ರಾಜ್ಯದಲ್ಲಿ ಇನ್ನೊಂದು ವಾರದಲ್ಲಿ ಮಹತ್ವದ ಬದಲಾವಣೆ: ಯತ್ನಾಳ್ ಹೊಸ ಬಾಂಬ್

ಬೆಳಗಾವಿ: 'ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿಪಂಚಮಸಾಲಿ ಸಮಾಜಕ್ಕೆ ಕೊಡುತ್ತೇನೆಂದು ಸುಳ್ಳು ಭರವಸೆ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಈಗ ಸದನದ ಹಿಂದಿನ ಸಾಲಿಗೆ ಬಂದು ನನ್ನ ಅಕ್ಕಪಕ್ಕ ಕುಳಿತುಕೊಳ್ಳುವಂತಾಗಿದೆ. ಈ ಮೂಲಕ ಸಮುದಾಯದ ಶಕ್ತಿಯ ಪ್ರದರ್ಶನವಾಗಿದೆ. ಈಗಲೂ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಬರುವ ಚುನಾವಣೆಯಲ್ಲಿಪಂಚಮಸಾಲಿಗಳ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ' ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಗುಡುಗಿದರು. ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಲಿಂಗಾಯತ ಪ್ರತಿಜ್ಞಾ ಪಂಚಾಯತ್‌ನಲ್ಲಿ ಮಾತನಾಡಿದ ಅವರು, 'ಮೀಸಲಾತಿ ವಿಷಯವಾಗಿ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ನ್ಯಾಯ ಒದಗಿಸುವ ಭರವಸೆ ನೀಡಿ ಕಾಲಾವಕಾಶ ಕೇಳಿದ್ದಾರೆ. ಸಮುದಾಯ ಇನ್ನಷ್ಟು ಕಾಯಲು ಸಿದ್ಧವಿದೆ. ಆದರೆ, ನಿಗದಿತಾವಧಿಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಪಕ್ಷಾತೀತವಾಗಿ ಸಮುದಾಯದ ಜನರು ಮುಂಬರುವ ಚುನಾವಣೆಯಲ್ಲಿತಕ್ಕ ಪಾಠ ಕಲಿಸುತ್ತಾರೆ' ಎಂದು ಎಚ್ಚರಿಕೆ ನೀಡಿದರು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಮನಸ್ಸು ಮಾಡಿರಲಿಲ್ಲ. ಅವರಿಗೆ ಸಮಾಜದ ಶಾಪ ತಟ್ಟಿದೆ. ಇದರ ಪರಿಣಾಮ ಅವರು ಮಾಜಿ ಸಿಎಂ ಆಗಿ ಅಧಿವೇಶನದಲ್ಲಿ ನಮ್ಮ ಸಾಲಿನಲ್ಲಿ ಕೂರುವಂತಾಗಿದೆ ಎಂದು ವ್ಯಂಗ್ಯವಾಗಿ ಹೇಳಿದರು. 'ಮುಗ್ಧ ಪಂಚಮಸಾಲಿ ಸಮಾಜವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದೇ ಹೆಚ್ಚು. ಹೋರಾಟದ ಆರಂಭದಲ್ಲೂ ಭರವಸೆಯ ಶರಬತ್ ಕುಡಿಸಿ ಸತ್ಯಾಗ್ರಹ ಮುರಿದರು. ಈಗಲೂ ಸಮುದಾಯದ ಕೋಟಾದಲ್ಲಿ ಕೆಲವರು ಸಿಎಂ ಸ್ಥಾನ ಕೂಡ ಕೇಳುತ್ತಿದ್ದಾರೆ. ಹೋರಾಟ ಹಾಳು ಮಾಡಲು ಕೆಲ ಶ್ರೀಗಳು ಸಿಎಂ ಮನೆಗೆ ಹೋಗಿ ಪ್ಯಾಕೆಟ್‌ ತೆಗೆದುಕೊಂಡು ಬಂದಿರುವ ನಾಟಕ ನೋಡಿದ್ದೇವೆ. ತುಮಕೂರು, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಹಾಳು ಮಾಡಲು ಟ್ರಾಫಿಕ್‌ ಜಾಮ್‌ ಮಾಡಿ ಪಂಚಮಸಾಲಿಗಳಿಗೆ ಕೆಟ್ಟ ಹೆಸರು ತರುವ ಕೆಲಸ ನಮ್ಮವರೇ ಮಾಡಿದ್ದಾರೆ. ಅರಮನೆ ಮೈದಾನ ಕೊಡದಂತೆ, ಬೆಂಗಳೂರಿನೊಳಗೆ ಸಮಾವೇಶಕ್ಕೆ ಬರುವ ಬಸ್‌ಗಳನ್ನೂ ತಡೆಯಲು ಬಿಎಸ್‌ವೈ ಪುತ್ರ ವಿಜಯೇಂದ್ರ ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹೇರುವ ಎಲ್ಲ ಪ್ರಯತ್ನಗಳನ್ನು ಪಂಚಮಸಾಲಿಗಳು ವಿಫಲಗೊಳಿಸಿದ್ದಾರೆ' ಎಂದು ಯತ್ನಾಳ್ ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಮೀಸಲಾತಿ ಪಡೆದ ನಂತರ ತಲಾ ನೂರು ರೂಪಾಯಿ ಹಾಕಿ ಬಸವ ಜಯಮೃತ್ಯುಂಜಯ ಶ್ರೀಗಳಿಗೆ ಮಠ ಕಟ್ಟಿಸಿಕೊಡೋಣ. ಯಾವ ರಾಜಕಾರಣಿಗಳ ಹಂಗೂ ನಮಗೆ ಬೇಕಿಲ್ಲ. ಪರ್ಯಾಯ ಪೀಠದ ಮಾತು ಎತ್ತಿರುವವರಿಗೆ ಪಾಠ ಕಲಿಸೋಣ ಎಂದರು. ವಾರದಲ್ಲಿ ಮಹತ್ವದ ಬದಲಾವಣೆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಒಂದು ವಾರದೊಳಗೆ ಮಹತ್ವದ ಬದಲಾವಣೆಯಾಗುವಂತಹ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಲಿದ್ದಾರೆ ಎಂದು ಬಾಂಬ್ ಸಿಡಿಸಿದರು. 'ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ನೆರಳಲ್ಲ. ಅವರಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಅನುಭವವಿದೆ. ಇನ್ನೊಂದು ವಾರದಲ್ಲಿ ಅವರು ತೆಗೆದುಕೊಳ್ಳಲಿರುವ ಕ್ರಮವು, ಅವರು ಮಾಜಿ ಮುಖ್ಯಮಂತ್ರಿಯ ನೆರಳಿನಲ್ಲಿ ಇಲ್ಲ ಎಂಬುದನ್ನು ಸಾಬೀತುಪಡಿಸಲಿದೆ. ಕಾದು ನೋಡಿ' ಎಂದು ಹೇಳಿದರು.


from India & World News in Kannada | VK Polls https://ift.tt/3uiVUqE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...