ಮತಾಂತರ ನಿಷೇಧ ಕಾಯಿದೆ ಮೂಲಕ ಮತದಾರರ ಸೆಳೆಯಲು ಬಿಜೆಪಿ ಯತ್ನ: ಸಿದ್ದರಾಮಯ್ಯ ಆಕ್ರೋಶ

: ಈಗ ಮತದಾರರನ್ನು ಸೆಳೆಯಲು ಯಾವುದೇ ವಿಷಯಗಳು ಬತ್ತಳಿಕೆಯಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯಿದೆ ಕುರಿತು ಮಾತನಾಡಿ ಹಾದಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮತಾಂತರ ನಿಷೇಧ ಕಾಯಿದೆ ಅನಗತ್ಯ. ತಮ್ಮ ಮತವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಸಂವಿಧಾನದಲ್ಲಿಯೇ ಇದೆ. ಅದನ್ನು ತಡೆಯುವುದು ಸಂವಿಧಾನಕ್ಕೆ ವಿರುದ್ಧವಾದುದು. ಒಂದು ವೇಳೆ ಬಲವಂತದಿಂದ ಮತಾಂತರ ಮಾಡುತ್ತಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ಮತಾಂತರವನ್ನೇ ನಿಷೇಧ ಮಾಡುವುದು ಎಷ್ಟು ಸರಿ? ಇದು ಮುಸ್ಲಿಮರು ಹಾಗೂ ಕ್ರೈಸ್ತರ ವಿರುದ್ಧ ತರುತ್ತಿರುವ ಕಾನೂನು' ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ಅವಧಿಯೂ ತನಿಖೆಯಾಗಲಿ: ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗುತ್ತಿಗೆದಾರರ ಸಂಘ ಮಾಡಿರುವ ಆರೋಪವೇ ಸಾಕ್ಷಿ. ಅವರ ಆರೋಪದ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಬೇಕು. ನನ್ನ ಕಾಲದಲ್ಲಿಯೂ ಕಮಿಷನ್‌ ಇರಲಿಲ್ಲವೇ ಎಂದು ಮುಖ್ಯಮಂತ್ರಿ ಕೇಳಿದ್ದಾರೆ. ನನ್ನ ಅವಧಿಯನ್ನೂ ಸೇರಿಸಿ ತನಿಖೆಗೆ ಒಳಪಡಿಸಲಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. 'ಡಿಕೆಶಿ-ನಾನು ಅನ್ಯೋನ್ಯವಾಗಿದ್ದೇವೆ' 'ನನ್ನ ಹಾಗೂ ಡಿ. ಕೆ. ಶಿವಕುಮಾರ್‌ ಸಂಬಂಧ ಸರಿ ಇಲ್ಲ ಎನ್ನುವುದಕ್ಕೆ ದಾಖಲೆ ಕೊಟ್ಟು ಆರೋಪ ಮಾಡಲಿ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 'ನಾವು ಸರಿ ಇಲ್ಲ ಎಂದು ಹೇಳಿದವರು ಯಾರು? ಬಿಜೆಪಿಯವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಆರೋಪ ಮಾಡುವವರು ದಾಖಲೆ ಕೊಡಬೇಕು. ನಾನು ಹಾಗೂ ಶಿವಕುಮಾರ್‌ ಅನ್ಯೋನ್ಯತೆಯಿಂದ ಇದ್ದೇವೆ' ಎಂದು ಹೇಳಿದರು. 