ಈ ಜೋಡಿ ನೋಡುತ್ತಿದ್ದರೆ ಸೆಹ್ವಾಗ್‌-ಸಚಿನ್‌ ನೆನಪಾಗುತ್ತಾರೆಂದ ವಾನ್‌!

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಐದನೇ ಟಿ20 ಪಂದ್ಯದಲ್ಲಿ ಜತೆ ಟೀಮ್‌ ಇಂಡಿಯಾ ನಾಯಕ ಇನಿಂಗ್ಸ್ ಆರಂಭಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಅದರಂತೆ ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 94 ರನ್‌ ಗಳಿಸುವ ಮೂಲಕ ತಂಡಕ್ಕೆ ಅತ್ಯುತ್ತಮ ಆರಂಭವನ್ನು ತಂದುಕೊಟ್ಟಿತ್ತು. ಇದಕ್ಕೂ ಮುನ್ನ ಕಳೆದು ನಾಲ್ಕು ಪಂದ್ಯಗಳಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ್ದ ಕೆ.ಎಲ್‌ ರಾಹುಲ್‌ ಸತತ ವೈಫಲ್ಯ ಅನುಭವಿಸಿದ್ದರು. ಅವರು ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 1, 0, 0 ಹಾಗೂ 14 ರನ್‌ಗಳೊಂದಿಗೆ ಕೇವಲ 15 ರನ್‌ ಮಾತ್ರ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ 5ನೇ ಪಂದ್ಯದಲ್ಲಿ ಅವರ ಸ್ಥಾನದಲ್ಲಿ ವಿರಾಟ್‌ ಕೊಹ್ಲಿಯೇ ಇನಿಂಗ್ಸ್ ಆರಂಭಿಸಿ ಯಶಸ್ವಿಯಾದರು. ಆರಂಭದಲ್ಲಿ ರೋಹಿತ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಮಾಡುವ ವೇಳೆ, ವಿರಾಟ್‌ ಕೊಹ್ಲಿ ಸಿಂಗಲ್ಸ್ ಆಡುವ ಮೂಲಕ ಅವರಿಗೆ ಸಾಥ್‌ ನೀಡುತ್ತಿದ್ದರು. ಒಮ್ಮೆ ರೋಹಿತ್‌ 34 ಎಸೆತಗಳಲ್ಲಿ 64 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ಹೊತ್ತ ನಾಯಕ ಕೊಹ್ಲಿ, ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆ ಮೂಲಕ ಅಜೇಯ 80 ರನ್‌ ಗಳಿಸಿ ಭಾರತದ 36 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆರಂಭಿಕ ಜೋಡಿಯ ಪ್ರದರ್ಶನವನ್ನು ಮೆಚ್ಚಿಕೊಂಡ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್‌ ವಾನ್‌, ಈ ಇಬ್ಬರೂ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರೇಂದ್ರ ಸೆಹ್ವಾಗ್‌ ಜೋಡಿಯನ್ನು ನೆನಪು ಮಾಡಿದ್ದಾರೆಂದು ಹೇಳಿದ್ದಾರೆ. "ಬಲಗೈ ಬ್ಯಾಟಿಂಗ್‌ನಲ್ಲಿ ನೀವು ಎಲ್ಲಾ ಕ್ರಮಾಂಕದಲ್ಲಿ ಯಶಸ್ವಿಯಾಗಬೇಕಾದರೆ ನಿಮಗೆ ಸ್ವಲ್ಪ ಅದೃಷ್ಠ ಬೇಕಾಗುತ್ತದೆ. ಭಾರತ ತಂಡ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರೊಂದಿಗೆ ಯಶಸ್ವಿಯಾಗಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನ ಟೀಮ್‌ ಇಂಡಿಯಾಗೆ ರೋಹಿತ್‌-ಕೊಹ್ಲಿ ಓಪನಿಂಗ್‌ ಮಾಡಿಸುವ ಬಗ್ಗೆ ಯಾವುದೇ ಉದ್ದೇಶವಿರಲಿಲ್ಲ. ಆದರೆ, ಇಂದು(ಶನಿವಾರ) ಈ ಇಬ್ಬರೂ ವಿರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಆರಂಭಿಕ ಜೋಡಿಯನ್ನು ನೆನಪು ಮಾಡಿಸಿದ್ದಾರೆ," ಎಂದು ಹೇಳಿದರು. "ಟಿ20 ಇನಿಂಗ್ಸ್‌ನಲ್ಲಿ ನಿಮಗೆ ಕೇವಲ 120 ಎಸೆತಗಳು ಮಾತ್ರ ಇರುತ್ತವೆ. ಈ ಎಲ್ಲಾ ಎಸೆತಗಳು ತಂಡದ ಎಲ್ಲಾ ಆಟಗಾರರಿಗೂ ವ್ಯಾಪಕವಾಗಿರುತ್ತದೆ. ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಗರಿಷ್ಠ ಎಸೆತಗಳನ್ನು ಎದುರಿಸಿದರೆ, ಇನ್ನುಳಿದ ಆಟಗಾರರು ಇನ್ನುಳಿದ ಎಸೆತಗಳನ್ನು ಆಡಬೇಕಾಗುತ್ತದೆ. ವಿರಾಟ್‌ ಕೊಹ್ಲಿ ಹೆಚ್ಚಿನ ಎಸೆತಗಳನ್ನು ಎದುರಿಸಿದರೆ ತಂಡಕ್ಕೆ ಅದ್ಭುತ ಕಾಣಿಕೆ ನೀಡುತ್ತಾರೆಂದು ಎಲ್ಲರಿಗೂ ಗೊತ್ತು," ಎಂದು ಟೆಲಿಗ್ರಾಫ್‌ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ವಾನ್‌ ತಿಳಿಸಿದ್ದಾರೆ. "52 ಎಸೆತಗಳಲ್ಲಿ 80 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಜತೆ ಇನ್ನುಳಿದ ಮೂವರು ಬ್ಯಾಟ್ಸ್‌ಮನ್‌ಗಳು 68 ಎಸೆತಗಳಲ್ಲಿ 135 ರನ್‌ ಗಳಿಸಿದರೆ, ಅದು ಅದ್ಭುತ ಟಿ20 ಇನಿಂಗ್ಸ್ ಆಗಲಿದೆ. ನಾಲ್ಕನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹೆಚ್ಚು ಹೊತ್ತು ಆಡಲು ಸಾಧ್ಯವಾಗಿರಲಿಲ್ಲ, ಇದು ಅಂದೇ ಟೀಮ್‌ ಇಂಡಿಯಾಗೆ ಅರಿವಾಗಿತ್ತು. ಈ ಹಿನ್ನೆಲೆಯಲ್ಲಿ ಕೊಹ್ಲಿಯನ್ನು ಐದನೇ ಪಂದ್ಯಕ್ಕೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಯಿತು ," ಎಂದು ಹೇಳಿದರು. ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಮುಡಿಗೇರಿಸಿಕೊಂಡಿರುವ ಟೀಮ್‌ ಇಂಡಿಯಾ, ಮಾರ್ಚ್‌ 23 ರಿಂದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vPiibu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...