ಬೆಂಗಳೂರು: ಮೀಸಲು ಹೋರಾಟ, ಯತ್ನಾಳ್ ಅಪಸ್ವರ ಹಾಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿ, ರೇಣುಕಾಚಾರ್ಯ, ನಾರಾಯಣಗೌಡಗೆ ಭರ್ಜರಿ ಕೊಡುಗೆ ಸಿಕ್ಕಿದರೆ, ಶಿವಮೊಗ್ಗಕ್ಕೆ ಅತಿ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದಾರೆ. 436 ದೇಗುಲ ಮಠಗಳಿಗೆ 80 ಕೋಟಿ 25 ಲಕ್ಷ ಹಂಚಿಕೆ ಮಾಡಿದ್ದ ಯಡಿಯೂರಪ್ಪ ಅವರು ಮೊದಲ ಹಂತದಲ್ಲಿ 8 ಕೋಟಿ ಬಿಡುಗಡೆ ಮಾಡಿದ್ದಾರೆ. ಉಪಚುನಾವಣೆ ಇರುವ ಬಸವಕಲ್ಯಾಣದ ಹಾವಗಿಲಿಂಗೇಶ್ವರ ಹಿರೇಮಠಕ್ಕೆ 10 ಲಕ್ಷ ಹಾಗೂ ಬೆಳಗಾವಿ ಜಿಲ್ಲೆಗೆ 7.78ಕೋಟಿ ಬಿಡುಗಡೆ ಮೂಲಕ ಉಪಚುನಾವಣೆ ಗೆಲ್ಲುವ ತಂತ್ರ ಅನುಸರಿಸಿದ್ದಾರೆ. ಮಠ-ಮಂದಿರ!ದಾವಣಗೆರೆ ಜಿಲ್ಲೆಗೆ 2 ಕೋಟಿ 89 ಲಕ್ಷ, ಹೊನ್ನಾಳಿ ಕ್ಷೇತ್ರವೊಂದಕ್ಕೆ 2 ಕೋಟಿ 64, ಹಿರೇಕಲ್ಮಠವೊಂದಕ್ಕೇ 1 ಕೋಟಿ, ಕುಣಿಗಲ್ನಲ್ಲಿರುವ ರಂಭಾಪುರಿ ಶಾಖಾಮಠಕ್ಕೆ 1 ಕೋಟಿ, ನೊಣವಿನಕೆರೆ ಕ್ಷೇತ್ರಕ್ಕೆ 50 ಲಕ್ಷ, ಬೆಂಗಳೂರಿನ ನಿಡುಮಾಮಿಡಿ ಮಠಕ್ಕೆ 25 ಲಕ್ಷ ನೀಡಲಾಗಿದೆ. ಸಿಎಂ ತವರಿಗೆ ಭರಪೂರ!ಶಿವಮೊಗ್ಗ ಜಿಲ್ಲೆ 146 ಮಠ, ಮಂದಿರಗಳಿಗೆ 15 ಕೋಟಿ 33 ಲಕ್ಷ ಹಂಚಿಕೆ ಮಾಡಿದ್ದಾರೆ. ಶಿಕಾರಿಪುರಕ್ಕೆ 2ಕೋಟಿ 50 ಲಕ್ಷ, ಕಾಂಗ್ರೆಸ್ ನ ಸಂಗಮೇಶ್ವರ್ ಪ್ರತಿನಿಧಿಸುವ ಭದ್ರಾವತಿಗೆ ಬಿಡಿಗಾಸು ನೀಡಲ್ಲದಿರುವುದು ಸೋಜಿಗವಾಗಿದೆ. ವಿಡಿಯೋ ಪ್ರಕರಣದಲ್ಲಿಸಿಲುಕಿಕೊಂಡು ಸಚಿವ ಸ್ಥಾನ ತ್ಯಾಗ ಮಾಡಿರುವ ರಮೇಶ್ ಜಾರಕಿಹೊಳಿ ಕ್ಷೇತ್ರದ ಗೋಕಾಕ್ ನಗರ ಹಿಂದೂ ಕ್ಷತ್ರೀಯ ಸಭಾದ ಸಭಾಭವನ ನಿರ್ಮಾಣಕ್ಕೆ 1 ಕೋಟಿ, ಸಚಿವ ನಾರಾಯಣ ಗೌಡ ಪ್ರತಿನಿಧಿಸುವ ಕೆ.ಆರ್.ಪೇಟೆ ಕ್ಷೇತ್ರಕ್ಕೆ 7 ಕೋಟಿ 5 ಲಕ್ಷ ಹಂಚಿಕೆ ಬಿಡುಗಡೆ ಮಾಡಿದ್ದಾರೆ. ಹಾಸನಕ್ಕೆ 2 ಕೋಟಿ 31 ಲಕ್ಷ ರೂ ಬಿಡುಗಡೆ ಮಾಡಿದ್ದರೂ ರೇವಣ್ಣ ಹೊಳೆನರಸೀಪುರ ಕ್ಷೇತ್ರಕ್ಕೆ ಶೂನ್ಯ, ಬಾಗಲಕೋಟೆ ಜಿಲ್ಲೆಗೆ 1 ಕೋಟಿ 5 ಲಕ್ಷ ಆದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಕೇವಲ 5 ಲಕ್ಷ ನೀಡಿದ್ದಾರೆ. ವಿಜಯಪುರ ಜಿಲ್ಲೆ 2 ಕೋಟಿ 2 ಲಕ್ಷ ನೀಡಿದರೆ ಆಗಾಗ ಬಂಡಾಯ ಧ್ವನಿ ಮೊಳಗಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಕ್ಷೇತ್ರಕ್ಕೆ 1 ಕೋಟಿ ನೀಡಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಪ್ರತಿನಿಧಿಸುತ್ತಿರುವ ರಾಮನಗರಕ್ಕೆ 1 ಕೋಟಿ ಲಭಿಸಿದೆ.
from India & World News in Kannada | VK Polls https://ift.tt/2Pcd6xA