ಮಂಗಳೂರು ಹಾಸ್ಟೆಲ್‌ ವಿದ್ಯಾರ್ಥಿಗಳ ಗಲಾಟೆ ಪ್ರಕರಣ; ಬಂಧಿತ ನಾಲ್ವರು ಡ್ರಗ್ಸ್‌ ಸೇವಿಸಿರೋದು ದೃಢ

ಮಂಗಳೂರು: ನಗರದ ಮೋರ್ಗನ್ಸ್‌ ಗೇಟ್‌ ಗುಜ್ಜರಕೆರೆ ಬಳಿಯ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ಸಂಭವಿಸಿದ ಹೊಡೆದಾಟ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳ ಮೂಲದ 8 ಮಂದಿ ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ನಾಲ್ಕು ಮಂದಿ ಆರೋಪಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ. ಕೇರಳದ ವಿಮಲ್‌ ರಾಜ್‌ (20), ಮುಹಮ್ಮದ್‌ ಸಿ. (20), ಶಾರಿದ್‌ (20), ಕಾನೆ ಜಾನ್ಸನ್‌ (19), ಫಹಾದ್‌ ಮುನಾಫ್‌ (21), ಅಬು ತಾಹಿರ್‌ (23), ಮುಹಮ್ಮದ್‌ (21), ಆದಶ್‌ರ್‍ (21) ಬಂಧಿತ ಆರೋಪಿಗಳು. ಈಗಾಗಲೇ ಡ್ರಗ್ಸ್‌ ಸೇವನೆ ದೃಢಪಟ್ಟಿರುವ ಆರೋಪಿ ವಿದ್ಯಾರ್ಥಿಗಳು ವಿಚಾರಣೆ ವೇಳೆ ತಿಳಿಸಿರುವಂತೆ ಇನ್ನೂ ಸುಮಾರು ಮಂದಿ ವಿದ್ಯಾರ್ಥಿಗಳು ಡ್ರಗ್ಸ್‌ ಸೇವನೆ ಹಾಗೂ ಇವರಿಗೆ ಪೂರೈಕೆ ಮಾಡುವವವರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಶನಿವಾರ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿ ನಾಯಕರು, ಅಲ್ಲಿ ಪೊಲೀಸರು ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸಿದ್ದಾರೆಂಬ ಬಗ್ಗೆಯೂ ಆರೋಪಿಸಿದ್ದಾರೆ. ಈ ಎಲ್ಲ ಅಂಶಗಳ ಕುರಿತಂತೆಯೂ ಕೂಲಂಕುಶ ತನಿಖೆ ನಡೆಯಲಿದೆ ಎಂದರು. ಹಾಸ್ಟೆಲ್‌ಗೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆಂಬ ಆರೋಪ ಸರಿಯಲ್ಲ. ಕೊಲೆ ಯತ್ನದಂತಹ ಪ್ರಕರಣ ನಡೆದಾಗ ಯಾವುದೇ ಸಂಸ್ಥೆ, ಸ್ಥಳಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಲು ಕಾನೂನಿನಲ್ಲಿ ಪೊಲೀಸರಿಗೆ ಅವಕಾಶವಿರುತ್ತದೆ. ಅದರಂತೆ ಅಧಿಕಾರಿ ಸಿಬ್ಬಂದಿ ಅಲ್ಲಿನ ಹಾಸ್ಟೆಲ್‌ ವಾರ್ಡನ್‌ಗೆ ಪರಿಚಯಿಸಿಕೊಂಡೇ ಹೋಗಿದ್ದಾರೆ ಎಂದು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಹೇಳಿದರು. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈಗಾಗಲೇ ಆಯಾ ಠಾಣಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್‌ ಹಾಗೂ ರಾಗಿಂಗ್‌ ಬಗ್ಗೆ ಸಭೆ ನಡೆಸಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಈಗಾಗಲೇ ಮಂಗಳೂರು ಉತ್ತರ, ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯ ಆರಂಭವಾಗಿದೆ. ಮುಂದಿನ ವಾರದಿಂದ ಮಂಗಳೂರು ಸೆಂಟ್ರಲ್‌ ಠಾಣೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿಯೂ ಜಾಗೃತಿ ಸಭೆ ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ಕಾಲೇಜು, ಕ್ಯಾಂಪಸ್‌ನಲ್ಲಿ ಡ್ರಗ್ಸ್‌ ಸೇವನೆ, ಪೂರೈಕೆ ಮಾಡುವ ಕುರಿತಂತೆ ಕಾಲೇಜು ಆಡಳಿತ ಮಂಡಳಿಗಳು ಕೂಡಾ ನಿಗಾ ವಹಿಸಬೇಕು ಎಂದು ಎನ್‌.ಶಶಿಕುಮಾರ್‌ ತಿಳಿಸಿದರು. ಪ್ರಕರಣದ ವಿವರ: ಕೇರಳ ಮೂಲದ, 3ನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್‌ ವಿದ್ಯಾರ್ಥಿ ಆದರ್ಶ ಪ್ರೇಮ್‌ಕುಮಾರ್‌ ಎಂಬಾತ ಡಿ.2ರಂದು ರಾತ್ರಿ ಸ್ನೇಹಿತ ಅಭಿರಾಮನನ್ನು ಭೇಟಿ ಮಾಡಲು ಬಂದಿದ್ದಾನೆ. ಈ ಸಂದರ್ಭ ಸಿನಾನ್‌ ಮತ್ತು ಪ್ರೇಮ್‌ಕುಮಾರ್‌ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು, ಸಿನಾನ್‌ ಮತ್ತು ಇತರ 8 ಮಂದಿ ಇಂಟರ್‌ಲಾಕ್‌ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಿಷಯ ತಿಳಿದು ಪಾಂಡೇಶ್ವರ ಪಿಎಸ್‌ಐ ಶೀತಲ್‌ ಹಾಗೂ ಸಿಬ್ಬಂದಿ ಹಾಸ್ಟೆಲ್‌ ಬಳಿ ಹೋದಾಗ ಹಾಸ್ಟೆಲ್‌ನ ವಿದ್ಯಾರ್ಥಿಗಳು ಇಂಟರ್‌ಲಾಕ್‌, ಕಲ್ಲುಹಾಗೂ ಕುರ್ಚಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ. ಸೆಕ್ಯೂರಿಟಿ ರೂಂನ ಗಾಜು, ಅಲ್ಲಿದ್ದ ಸೊತ್ತುಗಳನ್ನು ವಿದ್ಯಾರ್ಥಿಗಳು ಹಾಳುಗೆಡವಿದ್ದಾರೆ. ಸೆಕ್ಯೂರಿಟಿ ರೂಂ ಎದುರಿದ್ದ ಕುರ್ಚಿಗಳು, ಹಾಸ್ಟೆಲ್‌ ಕಟ್ಟಡದ ಮೇಲಿನಿಂದ ಕೆಲವೊಂದು ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ರಾತ್ರಿ ಘಟನೆ ನಡೆಯುತ್ತಿದ್ದ ಸಂದರ್ಭ ಹೊರಗೆ ನೋಡುತ್ತಿದ್ದ ತಮ್ಮ ಮೇಲೆ ಕಲ್ಲು, ವಸ್ತುಗಳನ್ನು ಎಸೆದಿರುವುದಾಗಿಯೂ ಸ್ಥಳೀಯರು ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3lAmFDO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...