ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ()ಯ ಅಧಿಕಾರ ಹಿಡಿದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಅವರ ಹೊಸ ಜವಾಬ್ದಾರಿಯ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಸಮಯದಲ್ಲಿ ಈ ಇಬ್ಬರೂ ಮಾಜಿ ಕ್ರಿಕೆಇಗರು ಎದುರು ಬದುರಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರು. ಇದೀಗ ಭಾರತ ತಂಡದ ಮಾಜಿ ನಾಯಕನ ಕುರಿತಾಗಿ ಸಕ್ಲೇನ್ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. "2005-6ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನಾನು ಸಸೆಕ್ಸ್ ತಂಡದ ಪರ ಆಡುತ್ತಿದ್ದೆ. ಭಾರತ ತಂಡ ಸಸೆಕ್ಸ್ ಎದುರು 3 ದಿನದ ಅಭ್ಯಾಸ ಪಂದ್ಯವನ್ನಾಡಿತ್ತು. ಆದರೆ, ಸೌರವ್ ಆ ಪಂದ್ಯದಲ್ಲಿ ಆಡಲಿಲ್ಲ. ಸಸೆಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು," ಎಂದು ಸಕ್ಲೇನ್ ತಮ್ಮ ನೆನಪಿನಾಳ ಕೆದಕಿದ್ದಾರೆ. "ನನ್ನ ಎರಡೂ ಮಂಡಿಗಳಿಗೆ ಶಸ್ತ್ರಚಿಕಿತ್ಸೆ ಪಡೆದಿದ್ದೆ. ಸುಮಾರು 36-37 ವಾರಗಳ ಕಾಲ ನಾನು ಹಾಸಿಗೆ ಹಿಡಿಯುವಂತಾಗಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಪಟ್ಟಿದೆ. ಬಳಿಕ ಕಮ್ಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದೆ. ಈ ಸಂದರ್ಭದಲ್ಲಿ ನಾನು ಸಸೆಕ್ಸ್ ತಂಡದ ಡ್ರೆಸಿಂಗ್ ರೂಮ್ನಲ್ಲಿ ಇದ್ದಾಗ ನನ್ನನು ಭೇಟಿಯಾದ ಸೌರವ್, ನನ್ನ ಆರೋಗ್ಯ ವಿಚಾರಿಸಿದ್ದರು. ಬಳಿಕ ಕಾಫಿ ಕುಡಿಯುತ್ತಾ ಮಾತನಾಡಲು ಆರಂಭಿಸಿ ಕೇವಲ 40 ನಿಮಿಷಗಳಲ್ಲಿ ನನ್ನ ಮನ ಗೆದ್ದರು," ಎಂದು ಸಕ್ಲೇನ್ ದಾದಾ ಖ್ಯಾತಿಯ ಎಡಗೈ ಬ್ಯಾಟ್ಸ್ಮನ್ ಜೊತೆಗಿನ ತಮ್ಮ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. ಗಂಗೂಲಿ ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು ಖಂಡಿತವಾಗಿ ಅವರ ಸಾರಥ್ಯದಲ್ಲಿ ಬಿಸಿಸಿಐ ಕೂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿದೆ ಎಂದು ಸಕ್ಲೇನ್ ಭವಿಷ್ಯ ನುಡಿದಿದ್ದಾರೆ. "ನಾನು ಆಡುತ್ತಿದ್ದಾಗ ಭಾರತ ಮತ್ತು ಪಾಕ್ ತಂಡಗಳ ನಡುವೆ ಅದ್ಭುತ ಪೈಪೋಟಿ ಇತ್ತು. ಆದರೆ ಪಂದ್ಯ ಮುಗಿದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿತ್ತು. ಎರಡೂ ತಂಡದ ಆಟಗಾರರ ನಡುವೆ ಉತ್ತಮ ಬಾಂಧವ್ಯವಿತ್ತು," ಎಂದು ಸಕ್ಲೇನ್ ಹೇಳಿದ್ದಾರೆ. "ಗಂಗೂಲಿ ಭಾರತ ತಂಡದ ನಾಯಕನಾಗಿದ್ದಾಗ ಅದ್ಭುತವಾಗಿ ತಮ್ಮ ಕೆಲಸ ನಿಭಾಯಿಸಿದ್ದಾರೆ. ಇದೀಗ ಬಿಸಿಸಿಐನ ಅಧಿಕಾರ ಅವಧಿಯಲ್ಲೂ ಉತ್ತಮ ಪಥದಲ್ಲಿ ಸಾಗುವಂತೆ ಮಾಡುತ್ತಾರೆ. ಅವರಿಗೆ ಶುಭವಾಗಲಿ," ಎಂದು ಹಾರೈಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2sjdYoU