ಪಾಟ್ನಾ: ರಕ್ಷಾಬಂಧನದ ಉಡುಗೊರೆಯಾಗಿ ಸೋದರಿಯರಿಂದ ಪಡೆದಿದ್ದ ರಾಖಿಯನ್ನು ಹಾವಾಡಿಗನೊಬ್ಬ ತನ್ನ ಬಳಿ ಇದ್ದ ಹಾವುಗಳಿಗೆ ಕಟ್ಟಲು ಹೋಗಿ ಅವುಗಳಿಂದ ಕಚ್ಚಿಸಿಕೊಂಡು ಮೃತಪಟ್ಟ ಘಟನೆ ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದಿದೆ. ಹಾವಾಡಿಸುವುದನ್ನೇ ಹೊಟ್ಟೆಪಾಡು ಮಾಡಿಕೊಂಡಿದ್ದ ಸೋದರ ಮನಮೋಹನ್ಗೆ ಭಾನುವಾರ ರಕ್ಷಾ ಬಂಧನದ ದಿನ ಆತನ ಇಬ್ಬರು ಸೋದರಿಯರು ಪ್ರೀತಿಯಿಂದ '' ಕಳಿಸಿಕೊಟ್ಟಿದ್ದರು. ಹಾವುಗಳ ಕಡು ವ್ಯಾಮೋಹಿಯಾಗಿದ್ದ ಮನಮೋಹನ್, ಸೋದರಿಯರು ಕಳಿಸಿದ ರಾಖಿಗಳನ್ನು ತಾನು ಕಟ್ಟಿಕೊಳ್ಳುವ ಬದಲು ಹಾವುಗಳಿಗೆ ಕಟ್ಟಲು ಯತ್ನಿಸಿದ. ಒಂದು ಹಾವಿಗೆ ಆತ ರಾಖಿ ಕಟ್ಟಲು ಹೆಣಗಾಡುತ್ತಿದ್ದಾಗ ಮತ್ತೊಂದು ಹರಿದು ಬಂದು ಆತನ ಕಾಲ ಹೆಬ್ಬೆರಳಿಗೆ ಕಚ್ಚಿದೆ. ''ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಬದುಕುಳಿಯಲಿಲ್ಲ,'' ಎಂದು ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ. ಹಾವಿಗೆ ರಾಖಿ ಕಟ್ಟುವಾಗ ಹಾವು ಕಚ್ಚಿರುವ ವಿಡಿಯೋ ಈಗ ವೈರಲ್ ಆಗಿದೆ. ಹಾವು ಕಚ್ಚಿದ ತಕ್ಷಣ ಮನಮೋಹನ್ ಅನ್ನು ಸರಣ್ ಜಿಲ್ಲೆಯ ಎಕ್ಮಾದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ, ಅಲ್ಲಿ ಹಾವಿನ ವಿಷ ನಿರೋಧಕ ಲಸಿಕೆ ಇಲ್ಲದ್ದರಿಂದ ಚಾಪ್ರಾದ ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಮನಮೋಹನ್ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3sICEBX