'ಖಾರ್‌ಲ್ಯಾಂಡ್‌' ಕ್ರಿಯಾ ಯೋಜನೆಗೆ ಒಪ್ಪಿಗೆ, ಉತ್ತರ ಕನ್ನಡದ ಮೂರು ತಾಲೂಕಿಗೆ 300 ಕೋಟಿ ರೂ.

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಹರಿಯುವ ನದಿಗಳಿಗೆ ಪ್ರಾಯೋಗಿಕ ಹಂತದಲ್ಲಿ ಜಾರಿ ಮಾಡುತ್ತಿರುವ ''ಯ 300 ಕೋಟಿ ರೂ. ಮೊತ್ತದ ಕಾಮಗಾರಿಯ ಕ್ರಿಯಾ ಯೋಜನೆ ಜಾರಿಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಚಿವ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಜೆ.ಸಿ ಮಾಧುಸ್ವಾಮಿ, ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹರಿಯುವ ನದಿಗಳಿಗೆ ಸಂಬಂಧಪಟ್ಟಂತೆ ಸಣ್ಣ ನೀರಾವರಿ ಇಲಾಖೆಯಿಂದ 1,500 ಕೋಟಿ ರೂ. ಮೊತ್ತದ 'ಖಾರ್‌ಲ್ಯಾಂಡ್‌ ಯೋಜನೆ'ಯ ಮಾಸ್ಟರ್‌ ಪ್ಲಾನ್‌ ರೂಪಿಸಲಾಗಿದೆ. ಸಭೆಯು ಜಿಲ್ಲೆಯ ನದಿಗಳಿಗೆ ಸಂಬಂಧಪಟ್ಟಂತೆ ಮಾತ್ರ ಇವತ್ತು ಅನುಮೋದನೆ ನೀಡಿದೆ,'' ಎಂದು ವಿವರ ನೀಡಿದರು. ''ನದಿ ನೀರು, ಸಮುದ್ರದ ನೀರು ಸೇರುವ ಕಡೆ ದೊಡ್ಡದಾಗಿ ಒಂದು ಏರಿ ನಿರ್ಮಿಸಲಾಗುತ್ತದೆ. ಅಲ್ಲಿ ಸಮುದ್ರದ ಕಡೆಯಿಂದ ಸಿಹಿ ನೀರಿಗೆ ಬರುವ ಉಪ್ಪು ನೀರು ತಡೆಗೆ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಸುಮಾರು 2-3 ತಿಂಗಳು ಸಿಹಿನೀರು ಶೇಖರಣೆಯಿಂದ ಕೃಷಿ, ಕುಡಿಯುವ ನೀರು ಸೇರಿದಂತೆ ಇತರೆ ಬಳಕೆಗೂ ನೆರವಾಗಲಿದೆ. ಒಂದು ತಾಲೂಕಿಗೆ 100 ಕೋಟಿ ರೂ.ನಂತೆ 3 ತಾಲೂಕುಗಳಿಗೆ 300 ಕೋಟಿ ರೂ. ವೆಚ್ಚ ಮಾಡಲಾಗುವುದು,'' ಎಂದು ಹೇಳಿದರು. ಬಿಲ್‌ಗೆ ಸಭಾಪತಿ ಸಹಿ ಬಾಕಿ '''ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ವಿಧೇಯಕ' ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಿದ್ದರೂ ಸಭಾಪತಿಯವರು ಸಹಿಯಾಗಿಲ್ಲ. ಸಭಾಪತಿಗಳು ಸಹಿ ಮಾಡಿ ಕಳುಹಿಸಿದ ನಂತರ ರಾಜ್ಯಪಾಲರ ಅಂಕಿತ ಪಡೆಯಬೇಕಾಗುತ್ತದೆ. ನಂತರ ಸರಕಾರಿ ಆದೇಶ ಹೊರಡಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಉಳಿದಂತೆ ವಿಧೇಯಕ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ,'' ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು. ಹಿಪ್ಪರಗಿ ಬ್ಯಾರೇಜ್‌ ಹಿಪ್ಪರಗಿ ಬ್ಯಾರೇಜ್‌ ಎಡಭಾಗದ ತಿರುವಿನಲ್ಲಿ ಕಾಂಕ್ರಿಟ್‌ ತಡೆಗೋಡೆಯನ್ನು 28.