ರೈತರಿಗೆ ಅಳತೆ ಮೀರಿದ ಮೋಸ; ಹತ್ತಿ ತೂಕದಲ್ಲಿ ಗೋಲ್ ಮಾಲ್; ವಂಚನೆ ಬಯಲಿಗೆಳೆದ ಯಾದಗಿರಿ ರೈತ!

ಮಲ್ಲಪ್ಪ ಸಂಕೀನ್‌, ಯಾದಗಿರಿ: ವರ್ಷವಿಡೀ ಬೆವರು ಸುರಿಸಿ ಬೆಳೆದ ಬೆಳೆ ಮಾರಾಟ ಮಾಡುವಾಗ ವೇ ಬಿಡ್ಜ್‌ಗಳಲ್ಲಿನ ತೂಕದಲ್ಲಿ ಮೋಸ ಆಗುತ್ತಿರುವುದು ಬಯಲಾಗಿರುವ ಪರಿಣಾಮ ಬೆಳೆದ ಅನ್ನದಾತರಿಗೆ ದಿಗಿಲು ಬಡಿದಂತಾಗಿದೆ. ತೂಕದಲ್ಲಿ ಅನ್ಯಾಯ ಮಾಡುತ್ತಿರುವುದನ್ನು ಗುರುಮಠಕಲ್‌ ತಾಲೂಕಿನ ಯಲ್ಹೇರಿ ಗ್ರಾಮದ ಭೀಮರಾಯ ಅವರೇ ಬಯಲು ಮಾಡಿದ್ದಾರೆ. ಇದನ್ನು ನೋಡಿ ಅವರು ಕಂಗಾಲು ಆಗಿರುವುದು ಮಾತ್ರವಲ್ಲದೇ ಶಾಕ್‌ ಆಗಿದೆ. ಇದಕ್ಕೆ ಲಗಾಮು ಹಾಕಬೇಕಾದ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿರುವುದು ನಿಜಕ್ಕೂ ಸಹ ಅಚ್ಚರಿ ಮೂಡಿಸಿರುವುದು ಮಾತ್ರವಲ್ಲದೇ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತೂಕ-ಬೆಲೆ ಎರಡೂ ಕಡಿಮೆ ರೈತ ಭೀಮರಾಯ ಅವರು ಹತ್ತಿ ಮಾರಾಟ ಮಾಡಲು ಟಾಟಾ ಏಸ್‌ ವಾಹನದೊಳಗೆ ತುಂಬಿಕೊಂಡು ಯಾದಗಿರಿಗೆ ಬಂದಿದ್ದಾರೆ. ಇಲ್ಲಿನ ಗಂಜ್‌ ಪ್ರದೇಶದ ಬಳಿಯಿರುವ ಕಾಟನ್‌ ಮಿಲ್‌ವೊಂದಕ್ಕೆ ಹತ್ತಿ ಮಾರಾಟ ಮಾಡಲು ಕಾಟ ಮಾಡಿಸಿದ್ದಾರೆ. ಮೊದಲಿಗೆ ಮಾಡಿಸಿದ ವೇ ಬ್ರಿಡ್ಜ್‌ನಲ್ಲಿ ವಾಹನ ಸಮೇತ ತೂಕ 1,635 ಕೆಜಿ ಆಗಿದೆ. ಇದಲ್ಲದೇ ಇವರು ಕ್ವಿಂಟಾಲ್‌ ಹತ್ತಿಗೆ 7,300 ರೂ. ದರ ನಿಗದಿ ಮಾಡಿದ್ದಾರೆ. ಮೊದಲೇ ಕಾಟದಲ್ಲಿ ಅನುಮಾನ ಬಂದಿದೆ. ಇದಲ್ಲದೇ ದರ ಕೂಡ ಕಡಿಮೆ ಮಾಡಿರುವ ಪರಿಣಾಮ ಅನ್ನದಾತನಿಗೆ ಅನುಮಾನ ಬಂದಿದೆ. ಹತ್ತಿ ಮಾರಾಟ ಮಾಡುವುದಿಲ್ಲ ಎಂದು ಅವರಿಗೆ ಹೇಳಿ ಬೇರೆ ಮಿಲ್‌ಗೆ ಹೋಗಿದ್ದಾರೆ. ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಇನ್ನೊಂದು ಹತ್ತಿ ಮಿಲ್‌ಗೆ ಹೋಗಿದ್ದಾನೆ. ಅಲ್ಲಿ ವಾಹನ ಸಮೇತ ತೂಕ ಮಾಡಿಸಲಾಗಿದೆ. 