'ಓಮಿಕ್ರಾನ್ ನಿಜಕ್ಕೂ ಅಪಾಯಕಾರಿ ಅಲ್ಲ': ಬೆಂಗಳೂರಿನ ಮೊದಲ ಸೋಂಕಿತ ವೈದ್ಯರ ಅನುಭವ

ಬೆಂಗಳೂರು: ಭಾರತದ ಮೊದಲ ಇಬ್ಬರು ಸೋಂಕಿತರಲ್ಲಿ ಒಬ್ಬರಾದ ಯಾವುದೇ ಪ್ರಯಾಣ ಇತಿಹಾಸ ಇಲ್ಲದ ಬೆಂಗಳೂರಿನ 46 ವರ್ಷದ , ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈವರೆಗೂ ತಮ್ಮಲ್ಲಿ ಯಾವುದೇ ರೀತಿ ಕೆಟ್ಟ ಅಥವಾ ಭಯ ಹುಟ್ಟಿಸುವ ಅನುಭವ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಬಂದಿರುವುದಕ್ಕಿಂತಲೂ ತಮ್ಮ ಮನೆಯನ್ನು ಸೀಲ್ ಡೌನ್ ಮಾಡಿರುವುದರಿಂದ ಉಂಟಾಗಿರುವ ಕಳಂಕವೇ ಹೆಚ್ಚು ನೋವು ಉಂಟುಮಾಡುತ್ತಿದೆ ಎಂದು ಅವರು ಬೇಸರ ಹಂಚಿಕೊಂಡಿದ್ದಾರೆ. ಹೊಸ ಕೊರೊನಾ ವೈರಸ್ ತಳಿ ಬಗ್ಗೆ ಆತಂಕ ಪಡುವ ಅಗತ್ಯವೇ ಇಲ್ಲ ಎಂದು ಅವರು ತಿಳಿಸಿದ್ದಾರೆ. ತಮ್ಮಲ್ಲಿ ಮೊದಲು ರೋಗ ಲಕ್ಷಣಗಳು ಕಂಡುಬಂದಾಗ ಉದ್ವೇಗಕ್ಕೆ ಒಳಗಾಗದೆ ಇರುವಂತೆ ತಮಗೆ ತಾವು ಹೇಳಿಕೊಂಡರು. ಕೂಡಲೇ ಪರೀಕ್ಷೆಗೆ ಒಳಪಟ್ಟರು. ಸ್ವಯಂ ಐಸೋಲೇಟ್ ಆಗಿ, ಚಿಕಿತ್ಸೆಗೆ ಒಳಗಾದರು. ಅವರ ಪತ್ನಿ ಹಾಗೂ ಮಕ್ಕಳು ಕೂಡ ಮನೆಯಲ್ಲಿ ಕ್ವಾರೆಂಟೈನ್ ಆಗಿದ್ದರು. ತಾವೀಗ ಸಂಪೂರ್ಣವಾಗಿ ಹುಷಾರಾಗಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ಅವರು ಮುಂಜಾಗ್ರತಾ ಕ್ರಮವಾಗಿ ಇನ್ನೂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇದ್ದಾರೆ. ವಿಪರೀತ ಮೈ ಕೈ ನೋವು, ಶೀತ ಮತ್ತು ಸಣ್ಣನೆಯ ಜ್ವರ ತಮಗೆ ಉಂಟಾದ ಲಕ್ಷಣಗಳು. ಆದರೆ ಉಸಿರಾಟದ ಸಮಸ್ಯೆ ಉಂಟಾಗಲಿಲ್ಲ. ಚಿಕಿತ್ಸೆಯುದ್ದಕ್ಕೂ ಆಮ್ಲಜನಕ ಉಸಿರಾಟದ ಪ್ರಮಾಣ ಸಹಜ ಮಟ್ಟದಲ್ಲಿಯೇ ಇತ್ತು ಎಂದು ಹೇಳಿದ್ದಾರೆ. ಲಕ್ಷಣಗಳು ಹೇಗಿದ್ದವು?ನ. 21ರ ರಾತ್ರಿ ಮೈ ಕೈ ನೋವು ಹಾಗೂ ಸಣ್ಣನೆ ಜ್ವರ ಆರಂಭವಾಗಿತ್ತು. ಮರು ದಿನ ತಮ್ಮದೇ ಆಸ್ಪತ್ರೆಯ ಲ್ಯಾಬ್‌ನಲ್ಲಿ ಆರ್‌ಎಟಿ ಮತ್ತು ಆರ್‌ಟಿಪಿಸಿಆರ್ ಸ್ವಾಬ್ ಮಾದರಿಗಳನ್ನು ನೀಡಿದ್ದರು. ಎರಡರಲ್ಲಿಯೂ ಪಾಸಿಟಿವ್ ಬಂದಿತ್ತು. ಶೀತ, ಕೆಮ್ಮು ಅಥವಾ ಉಸಿರಾಟದ ಸಮಸ್ಯೆ ಇರಲಿಲ್ಲ. ಜ್ವರ ಕೂಡ 100 ಡಿಗ್ರಿ ಫ್ಯಾರನ್‌ಹೀಟ್ ಇತ್ತಷ್ಟೇ, ಮೂರು ದಿನ ಹೋಮ್ ಐಸೋಲೇಷನ್‌ನಲ್ಲಿದ್ದಾಗ ತಲೆ ಸುತ್ತುವಿಕೆ ಅನುಭವ ಆಗತೊಡಗಿತು. ಕುಟುಂಬದವರೊಗೆ ತೊಂದರೆ ಆಗಬಾರದು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾದರು. ಸಾಮಾನ್ಯ ಕೋವಿಡ್ ರೋಗಿಯಲ್ಲಿ ಇರುವ ಆಕ್ಸಿಜನ್ ಮಟ್ಟ ಹಾಗೂ ಜ್ವರ ಮುಂದುವರಿದಿತ್ತು. ಒಂದೇ ದಿನಕ್ಕೆ ಲಕ್ಷಣ ಮಾಯ!