ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿದಾತ ಎಎಪಿ ಸದಸ್ಯ: ತಳ್ಳಿಹಾಕಿದ ಕಪಿಲ್ ಕುಟುಂಬ

ಹೊಸದಿಲ್ಲಿ: ಫೆಬ್ರವರಿ 1 ರಂದು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಪಿಲ್‌ ಗುಜ್ಜರ್‌ ಎಎಪಿ ಸದಸ್ಯ ಎಂದು ದಿಲ್ಲಿ ಪೊಲೀಸರು ಮಂಗಳವಾರ ತಿಳಿಸಿದ್ದರು. ಆದರೆ, ಪೊಲೀಸರ ಹೇಳಿಕೆಯನ್ನು ಆಮ್‌ ಆದ್ಮಿ ಪಕ್ಷ ಹಾಗೂ ಸ್ವತ: ಕಪಿಲ್‌ ಕುಟುಂಬ ತಳ್ಳಿಹಾಕಿದೆ. ಜೈ ಶ್ರೀ ರಾಮ್ ಎಂದು ಕೂಗಿ ಹೊಸದಿಲ್ಲಿಯ ಶಾಹೀನ್‌ ಬಾಗ್‌ ಸಿಎಎ ವಿರೋಧಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ್ದ 25 ವರ್ಷದ ಕಪಿಲ್‌ ಗುಜ್ಜಾರ್‌ ತಾನು ಎಎಪಿ ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಆಮ್‌ ಆದ್ಮಿ ಪಕ್ಷದ ಕ್ಯಾಪ್‌ ಧರಿಸಿದ್ದ ಫೋಟೋ ಶೂಟರ್‌ನ ಫೋನ್‌ನಲ್ಲಿದೆ ಎಂದು ದಿಲ್ಲಿ ಪೊಲೀಸರು ತೋರಿಸಿದ್ದರು. ಅಲ್ಲದೆ, ಎಎಪಿಯ ನಾಯಕರಾದ ಸಂಜಯ್‌ ಸಿಂಗ್ ಹಾಗೂ ಅತೀಶಿಯೊಂದಿಗಿರುವ ಫೋಟೋ ತೋರಿಸಿದ್ದರು. ಆದರೆ, ಎಎಪಿ ಜತೆ ತಮಗೆ ಯಾವುದೇ ಸಂಪರ್ಕವಿಲ್ಲ ಎಂದು ಕಪಿಲ್‌ನ ತಂದೆ ಹಾಗೂ ಸಹೋದರ ಹೇಳಿಕೊಂಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಕಪಿಲ್ ಗುಜ್ಜಾರ್‌ನ ತಂದೆ ಗಾಜೇ ಸಿಂಗ್‌, ನನಗೂ ನನ್ನ ಕುಟುಂಬಕ್ಕೂ ಎಎಪಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಕಳೆದ ವರ್ಷ ಲೋಕಸಭೆ ಚುನಾವಣೆಗೆ ಪ್ರಚಾರಕ್ಕೆ ಬಂದ ವೇಳೆ ಎಎಪಿ ಟೋಪಿಗಳನ್ನು ಹಾಕಿಕೊಳ್ಳುವಂತೆ ಪಕ್ಷದವರು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ತಾನು ಬಿಎಸ್‌ಪಿಯಲ್ಲಿದ್ದೆ, 2012 ರಲ್ಲಿ ಬಿಎಸ್‌ಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಬಳಿಕ ತನ್ನ ಅನಾರೋಗ್ಯದ ಕಾರಣ ರಾಜಕೀಯ ತೊರೆದಿದ್ದೇನೆ. ಜತೆಗೆ, ಪ್ರಚಾರಕ್ಕೆ ಬಂದ ಬಿಜೆಪಿ ಸೇರಿ ಎಲ್ಲ ಪಕ್ಷದ ಅಭ್ಯರ್ಥಿಗಳನ್ನು ಸ್ವಾಗತಿಸಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ. ಫೆಬ್ರವರಿ 1 ರಂದು ಶಾಹೀನ್‌ ಬಾಗ್‌ನಲ್ಲಿ ನೂರಾರು ಮಹಿಳೆಯರು, ಮಕ್ಕಳು ಸೇರಿ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದವರತ್ತ ಕಪಿಲ್‌ ಗುಜ್ಜಾರ್ 2 - 3 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅಲ್ಲದೆ, ನಮ್ಮ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರ ಇರಬೇಕು ಎಂದೂ ಹೇಳಿಕೊಂಡಿದ್ದರು.


from India & World News in Kannada | VK Polls https://ift.tt/2RWBVwd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...