ಕನಕಪುರದಲ್ಲಿ ಕಾಡಾನೆ ದಾಳಿಗೆ ಬಲಿಯಾದ ಯುವಕ

ಕನಕಪುರ: ಬೆಳಗಿನ ಮುಂಜಾವಿನಲ್ಲಿಜಾಗಿಂಗ್‌, ವಾಕಿಂಗ್‌ಗೆ ತೆರಳಿದ್ದ ಸ್ನೇಹಿತರ ತಂಡದಲ್ಲಿದ್ದ ಯುವಕನ ಮೇಲೆ ನಡೆಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಡಿಹಳ್ಳಿ ರಸ್ತೆಯ ನಾರಾಯಣಪುರ ಬಳಿ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಕಸಬಾ ಹೋಬಳಿಯ ಟಿ. ಬೇಕುಪ್ಪೆ ಗ್ರಾಮದ ಚೇತನ್‌(26) ಎಂದು ಗುರುತಿಸಲಾಗಿದ್ದು, ಈತ ಎಂದಿನಂತೆ ತನ್ನ ಸ್ನೇಹಿತರಾದ ಮಧು ಮತ್ತು ನವೀನ್‌ ಎಂಬ ಸ್ನೇಹಿತರ ಜೊತೆಯಲ್ಲಿ ನಿತ್ಯದಂತೆ ಇಂದು ಬೆಳಗಿನ ಜಾವ 4.30 ಕ್ಕೆ ಜಾಗಿಂಗ್‌ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ಯುವಕನ ಸ್ನೇಹಿತರಾದ ಮಧು ಮತ್ತು ನವೀನ್‌ ಒಟ್ಟಿಗೆ ತೆರಳಿದ್ದರೂ ಗ್ರಾಮದ ಹೊರಗೆ ಸಾಗುತ್ತಿದ್ದಂತೆ, ಮೃತ ಚೇನತ್‌ ಇಬ್ಬರು ಸ್ನೇಹಿತರ ವಾಕಿಂಗ್‌ ಮಾಡುತ್ತಾ ಸಾಗಿದರೆ ಈತ ಜಾಗಿಂಗ್‌ ಮಾಡುತ್ತಾ ಮುಂದೆ ಸಾಗಿದ್ದಾನೆ, ಮುಂದೆ ಸಾಗುತ್ತಿದ್ದಂತೆ ಒಂಟಿಯಾದ ಈತ ರಸ್ತೆಯ ಸನಿಹದಲ್ಲಿದ್ದ ರಾಗಿ ಹುಲ್ಲಿನ ಮೆದೆಯಲ್ಲಿ ಹುಲ್ಲು ಮೇಯುತ್ತಿದ್ದ ಕಾಡಾನೆಯನ್ನು ಗಮನಿಸದೆ ಸಾಗುತ್ತಿದ್ದಾಗ ಅಟ್ಟಾಡಿಸಿದ ಬಂದ ಕಾಡಾನೆ ದಾಳಿ ನಡೆಸಿ ಸಾಯಿಸಿದೆ. ಪ್ರಾಣಕ್ಕೆ ಎರವಾದ ಮೂಬೈಲ್‌ ಟಾರ್ಚ್‌ : ಜಾಗಿಂಗ್‌ ಮಾಡುವ ಸಮಯದಲ್ಲಿರಸ್ತೆ ಕಾಣದಷ್ಟು ಕತ್ತಲು ಇದ್ದುದರಿಂದ ರಸ್ತೆಯಲ್ಲಿಮೊಬೈಲ್‌ ಟಾರ್ಚ್‌ ಮೂಲಕ ಬೆಳಕು ಹಾಕಿಕೊಂಡು ಜಾಗಿಂಗ್‌ ಮಾಡುತ್ತಾ ಸಾಗುತ್ತಿದ್ದ ಈತನನ್ನು ಮೊಬೈಲ್‌ ಟಾರ್ಚ್‌ ಬೆಳಕನ್ನು ಕಂಡು ಕೋಪಗೊಂಡ ಕಾಡಾನೆ ಬೆಳಕು ಸನಿಹಕ್ಕೆ ಧಾವಿಸುತ್ತಿದ್ದಂತೆ ಯುವಕನ ಮೇಲೆ ದಾಳಿಗೆ ಮುಂದಾಗಿದೆ, ರಸ್ತೆಯ ಸನಿಹದಲ್ಲಿದ್ದ ಹುಲ್ಲಿನ ಮೆದೆಯ ಬಳಿಯಿದ್ದ ಕಾಡಾನೆ ದೂರದಿಂದಲೇ ಟಾರ್ಚ್‌ ಬೆಳಕನ್ನು ಗಮನಿಸಿದ್ದು, ಈತ ಜಾಂಗಿಂಗ್‌ ಮಾಡುತ್ತಾ ಟಾರ್ಚ್‌ ಹಾಕಿಕೊಂಡು ಬರುತ್ತಿದ್ದನ್ನು ಕಂಡು ತನ್ನ ಬಳಿ ಬರುತ್ತಿರಬಹುದು ಎಂದು ಬಾವಿ ಈ ದಾಳಿ ನಡೆಸಿದೆ ಎನ್ನಲಾಗಿದೆ. ಟಾರ್ಚ್‌ ಬೆಳಕು ಕಂಡರೆ ಆನೆಗಳಿಗೆ ಆತಂಕವಾಗಿ ಇಂತಹ ದಾಳಿಗೆ ಮುಂದಾಗುತ್ತವೆ ಎಂದು ಹಲವಾರು ಪ್ರಕರಣಗಳಲ್ಲಿ ರುಜುವಾತಾಗಿದ್ದು, ಈ ಪ್ರಕರಣದಲ್ಲೂ ಸಹ ಟಾರ್ಚ್‌ ಬೆಳಕಿನಿಂದ ಆನೆ ಕೆರಳಿ ದಾಳಿಗೆ ಮುಂದಾಗಿದೆ ಎನ್ನಲಾಗಿದೆ. ಸ್ನೇಹಿತ ಸತ್ತರೂ ತಿಳಿಯಲಿಲ್ಲ : ಜೊತೆಯಲ್ಲೇ ಜಾಗಿಂಗ್‌ ಮತ್ತು ವಾಕಿಂಗ್‌ ಮಾಡುತ್ತಿದ್ದ ಸ್ನೇಹಿತರು, ಇಂದು ನಡೆದ ಅವಘಡದಲ್ಲಿ ಜಾಗಿಂಗ್‌ ಮಾಡುತ್ತಾ ಮುಂದೆ ಸಾಗಿ ಆನೆದಾಳಿಯಿಂದ ಮೃತಪಟ್ಟ ಸ್ನೇಹಿತ ಸತ್ತುರಸ್ತೆ ಬದಿಯಲ್ಲೇ ಮಲಗಿದ್ದರೂ ತಿಳಿಯದೆ ಇಬ್ಬರು ಸ್ನೇಹಿತರು ನಾರಾಯಣಪುರ ಗ್ರಾಮದ ಸನಿಹಕ್ಕೆ ತೆರಳಿ ಹಿಂತಿರುಗುವಾಗ ಈತ ಕಾಣದಿದ್ದಾಗ ಪೋನ್‌ಗೆ ಕರೆ ಮಾಡಿದ್ದಾರೆ ಪೋನ್‌ ರಿಂಗ್‌ ಆದರೂ ಈತತ ಸುಳಿವು ಸಿಗಿದ್ದಾಗ ಆತಂಕದಿಂದ ಗ್ರಾಮದ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ಬರುವಂತೆ ತಿಳಿಸಿ ಬೈಕ್‌ನಲ್ಲಿರಸ್ತೆಯ ಸನಿಹವನ್ನೇಲ್ಲಾ ಶೋಧಿಸತೊಡಗಿದಾಗ ರಸ್ತೆ ಬದಿಯಲ್ಲಿ ಸತ್ತುಮಲಗಿದ್ದ ಸ್ನೇಹಿತನನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಎಣಿಕೆಗೆ ನಿಲುಕದ ಸಾವು : ಪ್ರತಿ ನಿತ್ಯವೂ ಇದೇ ರಸ್ತೆಯಲ್ಲೇ ವಾಕಿಂಗ್‌ ಮತ್ತು ಜಾಗಿಂಗ್‌ ಮಾಡುತ್ತಿದ್ದ ಸ್ನೇಹಿತ ಇಂದು ಸಾವನ್ನಪ್ಪುತ್ತಾನೆ ಎಂದು ಯಾರ ಊಹೆಗೂ ನಿಲುಕದ ಸಾವು ಇದಾಗಿದ್ದು, ಇನ್ನುಳಿದ ಸ್ನೇಹಿತರು ಇಂದು ಇಲ್ಲಿಸ್ನೇಹಿತನನ್ನು ಕಳೆದುಕೊಳ್ಳುತ್ತೇವೆ ಇಲ್ಲಿಕಾಡಾನೆ ದಾಳಿ ನಡೆಯುತ್ತದೆ ಎನ್ನುವ ಎಣಿಕೆ ಕೂಡ ಯಾರಿಗೂ ತಿಳಿದಿರಲಿಲ್ಲ, ಈ ಘಟನೆಯಿಂದ ಜರ್ಜರಿತಾಗಿರುವ ಈತನ ಸ್ನೇಹಿತರು ಇನ್ನು ಮುಂದೆ ಈ ರಸ್ತೆಯಲ್ಲಿಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ: ಮೃತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅರಣ್ಯಾಧಿಕಾರಿಗಳು ಕಾಡಾನೆಯಿಂದ ದಾಳಿಗೊಳಗಾದ ಯುವಕನ ಮೃತ ದೇಹ ಕಂಡು ಆಶ್ಚರ್ಯದಿಂದ ಈ ರಸ್ತೆಯಲ್ಲಿಇಂತಹ ಅವಘಡ ನಡೆದಿರಲಿಲ್ಲ, ಬನ್ನೇರುಘಟ್ಟ ವನ್ಯಜೀವಿ ಧಾಮದಿಂದ ಬಂದ ಕಾಡಾನೆ ದಾಳಿ ನಡೆಸಿದೆ ಎಂದು ಅಂದಾಜಿಸಿ, ಮೃತನ ಸಂಭಂದಿಗಳಿಗೆ 5 ಲಕ್ಷ ದ ಪರಿಹಾರದ ಚೆಕ್‌ ನೀಡಿದ್ದಾರೆ. ಎಸ್‌. ರವಿ ಸಂತಾಪ: ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ. ಘಟನೆಯಿಂದ ಗೋಳಾಡುತ್ತಿದ್ದ ಮೃತನ ಕುಟುಂಬದ ಸದಸ್ಯರು ಮತ್ತು ಗ್ರಾಮದ ಮುಖಂಡರ ಜೊತೆ ಮಾತನಾಡಿ ಅವರಿಗೆ ಪರಿಸ್ಥಿತಿಯ ಮನದಟ್ಟು ಮಾಡಿಸಿ, ಅಳುತಿದ್ದವರಿಗೆ ಧೈರ್ಯ ಹೇಳಿ ಅವರನ್ನು ಸಂತೈಸಿದರು. ಅರಣ್ಯಾಧಿಕಾರಿಗಳಿಗೆ ಕಾಡಾನೆ ಗ್ರಾಮಕ್ಕೆ ಸುಳಿಯದಂತೆ ರೈಲ್ವೆ ಕಂಬಿ ಹಾಕಿಸಿ ಎಚ್ಚರಿಕೆ ವಹಿಸಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚಿಸಿದರು. ಘಟನೆ ಮಾಹಿತಿ ಅರಿತ ಗ್ರಾಮಾಂತರ ಪೋಲಿಸರು, ಸ್ಥಳಕ್ಕೆ ಧಾವಿಸಿ ಮೃತನ ದೇಹದ ಪರಿಶೀಲನೆ ನಡೆಸಿ ನಂತರ ಮೃತನ ಸಂಬಂಧಿಗಳಿಂದ ದೂರು ಪಡೆದು ಮೃತನ ದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡರು. ಸ್ಥಳದಲ್ಲಿಮೃತನ ಸಂಭಂದಿಗಳ ಆಕ್ರೋಶ ಮೇರೆ ಮೀರದಂತೆ ಎಚ್ಚರಿಕೆ ವಹಿಸಿದ್ದ ಪೋಲಿಸರು ಸೂಕ್ರ ಬಂದೋಬಸ್ತ್‌ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು, ಜಿಲ್ಲಾಎ.ಎಸ್‌.ಪಿ ರಾಮ್‌ರಾಜನ್‌ ಸ್ಥಳದಲ್ಲಿಯಾವುದೇ ಅವಘಡಕ್ಕೆ ಅವಕಾಸ ನೀಡದಂತೆ ಎಚ್ಚರಿಕೆ ವಹಿಸಿದ್ದರು.


from India & World News in Kannada | VK Polls https://ift.tt/366vVpz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...