾಪ್‌ಗಳಲ್ಲಿ ರನ್‌ಗಳಿಸಲು ಪ್ರಯತ್ನಿಸಿದೆ. ಇದೇ ಲಯವನ್ನು ಮುಂದಿನ ನಿರ್ಣಾಯಕ ಪಂದ್ಯಗಳಲ್ಲಿಯೂ ಮುಂದುವರಿಸುತ್ತೇನೆಂದು ಯುವ ಬ್ಯಾಟ್ಸ್‌ಮನ್‌ ಭರವಸೆ ನೀಡಿದ್ದಾರೆ. "ಇಂತಹ ಸನ್ನಿವೇಶಗಳಲ್ಲಿ ನಾನು ಕ್ರೀಸ್‌ಗೆ ಹೋದಾಗ ರನ್‌ ಗಳಿಸಲು ಗ್ಯಾಪ್‌ಗಳನ್ನು ಹುಡುಕುತ್ತೇನೆ. ಅಂದಹಾಗೆ ನಮಗೆ ಮೂರು ಗೆಲುವು ಅಗತ್ಯವಿತ್ತು. ಇದರಲ್ಲಿ ಒಂದರಲ್ಲಿ ಗೆಲುವು ಪಡೆದಿದ್ದೇವೆ. ಇನ್ನು ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸುವ ಕಡೆಗೆ ಗಮನ ಹರಿಸಲಿದ್ದು, ಈ ಪ್ರಕ್ರಿಯೆಯ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ," ಎಂದು ಶಾರೂಖ್‌ ಖಾನ್‌ ತಿಳಿಸಿದ್ದಾರೆ. ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್ ತಂಡ, ಭಾನುವಾರ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಟ ನಡೆಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3isHtLX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...