ಬೆಂಗಳೂರು: ಅವಕಾಶಗಳು ಆಗಾಗ ಬರುವುದಿಲ್ಲ ಬಂದಾಗ ಅದರ ಸದುಪಯೋಗ ಪಡೆದುಕೊಳ್ಳಬೇಕು. ಇದು ಬೆಂಗಳೂರಿನ 'ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಕರ್ನಾಟಕ (ಯುವಿಸಿಇ) ಕಾಲೇಜಿನ ಇಬ್ಬರು ಹುಡುಗರ ಯಶೋಗಾಥೆ. ಮೂಲದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ 45.75 ಲಕ್ಷ ವಾರ್ಷಿಕ ಸಂಬಳದ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಂಪನಿಯ ಬೆಂಗಳೂರಿನ ಶಾಖೆಯಲ್ಲಿಯೇ ಈ ವಿದ್ಯಾರ್ಥಿಗಳು ಕೆಲಸ ಆರಂಭಿಸಲಿದ್ದಾರೆ. ಕಂಪನಿಯ ಉತ್ಪನ್ನಗಳು ಸಾಫ್ಟ್ವೇರ್ಗಳ ಮೂಲಕ ಸಮಾಜದ ಮಾನವೀಯತೆಯ ಪ್ರಗತಿಗೆ ಸಹಾಯ ಮಾಡುತ್ತಿವೆ. ಇದು ಯುವಿಸಿಇ, ವಿಶ್ವವಿದ್ಯಾಲಯದ ಚರಿತ್ರೆಯಲ್ಲಿ ಶ್ರೇಷ್ಠ ಸಾಧನೆಯಾಗಿದೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಅಭಿಷೇಕ್ ಕುಮಾರ್ ರೈ ಹಾಗು ಯಶ್ ಎಂ. ಕೊತಾರಿ ಮುಂದಿನ ಆಗಸ್ಟ್ ತಿಂಗಳಿನಲ್ಲಿ ಕೆಲಸಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಅಭಿಷೇಕ್ ಮನದಾಳದ ಮಾತು: " ನನ್ನ ಹೆಸರು ಪಟ್ಟಿಯಲ್ಲಿ ಕಂಡಾಗ ನನ್ನ ಎಲ್ಲ ಪರಿಶ್ರಮ ಸಾರ್ಥಕವಾಯಿತು ಎನಿಸಿತು. ಹ್ಯಾಕಥಾನ್ ಗಳು ಹಾಗು ತಂತ್ರಜ್ಞಾನದ ಅರಿವು ನನಗೆ ಬಹಳ ಸಹಾಯವಾಯಿತು. ಅಧ್ಯಾಪಕರ ತರಗತಿಯ ಬೋಧನೆ ಮತ್ತು ತರಬೇತಿ ಮತ್ತು ಉದ್ಯೋಗ ಕಚೇರಿಯಿಂದ ಪ್ಲೇಸ್ಮೆಂಟ್ ಡ್ರೈವ್ಗಳ ಬಗ್ಗೆ ಉತ್ತಮ ಅರಿ ಮೂಡಿಸಿದ್ದರು. ಜತೆಗೆ ಎಲ್ಲ ಬೇಸಿಕ್ ಅಂಶಗಳನ್ನು ಕಾಲೇಜಿನಲ್ಲಿ ತಿಳಿಸಿಕೊಡಲಾಗಿತ್ತು. ಇದಕ್ಕಾಗಿ ಯುವಿಸಿಸಿಇಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಿಂದ ನನ್ನ ಹೆತ್ತವರು ಹಾಗೂ ಸ್ನೇಹಿತರಿಗೆ ಹೆಮ್ಮೆಯಾಗಿದೆ. ನಾನು ಯುವಿಸಿಇಗೆ ಚಿರಋಣಿ." ಎಂದರು. ಯಶ್ ಹೇಳಿದ್ದೇನು: " ಈ ಅವಕಾಶದಿಂದ ಬಹಳ ಸಂತಸವಾಗಿದೆ. ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್, ಸ್ಪರ್ಧೆಗಳು, ಓಪನ್ ಸೋರ್ಸ್ ಯೋಜನೆಗಳಿಗೆ ಕೊಡುಗೆ ನೀಡುವ ನನ್ನ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದೆ. ಜತೆಗೆ ಶೈಕ್ಷಣಿಕವಾಗಿಯೂ ಉತ್ತಮ ಅಂಕ ಗಳಿಸಿದ್ದೇನೆ. ಈ ಅದ್ಭುತ ಅವಕಾಶವನ್ನು ನನಗೆ ಒದಗಿಸಿದ್ದಕ್ಕಾಗಿ ನಾನು ಯುವಿಸಿಇಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಪ್ರಯತ್ನಗಳಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಪೋಷಕರು,ಕಾಲೇಜಿನ ಶಿಕ್ಷಕರು ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ." ಯುವಿಸಿಇಗೆ ಈಗಾಗಲೇ 60 ಕಂಪನಿಗಳು ಭೇಟಿ ನೀಡಿದೆ ಮತ್ತು ಇಂದಿನ ಅಂಕಿಅಂಶಗಳ ಪ್ರಕಾರ 347 ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಕೊಡಲಾಗಿದೆ. ಸಿಎಸ್ಇ ಮತ್ತು ಐಎಸ್ಇ ಶಾಖೆಗಳು ಸುಮಾರು 80% ಉದ್ಯೋಗಗಳೊಂದಿಗೆ ಅಗ್ರಸ್ಥಾನದಲ್ಲಿವೆ. ತರಬೇತಿ ಮತ್ತು ಉದ್ಯೋಗ ಕಚೇರಿ 2019-20ರ ಶೈಕ್ಷಣಿಕ ವರ್ಷದ ಅಂತ್ಯದ ವೇಳೆಗೆ ಇನ್ನೂ 60 ಕ್ಕೂ ಹೆಚ್ಚು ಕಂಪನಿಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆಯಿದೆ ಮತ್ತು 100% ನಿಯೋಜನೆಗಳಿಗಾಗಿ ಶ್ರಮಿಸುತ್ತಿದೆ. ಐಐಟಿಗಿಂತಲೂ ಹಳೆಯ ಸಂಸ್ಥೆ ಯುವಿಸಿಇ ಐಐಟಿಗಳಿಗಿಂತ 50 ವರ್ಷ ಹಳೆಯದು ಮತ್ತು ಗಮನಾರ್ಹ ಹಳೆಯ ವಿದ್ಯಾರ್ಥಿಗಳನ್ನು ಉತ್ಪಾದಿಸಿದೆ ಮತ್ತು ಅವರಲ್ಲಿ ಅನೇಕರು ಭಾರತ ಸರ್ಕಾರದಿಂದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಯುವಿಸಿಸಿಇಯನ್ನು ಶೀಘ್ರದಲ್ಲಿಯೇ ಸ್ವಾಯತ್ತ ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕೆಂಬುದು ಅವರ ಅಭಿಪ್ರಾಯ." ಎಂದು ಪ್ರೊ.ವೇಣುಗೋಪಾಲ್ ಕೆ ಆರ್ ಸಂತೋಷ ವ್ಯಕ್ತಪಡಿಸಿದರು. ಉಪಕುಲಪತಿ ಪ್ರೊ.ವೇಣುಗೋಪಾಲ್ ಕೆ ಆರ್, ಪ್ರಾಂಶುಪಾಲ ಪ್ರೊ.ಎಚ್. ಎನ್ ರಮೇಶ್ ಮತ್ತು ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರೊ.ಬಿ.ಎಂ.ರಾಜಪ್ರಕಾಶ್ ಅವರು ಇಂತಹ ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆದಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
from India & World News in Kannada | VK Polls https://ift.tt/2LiVOK7