ಹಾಸನದಲ್ಲಿ ಆರ್ಥಿಕತೆ ಚೇತರಿಕೆ; ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ತಿರುವು!

ಪ್ರಕಾಶ್‌ ಜಿ.,ಹಾಸನಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಖರೀದಿ, ಭೂಮಿ ಖರೀದಿ, ಮಾರಾಟ, ಸಾಲ ಆಧಾರ ಖುಲಾಸೆಗೆ ಹೆಚ್ಚಿನ ಜನರು ಆಗಮಿಸುತ್ತಿದ್ದು ಆರ್ಥಿಕ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿದೆ. ಈ ಮೂಲಕ ಕೊರೊನಾ ಸೃಷ್ಟಿಸಿದ್ದ ಆತಂಕ ಮರೆಯಾಗುವ ಆಶಾದಾಯಕ ಬೆಳವಣಿಗೆ ಜತೆಗೆ ಆರ್ಥಿಕ ಚಟುವಟಿಕೆಗಳು ಗರಿಗೆದರಿದೆ. ಕೊರೊನಾ ಲಾಕ್‌ಡೌನ್‌ ಪರಿಣಾಮ ದೇಶದ ಆರ್ಥಿಕ ಸ್ಥಿತಿ ನೆಲಕಚ್ಚಿ ಎರಡು ದಶಕದ ಹಿಂದಕ್ಕೆ ಕೊಂಡೊಯ್ಯುವ ಆತಂಕವನ್ನು ಆರ್ಥಿಕ ತಜ್ಞರೇ ವ್ಯಕ್ತಪಡಿಸಿದ್ದರು. ಪರಿಣಾಮ ಎಂಬಂತೆ ಮಾರುವವರು ಇದ್ದರೂ ಕೊಳ್ಳುವವರು ಮುಂದೆ ಬರಲಾರರು, ಜನರ ಬಳಿ ಎಲ್ಲಿದೆ ದುಡ್ಡು ಎನ್ನುವಂತಹ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ರಿಯಲ್‌ ಎಸ್ಟೇಟ್‌ ಉದ್ಯಮ ಸ್ಥಿತಿ ಗಂಭೀರವಾಗಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಇಂತಹ ಆತಂಕಗಳಿಗೆಲ್ಲ ತೆರೆ ಎಳೆಯುವಂತೆ ಕೃಷಿಭೂಮಿ ಖರೀದಿ, ಆಸ್ತಿ ಖರೀದಿ, ನೋಂದಣಿ ಪ್ರಕ್ರಿಯೆಗೆ ಜನ ಗುಂಪು ಗುಂಪಾಗಿ ಸಬ್‌ರಿಜಿಸ್ಟಾರ್‌ ಕಚೇರಿಗೆ ಆಗಮಿಸುತ್ತಿರುವ ಪರಿಣಾಮ ಕಚೇರಿಯಲ್ಲಿ ನೋಂದಣಾಧಿಕಾರಿಗಳು, ಸಿಬ್ಬಂದಿ ಬಿಡುವಿಲ್ಲದಂತೆ ಕರ್ತವ್ಯ ನಿರ್ವಹಿಸುವುದು ಕಂಡುಬರುತ್ತಿದೆ. ವಿಜಯದಶಮಿ ನಂತರದ ಶುಭದಿನಗಳು ಪ್ರಾರಂಭಗೊಂಡು ಜನವರಿ 14ರ ತನಕ ಒಳ್ಳೆಯ ದಿನಗಳು ಇರುವ ಕಾರಣ ಕೊಡು-ಕೊಳ್ಳುವಿಕೆಗೆ ಶರವೇಗದಲ್ಲಿ ನಡೆಯುತ್ತಿದ್ದು, ಇದು ಆರ್ಥಿಕ ಚೇತರಿಕೆಯ ಲಕ್ಷಣ ಎಂದೇ ಭಾವಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಂಟು ತಾಲೂಕು ಕೇಂದ್ರ ಹಾಗೂ ಬಾಣಾವರ ಮತ್ತು ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಇದ್ದು, ಈ ಕಚೇರಿಗಳಿಗೆ ಸರಕಾರ ವಾರ್ಷಿಕ 150 ಕೋಟಿ ಆದಾಯದ ಗುರಿ ನೀಡಿದೆ. ಹಾಸನ ಸಬ್‌ರಿಜಿಸ್ಟ್ರಾರ್‌ ಕಚೇರಿಗೆ 2020-21ರಲ್ಲಿ 144 ಕೋಟಿ ಗುರಿ ನೀಡಿತ್ತು. ಆದರೆ ಲಾಕ್‌ಡೌನ್‌ ಪರಿಣಾಮ 132 ಕೋಟಿ ಗುರಿ ಮುಟ್ಟಿತ್ತು. ಈ ಬಾರಿ ಸರಕಾರ ಕೂಡ ಹಿಂದಿನ ವರ್ಷದಷ್ಟೇ 150 ಕೋಟಿ ಗುರಿ ನೀಡುವ ನಿರೀಕ್ಷೆ ಇದ್ದು, ಶೇ.100 ಗುರಿ ಮುಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು. ಕೊರೊನಾ ಲಾಕ್‌ಡೌನ್‌ ಬಳಿಕ ಹಂತ ಹಂತವಾಗಿ ಚೇತರಿಕೆ ಕಾಣುತ್ತಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಹಾಸನ ಒಂದರಲ್ಲೇ 29.51 ಕೋಟಿ ಸಂಗ್ರಹವಾಗಿದೆ. ನಿತ್ಯ 160 ನೋಂದಣಿ ಪ್ರತಿನಿತ್ಯ ಹಾಸನದ ಸಬ್‌ರಿಜಿಸ್ಟ್ರಾರ್‌ ಕಚೇರಿ ಒಂದರಲ್ಲಿ 150ರಿಂದ 160 ನೋಂದಣಿಯಾಗುತ್ತಿದೆ. ಎ,ಬಿ,ಸಿ,ಡಿ ಎಂಬ ನಾಲ್ಕು ವಿಭಾಗ ಮಾಡಿ ನಿಗದಿತ ಶ್ರೇಣಿ ಕಂಪ್ಯೂಟರ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಮೊದಲಿದ್ದ ಆನ್‌ಲೈನ್‌ ಸಮಸ್ಯೆ ಕೂಡ ನಿವಾರಣೆ ಆದಂತಿದ್ದು, ಜನತೆ ಕೂಡ ಗಲಭೆ, ಗದ್ದಲವಿಲ್ಲದೆ ನೋಂದಣಿ ಮಾಡಿಸುತ್ತಿದ್ದಾರೆ. ನೂರಾರು ಜನ ಟೋಕನ್‌ ಅನ್ವಯ ಆಗಮಿಸಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ದೃಶ್ಯ ಜಿಲ್ಲೆಯ ಎಲ್ಲ ನೊಂದಣಾಧಿಕಾರಿ ಕಚೇರಿ ಆವರಣದಲ್ಲಿ ಕಂಡು ಬರುತ್ತಿದೆ. ಸಹಜ ಸಮಯಕೊರೊನೋತ್ತರ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ರಿಯಲ್‌ ಎಸ್ಟೇಟ್‌ಗೂ ಹೊಸಕಳೆ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆ ಹಾದಿ ಕಂಡಿದೆ. ಸ್ಥಳೀಯರಲ್ಲದೆ ಬೆಂಗಳೂರು ಮತ್ತಿತರ ಭಾಗದ ಬಂಡವಾಳಶಾಹಿಗಳು ಉದ್ಯಮದ ಮೇಲೆ ಬಂಡವಾಳ ಹೂಡಲೂ ಜಿಲ್ಲೆಯತ್ತ ಆಕರ್ಷಿತರಾಗಿದ್ದಾರೆ. ಜಿಲ್ಲಾದ್ಯಂತ ಲೇಔಟ್‌ಗಳು ತಲೆ ಎತ್ತಿರುವ ಜತೆಗೆ ಹೊಸ, ಹೊಸ ಯೋಜನೆಗಳನ್ನು ಹಾಕಿಕೊಂಡು ಪಾಲುದಾರಿಕೆಯಲ್ಲಿಯುವ ಜನತೆ ಕೂಡ ಲೇಔಟ್‌ ಮಾಡಿ ಮಾರಾಟ ಮಾಡಲು ಮುಂದಾಗಿದ್ದಾರೆ.


from India & World News in Kannada | VK Polls https://ift.tt/3AcqDXJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...