ನ. 25ರಂದು ಮೋನೋಕ್ಲೊನಾಲ್ ಆಂಟಿಬಾಡಿಗಳನ್ನು ನನಗೆ ನೀಡಿದ್ದರು. ಅದರಿಂದ ಭಾರಿ ಬದಲಾವಣೆಯಾಗಿತ್ತು. ಮರುದಿನ ನನ್ನಲ್ಲಿ ಯಾವುದೇ ಲಕ್ಷಣಗಳು ಇರಲಿಲ್ಲ. ನನಗೆ ಕೋವಿಡ್ ಬಂದಿರಲೇ ಇಲ್ಲ ಎನಿಸಿತ್ತು ಎಂದು ಅವರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ವೈರಾಣು ತಜ್ಞರು, ಕಾಕ್‌ಟೇಲ್ ಚಿಕಿತ್ಸೆ ಎಂದೇ ಕರೆಯುವ ಮೋನೋಕ್ಲೊನಾಲ್ ಆಂಟಿಬಾಡಿಗಳಿಗೆ ಓಮಿಕ್ರಾನ್ ಸ್ಪಂದಿಸುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಮನೆಯವರಲ್ಲಿಯೂ ಕೋವಿಡ್ಅವರು ಆಸ್ಪತ್ರೆ ವಾಸ ಮುಂದುವರಿಸಿದ್ದಾಗ, ವೈದ್ಯೆಯಾಗಿರುವ ಅವರ ಪತ್ನಿಯಲ್ಲಿ ಕೂಡ ನ. 26ರಂದು ಅದೇ ರೀತಿ ಲಕ್ಷಣಗಳು ಬರತೊಡಗಿದವು. ಅದೇ ದಿನ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಅವರ ಹಿರಿ ಮಗಳಲ್ಲಿ ಆರ್‌ಎಟಿ ಪಾಸಿಟಿವ್ ಬಂದರೂ, ಕಿರಿಯ ಮತ್ತು ಹಿರಿಯ ಮಗಳ ಆರ್‌ಟಿ ಪಿಸಿಆರ್ ವರದಿ ನೆಗೆಟಿವ್ ಬಂದಿತ್ತು. ಈ ವೈದ್ಯರು ನ. 29ರಂದು ಬಿಡುಗಡೆಯಾಗಿದ್ದರು. ಮೊದಲ ಲಕ್ಷಣ ಕಂಡುಬಂದ 12ನೇ ದಿನ (ಡಿ. 3) ಯಾವುದೇ ಲಕ್ಷಣಗಳು ಇಲ್ಲ. ಆದರೆ ಓಮಿಕ್ರಾನ್ ತಳಿ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಗುರುವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೆಂಡತಿ ಮತ್ತು ಮಕ್ಕಳು ಕೂಡ ಅದೇ ಆಸ್ಪತ್ರೆಯಲ್ಲಿದ್ದಾರೆ. ಕುಟುಂಬದವರ ಪರೀಕ್ಷೆಈ ವೈದ್ಯರ ಪತ್ನಿ ಸೇರಿದಂತೆ ಐವರು ನೇರ ಸಂಪರ್ಕಿತರ ಜೆನೋಮ್ ಸೀಕ್ವೆನ್ಸಿಂಗ್ ವರದಿಗಳಿಗಾಗಿ ಕಾಯಲಾಗುತ್ತಿದೆ. ಬುಧವಾರದಂದು ಬಿಬಿಎಂಪಿ ವೈದ್ಯರ ಪೋಷಕರು, ಸಹೋದರರು ಸೇರಿದಂತೆ ಅದೇ ಕಟ್ಟಡದಲ್ಲಿ ವಾಸಿಸುತ್ತಿರುವ ಅವರ ಕುಟುಂಬದ ಇತರರನ್ನು ಕೂಡ ಪರೀಕ್ಷೆಗೆ ಒಳಪಡಿಸಿದೆ. 'ಓಮಿಕ್ರಾನ್ ಈಗಾಗಲೇ ಸಮುದಾಯದ ನಡುವೆ ಹರಡಿದೆ ಎಂದು ನನಗೆ ಅನಿಸುತ್ತಿದೆ. ಅದು ಮೊದಲು ನನ್ನಲ್ಲಿ ಪತ್ತೆಯಾಗಿರಬಹುದು. ನನಗೆ ಅದು ಎಲ್ಲಿಂದ ಬಂದಿತೋ ಗೊತ್ತಿಲ್ಲ. ನಮಗೆ ಓಮಿಕ್ರಾನ್ ಬಗ್ಗೆ ಹೆಚ್ಚು ತಿಳಿದಿಲ್ಲ. ಕಳೆದ 12 ದಿನಗಳಲ್ಲಿನ ನನ್ನ ಅನುಭವದ ಪ್ರಕಾರ ಅದು ಅಪಾಯಕಾರಿಯಾಗಿ ಕಾಣಿಸುತ್ತಿಲ್ಲ. ಹೀಗಾಗಿ ಕಳವಳ ಪಡಬೇಕಿಲ್ಲ. ಆದರೆ ನಾವು ಎಚ್ಚರಿಕೆಯಿಂದ ಇರುವುದು ಮುಖ್ಯ. ಕೆಲವು ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವಂತೆ ಆಗಬಹುದು. ಆದರೂ ಇದು ಜೀವಕ್ಕೆ ಅಪಾಯಕಾರಿಯಲ್ಲ' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/32SnzVv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...