ರಾಯಚೂರು: ಪೌರತ್ವ ಕಾಯಿದೆ ಜಾರಿಗೆ ವಿರೋಧಕ್ಕೆ ಮಾಹಿತಿ ನೀಡಿಕೆ ಕೊರತೆ ಕಾರಣ. ದೇಶದ ಎಲ್ಲ ನಿವಾಸಿಗಳನ್ನೊಳಗೊಂಡಂತೆ ಮೊದಲು ಸಮಾಲೋಚಿಸಿ ನಂತರ ಕೇಂದ್ರವು ಈ ಕಾಯಿದೆ ಜಾರಿಗೆ ತರಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ, ಪೌರತ್ವ ನೀಡಿಕೆ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಅನ್ಯಾಯ ಮಾಡಿದರೆ ತಾವು ಬಾಧಿತರ ಪರ ನಿಲ್ಲುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು. ಧರ್ಮಾಧಾರಿತವಾಗಿ ಪೌರತ್ವ ನೀಡಿಕೆ ಸಮಂಜಸವಲ್ಲ. ಎಲ್ಲ ದೇಶಗಳಲ್ಲಿ ಶರಣು ಬಂದವರಿಗೆ ಸ್ಥಳೀಯ ಕಾನೂನಿನ್ವಯ ಪೌರತ್ವ ನೀಡುವ ಪದ್ಧತಿ ಇದೆ. ದೇಶೀ ಬಿತ್ತನೆ ಬೀಜದ ತಳಿಗಳ ವೃದ್ಧಿಗೆ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಯುವಕರಿಗೆ ಒತ್ತಡ ಮುಕ್ತ ಬದುಕು ನಿರ್ವಹಣೆ ತರಬೇತಿ ನೀಡಿಕೆ. ಯೋಗದಿಂದ ಉದ್ಯೋಗ ಎಂಬಂತೆ ಉದ್ಯೋಗ ಸೃಷ್ಟಿಗೆ ಸಂಸ್ಥೆಯಿಂದಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ರವಿಶಂಕರ್ ಗುರೂಜಿ ತಿಳಿಸಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪನೆಯ 40ನೇ ವರ್ಷಾಚರಣೆ ಶೀಘ್ರ ದಕ್ಷಿಣ ಭಾರತದಲ್ಲಿ ಆಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದು ರವಿಶಂಕರ್ ಗುರೂಜಿ ತಿಳಿಸಿದರು.
from India & World News in Kannada | VK Polls https://ift.tt/399XEXn