1,665 ಕೆಜಿ ತೂಕ ಬಂದಿದೆ. ಮೊದಲು ಮಾಡಿಸಿದ್ದ ವೇ ಬ್ರಿಡ್ಜ್‌ನಲ್ಲಿ 1,635 ಕೆಜಿ ಬಂದಿತ್ತು. ಇಲ್ಲಿ ನೋಡಿದರೇ 30 ಕೆಜಿ ಹೆಚ್ಚಿಗೆ ಬಂದಿದೆ. ಇದರಿಂದಾಗಿ ರೈತನಿಗೆ ಮೋಸ ಮಾಡುತ್ತಿರುವುದು ಗೊತ್ತಾಗಿದೆ. ಅಲ್ಲದೇ ಎರಡನೇ ಬಾರಿಗೆ ಮಾಡಿಸಿದ ತೂಕದಲ್ಲಿ ಹೆಚ್ಚಿಗೆ ಬಂದಿರುವುದು ಮಾತ್ರವಲ್ಲದೇ ಕಾಟನ್‌ ಮಿಲ್‌ ಮಾಲೀಕರು ಕ್ವಿಂಟಾಲ್‌ ಹತ್ತಿಗೆ 7.750 ರೂ. ದರ ನಿಗದಿ ಮಾಡಿದ್ದಾರೆ. ಇಲ್ಲಿ ಬೆಲೆ ಕೂಡ ಜಾಸ್ತಿ ಬಂದಿರುವುದು ಅಲ್ಲದೇ ತೂಕ ಕೂಡ ಹೆಚ್ಚಿಗೆ ಬಂದಿದ್ದ ಪರಿಣಾಮ ರೈತ ಭೀಮರಾಯ ಹತ್ತಿ ಮಾರಾಟ ಮಾಡಿ ಹೋಗಿದ್ದಾನೆ. ಆದರೆ ಮೊದಲಿಗೆ ಮಾಡಿಸಿದ್ದ ತೂಕದಲ್ಲಿ ಆಗುತ್ತಿದ್ದ ಮೋಸ ಬಯಲಿಗೆ ಎಳೆದಿದ್ದಾನೆ. ಆದರೆ ಒಂದು ಮಾತ್ರ ಪ್ರಕರಣ ಬೆಳಕಿಗೆ ಬಂದಿದೆ. ಎಷ್ಟೊಂದು ಪ್ರಮಾಣದಲ್ಲಿ ಮೋಸ ಆಗಿದೆ ಎಂಬುದು ತನಿಖೆ ನಡೆಸಿದಾಗಲೇ ಬಯಲಿಗೆ ಹೊರ ಬೀಳಲಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಿ ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 35ರಿಂದ 40 ವೇ ಬ್ರಿಡ್ಜ್‌ಗಳು ಅನುಮತಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ ಅನಧಿಕೃತವಾಗಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿವೇ ಬ್ರಿಡ್ಜ್‌ಗಳು ನಾಯಿ ಕೊಡೆಯಂತೆ ಬೆಳೆದು ನಿಂತಿವೆ. ತೂಕದಲ್ಲಿ ಮೋಸ ಕೂಡ ಆಗುತ್ತಿರುವುದು ಬೆಳಕಿಗೆ ಬಂದಿದೆ. ಇಲಾಖೆಯ ಅಧಿಕಾರಿಗಳು ಇವುಗಳ ಮೇಲೆ ಯಾವ ರೀತಿಯಿಂದ ಕೈಗೊಳ್ಳಲಿದ್ದಾರೆಂಬುದು ಕಾದು ನೋಡಬೇಕಿದೆ.


from India & World News in Kannada | VK Polls https://ift.tt/3lwZDxm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...