ಮಸೂದೆ ವಿರೋಧಿಸಿ ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ: ಆರ್‌ಜೆಡಿ ಶಾಸಕರನ್ನು ಎಳೆದಾಡಿದ ಪೊಲೀಸರು!

ಪಟ್ನಾ: ಶಾಸಕರು ಎಂದು ನೋಡದೆ ಕಾಲು ಹಿಡಿದು ಎತ್ತಿಕೊಂಡು ಹೊರಕ್ಕೆ ಎಸೆದರು. ಮಹಿಳಾ ಶಾಸಕರೂ ಎಂದೂ ಕೇರ್‌ ಮಾಡದೆ ಅವರನ್ನೂ ಅರೆಸೇನಾ ಸಿಬ್ಬಂದಿಗಳು ಎತ್ತಿ ಹೊರದಬ್ಬಿದರು. ಇಂತಹ ಗದ್ದಲ, ಗಲಾಟೆ, ಕೋಲಾಹಲಕ್ಕೆ ಅಕ್ಷರಶಃ ಬಿಹಾರದ ವಿಧಾನಸಭೆ ಸಾಕ್ಷಿಯಾಯ್ತು. ದೇವರ ಜಾಗ ಎಂದು ಪೂಜ್ಯನೀಯವಾಗಿ ಕಾಣುವ ವಿಧಾನಸಭೆ ಅಕ್ಷರಶಃ ಮಾರುಕಟ್ಟೆಗಿಂತಲೂ ಅತ್ಯಂತ ಕೆಟ್ಟದಾಗಿ ಭಾಸವಾಗಿತ್ತು. ಕರ್ನಾಟಕದ ವಿಧಾನಪರಿಷತ್‌ನಲ್ಲಿ ಗೊತ್ತುವಳಿ ಮಂಡನೆ ವೇಳೆ ನಡೆದ ಸಭಾಪತಿಗಳ ತಳ್ಳಾಟದಂತೆ, ಬಿಹಾರ ವಿಧಾನಸಭೆಯಲ್ಲೂ ಅದೇ ರೀತಿಯ ಗಲಭೆ ಎದ್ದಿತ್ತು. ಅಷ್ಟಕ್ಕೂ ಈ ರೀತಿ ಎಳೆದಾಟ, ಕೋಲಾಹಲಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ವಿಶೇಷ ಸಶಸ್ತ್ರ ಪೊಲೀಸ್‌ ಮಸೂದೆಗೆ ವಿರೋಧ!ವಿಧಾನಸಭೆಯಲ್ಲಿ ಬಿಹಾರ ಸರಕಾರ ಮಂಗಳವಾರ ಮಂಡಿಸಿದೆ. ಇದಕ್ಕೆ ಆರ್‌ಜೆಡಿ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಶೇಷ ಸಶಸ್ತ್ರ ಪೊಲೀಸ್‌ ಮಸೂದೆ ಮಂಡನೆ ಬೇಡವೇ ಬೇಡ ಎಂದು ಬೇಡಿಕೆ ಇಟ್ಟಿದೆ. ಮಾಜಿ ಡಿಸಿಎಂ , ತೇಜ್‌ ಪ್ರತಾಪ್‌ ಯಾದವ್‌ ಸೇರಿ ಆರ್‌ಜೆಡಿ ನಾಯಕರು, ಕಾರ್ಯಕರ್ತರು ವಿಧಾನಸಭೆ ಮುಂದೆ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ವಿಧಾನಸಭೆ ಮುಂದೆ ನೇಮಕವಾಗಿದ್ದ ಪೊಲೀಸರು ಜಲಫಿರಂಗಿ ಬಳಸಿ ಪ್ರತಿಭಟನಾಕಾರನನ್ನು ಹತ್ತಿಕ್ಕಿದ್ದಾರೆ. ತೇಜಸ್ವಿ ಯಾದವ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ವಿಪಕ್ಷಗಳ ಆಕ್ರೋಶ ಇನ್ನು ಹೆಚ್ಚಾಗಿತ್ತು. ಸ್ಪೀಕರ್‌ ಕೊಠಡಿಗೆ ಮುತ್ತಿಗೆ! ಇತ್ತ ಆರ್‌ಜೆಡಿ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರೂ, ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಸರಕಾರ ಮಸೂದೆ ಮಂಡನೆಗೆ ಮುಂದಾಗಿದೆ. ಅಲ್ಲದೆ ಇತ್ತ ತಮ್ಮ ನಾಯಕರನ್ನು ಬಂಧಿಸಿರುವುದು ಆರ್‌ಜೆಡಿ ಶಾಕರನ್ನು ಮತ್ತಷ್ಟು ಕೆರಳಿಸಿತ್ತು. ಇದರಿಂದ ಕೋಪಗೊಂಡ ಸದಸ್ಯರು, ಸ್ಪೀಕರ್‌ ವಿಜಯ್‌ ಕುಮಾರ್‌ ಸಿನ್ಹಾ‌ ಕೊಠಡಿ ಮುಂದೆ ಪ್ರತಿಭಟಿಸಿದ್ದಾರೆ. ವಿಧಾನಸಭೆಗೆ ಸ್ಪೀಕರನ್ನು ಹೋಗಲು ಬಿಡದೆ ಅಲ್ಲೇ ನಿಂತು ಪ್ರತಿಭಟಿಸಿದ್ದಾರೆ. ಕಲಾಪಕ್ಕೆ ಸ್ಪೀಕರ್‌ ಹಾಜರಾಗುವುದಕ್ಕೆ ತಡೆಯೊಡ್ಡಿದ ಹಿನ್ನೆಲೆ ಪೊಲೀಸರು ಹಾಗೂ ಅರೇ ಸೇನಾ ಸಿಬ್ಬಂದಿಗಳು ಬಂದು ಮಹಿಳಾ ಹಾಗೂ ಪುರುಷ ಶಾಸಕರನ್ನು ಹೊರದಬ್ಬಿದ್ದಾರೆ. ಕೈ ಕಾಲು ಹಿಡಿದು ಹೊರಗೆ ಎಸೆದಿದ್ದಾರೆ. ಇದಕ್ಕೆ ಆರ್‌ಜೆಡಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೊಂದು ಅತ್ಯಂತ ಕೆಟ್ಟ ರೀತಿಯಲ್ಲಿ ವಿಪಕ್ಷವನ್ನು ನಡೆಸಿಕೊಂಡಿದೆ ಎಂದು ಆರೋಪಿಸಿದೆ. ಇನ್ನು ಈ ನಡೆಯನ್ನು ಸಮರ್ಥಿಸಿಕೊಂಡಿರುವ ಸರಕಾರ, ವಿಪಕ್ಷಗಳು ಸುಖಾಸುಮ್ಮನೆ ಈ ಮಸೂದೆಯನ್ನು ರಾಜಕೀಯಗೊಳಿಸುತ್ತಿದೆ. ರಾಜ್ಯದ ಶ್ರೇಯಕ್ಕೆ ಮಸೂದೆ ಮಂಡನೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಇಷ್ಟೆಲ್ಲ ಕೋಲಾಹಲದ ಮಧ್ಯೆಯೂ ಎನ್‌ಡಿಎ ನೇತೃತ್ವದ ಸರಕಾರದ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಈ ಮಸೂದೆಯು ಬಿಹಾರದ ಪೊಲೀಸರಿಗೆ ವಾರಂಟ್‌ ಇಲ್ಲದೆ ಜನರನ್ನು ಬಂಧಿಸುವುದರ ಜತೆಗೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾಪ ಹೊಂದಿದೆ.


from India & World News in Kannada | VK Polls https://ift.tt/2PnVmiR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...