ಕೋಲಾರ: ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದು ಸತ್ಯ, ವರ್ಗಾವಣೆಯಲ್ಲಿ ಪ್ರಭಾವಿಗಳು ಕೈವಾಡ ಇರೋದು ಕೂಡ ಸತ್ಯ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ , "ವರ್ಗಾವಣೆಯ ಸ್ಥಳವನ್ನು ಪ್ರಭಾವಿಗಳು ಬ್ಲಾಕ್ ಮಾಡುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ದಂಧೆಯಿದು. ಇದರಲ್ಲಿ ಪ್ರಭಾವಿಗಳ ಕೈವಾಡವಿದೆ. ಇದರಿಂದ ಧ್ವನಿ ಇಲ್ಲದವರಿಗೆ ತೊಂದರೆ ಆಗುತ್ತಿರೋದು ನೂರಕ್ಕೆ ನೂರು ಸತ್ಯ'' ಎಂದರು. ''ಮುಂದಿನ ದಿನಗಳಲ್ಲಿ ನಡೆಯುವ ವರ್ಗಾವಣೆಯಲ್ಲಿ ಪಾರದರ್ಶಕವಾಗಿ ನಡೆಯೋದಿಕ್ಕೆ ಪ್ರಯತ್ನ ಪಡುತ್ತೇನೆ. ವರ್ಗಾವಣೆಯನ್ನ ವರ್ಷವಿಡಿ ಮಾಡೋದಿಲ್ಲ, ಜೂನ್ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸುತ್ತೇವೆ. ಎಲ್ಲಾ ಶಿಕ್ಷಕರು ಜೂನ್ ನಿಂದಲೇ ಶಾಲೆಗಳಿಗೆ ಹೋಗಬೇಕು. ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುತ್ತೇನೆ'' ಎಂದು ಸುರೇಶ್ ಕುಮಾರ್ ಭರವಸೆ ನೀಡಿದರು.
from India & World News in Kannada | VK Polls https://ift.tt/381yfPh