'ಮೇಕೆದಾಟು ಯೋಜನೆ ಕುರಿತು ಡಿಪಿಆರ್‌ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದವರೇ ನಾವು. ಪಾದಯಾತ್ರೆ ಮೂಲಕ ಒತ್ತಡ ಹೇರಲು ಎಲ್ಲರು ಸೇರಿಯೇ ನಿರ್ಧರಿಸಿದ್ದೇವೆ. ನಾನೂ ಪಾಲ್ಗೊಳ್ಳುತ್ತೇನೆ. ಇದರಲ್ಲಿ ಯಾರದ್ದೂ ಪ್ರತಿಷ್ಠೆ ಇಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿ, ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಅದಕ್ಕೆ ಅಭಿಪ್ರಾಯ ಹೇಳುತ್ತಾರೆ. ಸಮಸ್ಯೆಗಳಿದ್ದಲ್ಲಿ ನಾವು ಬಗೆಹರಿಸಿಕೊಳ್ಳುತ್ತೇವೆ' ಎಂದರು. ಎಚ್‌ಡಿಕೆ ಹುಳುಕು ಮುಚ್ಚಿಕೊಳ್ಳಲು ಯತ್ನ 'ನನಗೆ ಕುಮಾರಸ್ವಾಮಿ ಮೇಲಾಗಲಿ, ಅವರ ಕುಟುಂಬದವರ ಮೇಲಾಗಲಿ ಅಥವಾ ಯಾರೊಬ್ಬರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ನಾನು 'ಇಶ್ಯೂ'ಗಳ ಮೇಲೆ ಆರೋಪ ಅಥವಾ ಟೀಕೆ ಮಾಡುತ್ತೇನೆ. ಸಿದ್ದಾಂತಗಳ ಕುರಿತು ನಮ್ಮ ಭಿನ್ನಾಭಿಪ್ರಾಯವಿದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದೆ ಕುಮಾರಸ್ವಾಮಿ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಟೀಕಿಸುತ್ತಾರೆ. ಅವರದ್ದು ಜನತಾ ದಳ ಜಾತ್ಯತೀತ ಪಕ್ಷ ಎಂದಾದರೆ ಬಿಜೆಪಿ ಜೊತೆ ಸೇರಿ ಹೇಗೆ ಸರಕಾರ ರಚನೆ ಮಾಡಿದರು? ಒಂದೆಡೆ ಆರ್‌ಎಸ್‌ಎಸ್‌ ಟೀಕೆ ಮಾಡುತ್ತಾರೆ. ಮತ್ತೊಂದೆಡೆ ಅವರೊಂದಿಗೆ ಸೇರಿಕೊಳ್ಳುತ್ತಾರೆ' ಎಂದು ದೂಷಿಸಿದರು. ಶ್ರೀನಿವಾಸ್‌ ಪ್ರಸಾದ್‌ ಹೆಚ್ಚು ಕಾಲ ಬದುಕಲಿ 'ನಾನು ಹಾಗೂ ಜಿ. ಟಿ. ದೇವೇಗೌಡ ಒಂದೇ ವೇದಿಕೆಯಲ್ಲಿಇದ್ದ ಕುರಿತು ಶ್ರೀನಿವಾಸ್‌ ಪ್ರಸಾದ್‌ ಆಕ್ಷೇಪಿಸಿದ್ದಾರೆ. ಶ್ರೀನಿವಾಸ್‌ ಪ್ರಸಾದ್‌ರಿಗೆ ಕೋಮುವಾದಿ ಪಕ್ಷದ ಜೊತೆ ಸೇರಿ ಇನ್ನೊಂದು ಪಕ್ಷವನ್ನು ಟೀಕೆ ಮಾಡುವ ನೈತಿಕತೆ ಇಲ್ಲ. ಅಂಬೇಡ್ಕರ್‌ ಅವರು ಕೋಮುವಾದಿ ಪಕ್ಷದೊಂದಿಗೆ ಸೇರಿಕೊಳ್ಳಿ ಎಂದು ಹೇಳಿದ್ದರಾ? ಜನತಾ ಪಾರ್ಟಿ, ಲೋಕಶಕ್ತಿ, ಜೆಡಿಯು, ಜೆಡಿಎಸ್‌, ಕಾಂಗ್ರೆಸ್‌ ಹೋಗಿ ಇದೀಗ ಬಿಜೆಪಿಯಲ್ಲಿದ್ದಾರೆ. ಅವರಿಂದ ನಾನು ಪಾಠ ಕಲಿಯಬೇಕಾ? ಅವರ ಆರೋಗ್ಯ ಚೆನ್ನಾಗಿಲ್ಲ. ಬೇಗ ಗುಣ ಮುಖರಾಗಲಿ, ಇನ್ನೂ ಹೆಚ್ಚು ಕಾಲ ಬದುಕಿರಲಿ' ಎಂದರು.


from India & World News in Kannada | VK Polls https://ift.tt/3lMnLwq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...