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ. ಮಳೆಗಾಲದಲ್ಲಿ ಬ್ಯಾರೇಜಿನಿಂದ ನೀರನ್ನು ಹೊರಬಿಟ್ಟಾಗ, ಬ್ಯಾರೇಜಿನ ಗೇಟ್‌ ಮೂಲಕ ರಭಸವಾಗಿ ಹರಿಯುವ ನೀರಿನಿಂದ ಎಡಭಾಗದ ತಿರುವಿನಲ್ಲಿ ಎರೆಮಣ್ಣು ಸವಕಳಿಯಾಗಿ ನದಿ ದಂಡೆಯಲ್ಲಿ ಕೊರೆತ ಉಂಟಾಗುತ್ತಿತ್ತು. ಇದರಿಂದ ರೈತರ ಭೂಮಿಗೆ ನೀರು ನುಗ್ಗಿ, ನಷ್ಟವಾಗುತ್ತಿತ್ತು. ಇದನ್ನು ತಡೆಗಟ್ಟಲು ಸುಮಾರು 500 ಮೀ. ಉದ್ದ ಹಾಗೂ 15 ಮೀ. ಎತ್ತರದ ಕಾಂಕ್ರಿಟ್‌ ತಡೆಗೋಡೆ ನಿರ್ಮಾಣಕ್ಕೆ ಸಂಪುಟ ಸಭೆ ಅಸ್ತು ಎಂದಿದೆ. ಬೆಂಗಳೂರು ನಗರ ಪೊಲೀಸ್‌ ಆಧುನೀಕರಣ ಪೊಲೀಸ್‌ ಆಧುನೀಕರಣ ಯೋಜನೆಯಡಿ ಬೆಂಗಳೂರು ನಗರಕ್ಕೆ ಅಗತ್ಯವಿರುವ ಡಿಜಿಟಲ್‌ ಯು.ಎಚ್‌.ಎಫ್‌. ರೇಡಿಯೋ ಸಂಪರ್ಕ ವ್ಯವಸ್ಥೆಯ ವಿನ್ಯಾಸ, ಸರಬರಾಜು, ಅಳವಡಿಕೆ ಹಾಗೂ ನಿರ್ವಹಣೆ ಕಾರ್ಯ 14.65 ಕೋಟಿ ರೂ. ವೆಚ್ಚದಲ್ಲಿ ಜಾರಿ. ಈ ಮೊತ್ತದಲ್ಲಿ ರಾಜ್ಯ ಸರಕಾರ ಸುಮಾರು 9 ಕೋಟಿ ರೂ. ಹಾಗೂ ಕೇಂದ್ರ ಸರಕಾರ ಸುಮಾರು 6 ಕೋಟಿ ರೂ. ಭರಿಸಲಿದೆ. ಪ್ರಮುಖ ನಿರ್ಣಯ * 2021-22ನೇ ಸಾಲಿಗೆ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ನಬಾರ್ಡ್‌ ಮೂಲಕ ಪುನರ್ಧನ ಪಡೆಯಲು 1550 ಕೋಟಿ ರೂ.ಗೆ ಸರಕಾರದ ಖಾತರಿ * ಲೋಕಾಯುಕ್ತ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಲೆಕ್ಕಪರಿಶೋಧನಾಧಿಕಾರಿ ಹುದ್ದೆಯಲ್ಲಿದ್ದ ಎಸ್‌.ಬಿ. ಲೋಕೇಶ್‌, ಟಿ.ಎಸ್‌. ಜಯರಾಮಯ್ಯ ಸೇವೆ ಒಂದು ವರ್ಷ ವಿಸ್ತರಣೆ * ಖಾನಾಪುರ- ತಾಳಗುಪ್ಪಾ ರಾಜ್ಯ ಹೆದ್ದಾರಿ- 93ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ 5 ಕಿ.ಮೀ. ಮಾರ್ಗ ದ್ವಿಪಥಕ್ಕೆ 15 ಕೋಟಿ ರೂ. ಅನುಮೋದನೆ * ಬೆಳಗಾವಿ ಜಿಲ್ಲೆಯ ಸವದತ್ತಿ ಗ್ರಾಮದಲ್ಲಿ 32 ಎಕರೆ ಗಾಯರಾಣ ಭೂಮಿಯನ್ನು ಪವನ ವಿದ್ಯುತ್‌ ಯೋಜನೆಗಾಗಿ ಬೆಂಗಳೂರಿನ ರೋಹನ್‌ ಸೋಲಾರ್‌ ಪವರ್‌ ಪ್ರೈವೇಟ್‌ ಲಿಮಿಟೆಡ್‌ಗೆ 30 ವರ್ಷಕ್ಕೆ ಗುತ್ತಿಗೆ * ಉಡುಪಿ ಜಿಲ್ಲೆಯ ನೂತನ ಹೆಬ್ರಿ ತಾಲೂಕಿಗೆ ಸೇರ್ಪಡೆಯಾಗಿರುವ ಕಾರ್ಕಳ ತಾಲೂಕಿನ ಅಜೆಕಾರು ಹೋಬಳಿಯ 12 ಗ್ರಾಮಗಳು, ಕುಂದಾಪುರ ಹೋಬಳಿಯ 4 ಗ್ರಾಮ ಸೇರಿಸಿ ಹೊಸದಾಗಿ ಹೆಬ್ರಿ ಹೋಬಳಿ ರಚನೆ * ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆ/ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್‌ಗಳನ್ನು ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆಯಿಂದ 24.85 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ವಿತರಣೆಗೆ ಒಪ್ಪಿಗೆ.


from India & World News in Kannada | VK Polls https://ift.tt/3iAI0LQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...